ಮೆಸೇಜಿಂಗ್ ಆ್ಯಪ್ ಮೂಲಕ ಆನ್ಲೈನ್ ವಂಚನೆ; ವ್ಯಕ್ತಿಯೊಬ್ಬರಿಂದ 15.5 ಲಕ್ಷ ರೂ ದೋಚಿದ ದುಷ್ಕರ್ಮಿ
ಉಡುಪಿ: ಮೆಸೇಜಿಂಗ್ ಆ್ಯಪ್ ಮೂಲಕ ಹೂಡಿಕೆ ಯೋಜನೆಗೆ ಆಮಿಷವೊಡ್ಡಲ್ಪಟ್ಟ ಬಳಿಕ 34 ವರ್ಷದ ವ್ಯಕ್ತಿಯೊಬ್ಬ ಆನ್ಲೈನ್ ವಂಚನೆಗೆ ಒಳಗಾಗಿ 15.5 ಲಕ್ಷ ರೂ.ಗೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಅಶ್ವಿತ್ ಎಂದು ಗುರುತಿಸಲಾದ ಸಂತ್ರಸ್ತ ಈ ಸಂಬಂಧ ಕಾರ್ಕಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ಅಶ್ವಿತ್ಗೆ ಜನವರಿ 28 ರಂದು ಮೀನಾ ಸಕ್ಪಾಲ್ ಹೆಸರಿನಲ್ಲಿ ನೋಂದಾಯಿಸಲಾದ ಸಂಖ್ಯೆಯಿಂದ ವಾಟ್ಸಾಪ್ ಸಂದೇಶ ಬಂದಿದ್ದು, ಆ್ಯಪ್ ಮೂಲಕ 'ಎಸ್-ಕಾಯಿನ್ ಹೂಡಿಕೆ ಟಾಸ್ಕ್'ಗೆ ಸೇರುವಂತೆ ಆಹ್ವಾನಿಸಲಾಗಿದೆ.
ಈ ಸಂದೇಶವು 'ನಿಜವಾದದ್ದು' ಎಂದು ನಂಬಿ, ಸಂತ್ರಸ್ತ ಅವರು ನೀಡಿದ ಸೂಚನೆಗಳನ್ನು ಪಾಲಿಸಿದ್ದಾರೆ. ತಮ್ಮ ಖಾತೆಯ ವಿವರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಜನವರಿ 29 ಮತ್ತು ಜೂನ್ 19 ರ ನಡುವೆ ಹಲವು ಬಾರಿ ಹಣ ಪಾವತಿಸಿದ್ದಾರೆ.
ಮಂಗಳೂರಿನಲ್ಲಿರುವ ಅವರ ಮಹಾರಾಷ್ಟ್ರ ಬ್ಯಾಂಕ್ ಖಾತೆಯಿಂದ ಯುಪಿಐ-ಲಿಂಕ್ಡ್ ಖಾತೆಗೆ ಒಟ್ಟು 15,52,650 ರೂ. ಹಣವನ್ನು ವರ್ಗಾಯಿಸಲಾಗಿದೆ. ಈ ಹಣ ಪಾವತಿಸಿದ ನಂತರ, ಹೆಚ್ಚಿನ ಹೂಡಿಕೆ ಮಾಡುವಂತೆ ಸೂಚಿಸಲಾಗಿದೆ ಮತ್ತು ನಂತರ ತಮ್ಮ ಹಣವನ್ನು ಹಿಂಪಡೆಯಲು ತೆರಿಗೆ ಪಾವತಿಸುವಂತೆ ಹೇಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಣವನ್ನು ಹಿಂತಿರುಗಿಸದಿದ್ದಾಗ, ಅಶ್ವಿತ್ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ