ಗೋಕರ್ಣ: ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿ ನೆರವಿನಿಂದ ಸಂಭಾವ್ಯ ದುರಂತ ತಪ್ಪಿಸಿದ ಪೊಲೀಸರು!

ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ.
CTV grab of the couple with their baby on the Gangavali bridge near Gokarna
ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ
Updated on

ಉತ್ತರ ಕನ್ನಡ: ಗೋಕರ್ಣ ಮತ್ತು ಅಂಕೋಲಾ ಸಂಪರ್ಕಿಸುವ ಹೊಸದಾಗಿ ನಿರ್ಮಿಸಲಾದ ಗಂಗಾವಳಿ ಸೇತುವೆಯ ಮೇಲೆ ಮಗುವಿನೊಂದಿಗೆ ದಂಪತಿಗಳು ಅಪಾಯಕಾರಿಯಾಗಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು, ಸಂಭಾವ್ಯ ಅಪಘಾತವನ್ನು ತಡೆಗಟ್ಟಲು ಕರ್ನಾಟಕದಲ್ಲಿ ಮೊದಲ ಬಾರಿಗೆ ಇಂಟೆಲಿಜೆಂಟ್ ಕ್ಯಾಮೆರಾ ವ್ಯವಸ್ಥೆಯನ್ನು ಬಳಸಲಾಗಿದೆ ಎಂಬ ಬಗ್ಗೆ ಗಮನಾರ್ಹ.

ಉತ್ತರ ಕನ್ನಡ ಪೊಲೀಸರು, ವೈ-ಫೈ ಸಂಪರ್ಕಿತ ಇಂಟೆಲಿಜೆಂಟ್ ಕ್ಯಾಮೆರಾವನ್ನು ಬಳಸಿ, ದಂಪತಿಗಳಿಗೆ ಲೈವ್ ಎಚ್ಚರಿಕೆ ನೀಡಿದ್ದಾರೆ. ಕೆಳಗೆ ಪ್ರಬಲವಾದ ನದಿ ಪ್ರವಾಹವಿದ್ದು ತಕ್ಷಣ ಸ್ಥಳದಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಏಕಾಏಕಿ ಪೊಲೀಸರ ಧ್ವನಿ ಕೇಳಿದ ಕೂಡಲೇ ಅವಾಕ್ಕಾದ ಆ ದಂಪತಿ, ಪೊಲೀಸರ ಸೂಚನೆಯಂತೆ ಮಗುವನ್ನು ಎತ್ತಿಕೊಂಡು ಆಚೆ ಹೋಗಿದ್ದಾರೆ.

ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ.

ಪ್ರವಾಸಿಗರಿಗೆ ಅಪಾಯದ ಬಗ್ಗೆ ಎಚ್ಚರಿಕೆ ನೀಡಲು ನಾವು ಸಿಸಿಟಿವಿ ಮೂಲಕ ಆಡಿಯೊ ಎಚ್ಚರಿಕೆಯನ್ನು ಬಳಸಿದ್ದು ಇದೇ ಮೊದಲು" ಎಂದು ಗೋಕರ್ಣ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಧರ್ ಹೇಳಿದರು. ಸ್ವಲ್ಪ ಯಾಮಾರಿದ್ದರೆ ಮಗು ನದಿಗೆ ಬೀಳುವ ಅಪಾಯವಿತ್ತು. ಸಕಾಲಿಕ ಎಚ್ಚರಿಕೆಯು ಬಹುಶಃ ಜೀವವನ್ನು ಉಳಿಸಿತು ಎಂಬುದು ನಮಗೆ ನೆಮ್ಮದಿ ತಂದಿದೆ ಎಂದರು.

CTV grab of the couple with their baby on the Gangavali bridge near Gokarna
ಸಿಸಿಟಿವಿ ಯೋಜನೆಯಲ್ಲಿ ಭ್ರಷ್ಟಾಚಾರ: ಸತ್ಯೇಂದರ್ ಜೈನ್ ವಿರುದ್ಧ ಕೇಸ್ ದಾಖಲು; ಮಾಜಿ ಸಚಿವ ಮತ್ತೆ ಜೈಲಿಗೆ?

ಗೋಕರ್ಣದಿಂದ ಸುಮಾರು 5 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದ್ದು, ಮಂಜುಗುಣಿ ಗ್ರಾಮದಿಂದ ಅಂಕೋಲಾಕ್ಕೆ ಪ್ರಯಾಣಿಸುತ್ತಿದ್ದ ದಂಪತಿ ಹೊಸ ಸೇತುವೆಯ ಬಳಿ ಫೋಟೋ ತೆಗೆದುಕೊಳ್ಳಲು ನಿಂತಿದ್ದಾರೆ. ಕೈಯಲ್ಲಿ ಮಗುವನ್ನು ಹಿಡಿದುಕೊಂಡು, ಸೇತುವೆಯ ಗ್ರಿಲ್ ಮೇಲೆ ಅನಿಶ್ಚಿತವಾಗಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಸ್ಮಾರ್ಟ್ ಕಣ್ಗಾವಲು ವ್ಯವಸ್ಥೆಗೆ ಧನ್ಯವಾದಗಳು, ಪೊಲೀಸರು ಈ ಚಟುವಟಿಕೆಯನ್ನು ತಕ್ಷಣವೇ ಪತ್ತೆಹಚ್ಚಿ ಮೇಲ್ವಿಚಾರಣೆ ಮಾಡಿದರು, ಅವರು ಸಿಸಿಟಿವಿ ವ್ಯವಸ್ಥೆಯ ಮೂಲಕ ನೇರವಾಗಿ ಎಚ್ಚರಿಕೆ ನೀಡಿದರು. ಗಾಬರಿಗೊಂಡ ದಂಪತಿಗಳು ಬೇಗನೆ ಆ ಪ್ರದೇಶದಿಂದ ಹೊರ ನಡೆದರು, ಇದರಿಂದ ಸಂಭಾವ್ಯ ದುರಂತ ತಪ್ಪಿದೆ.

ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಮಾತನಾಡಿ, ದೇವಾಲಯ ಬೀಚ್, ಕುಡ್ಲೆ ಬೀಚ್, ಓಂ ಬೀಚ್ ಮತ್ತು ಪ್ಯಾರಡೈಸ್ ಬೀಚ್ ಸೇರಿದಂತೆ ಗೋಕರ್ಣದ ಕಡಲತೀರಗಳು ಮತ್ತು ಪ್ರವಾಸಿ ತಾಣಗಳಲ್ಲಿ 35 AI ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ದೃಢಪಡಿಸಿದರು. ಈ ಕ್ಯಾಮೆರಾಗಳು ಪ್ರವಾಸಿ ಮಾಹಿತಿ ಕೇಂದ್ರ ಮತ್ತು ಗೋಕರ್ಣ ಪೊಲೀಸ್ ಠಾಣೆಗೆ ಸಂಪರ್ಕ ಹೊಂದಿದ್ದು, ನೈಜ-ಸಮಯದ ಮೇಲ್ವಿಚಾರಣೆ ಮತ್ತು ದ್ವಿಮುಖ ಸಂವಹನವನ್ನು ಸಕ್ರಿಯಗೊಳಿಸುತ್ತವೆ. ಎಸ್ಪಿ ನಾರಾಯಣ್ ಅವರು ಇನ್ಸ್‌ಪೆಕ್ಟರ್ ಶ್ರೀಧರ್ ಅವರ ತ್ವರಿತ ಕ್ರಮಕ್ಕಾಗಿ ಅವರನ್ನು ವೈಯಕ್ತಿಕವಾಗಿ ಶ್ಲಾಘಿಸಿದರು, 5,000 ರೂ. ನಗದು ಬಹುಮಾನವನ್ನು ನೀಡಿದರು.

ಗೋಕರ್ಣ ಮತ್ತು ಸುತ್ತಮುತ್ತಲಿನ ಹೆಚ್ಚಿನ ಅಪಾಯದ ಸ್ಥಳಗಳಿಗೆ ಭೇಟಿ ನೀಡುವಾಗ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಮತ್ತು ಎಚ್ಚರಿಕೆಗಳನ್ನು ಗಮನಿಸಬೇಕೆಂದು ಅಧಿಕಾರಿಗಳು ಈಗ ಪ್ರವಾಸಿಗರಿಗೆ ಸೂಚಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com