ಕ್ರೆಡಿಟ್ ಪಡೆಯುವ ಉನ್ಮಾದ: ಪೊಲೀಸ್ ಅಧಿಕಾರಿಯ ಸಲಹೆ ನಿರ್ಲಕ್ಷ್ಯಿಸಿ ಅಭಿಮಾನಿಗಳನ್ನು ಸಾವಿನ ದವಡೆಗೆ ನೂಕಿತೇ ಸರ್ಕಾರ?

ಸನ್ಮಾನ ಕಾರ್ಯಕ್ರಮ ನಡೆಯುತ್ತಿದ್ದ ವಿಧಾನಸೌಧದ ಮೇಲೆ ಪೊಲೀಸರು ಪ್ರಮುಖವಾಗಿ ಗಮನ ಹರಿಸಿದ್ದರು, ವಿಐಪಿಗಳ ಬಂದೋಬಸ್ತ್ ನೋಡಿಕೊಳ್ಳಲಾಗುತ್ತಿತ್ತು. ಕ್ರೀಡಾಂಗಣದ ಬಳಿಯ ರಸ್ತೆಯಲ್ಲಿ ಜನಸಂದಣಿ ನಿಯಂತ್ರಿಸಲು ಯಾವುದೇ ಹಿರಿಯ ಅಧಿಕಾರಿಗಳು ಇರಲಿಲ್ಲ.
ಕ್ರೆಡಿಟ್ ಪಡೆಯುವ ಉನ್ಮಾದ: ಪೊಲೀಸ್ ಅಧಿಕಾರಿಯ ಸಲಹೆ ನಿರ್ಲಕ್ಷ್ಯಿಸಿ ಅಭಿಮಾನಿಗಳನ್ನು ಸಾವಿನ ದವಡೆಗೆ ನೂಕಿತೇ ಸರ್ಕಾರ?
Updated on

ಬೆಂಗಳೂರು: ಐಪಿಎಲ್‌ನ 18ನೇ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಚಾಂಪಿಯನ್‌ ಆಗಿರುವ ಸಂಭ್ರಮಕ್ಕೆ ಸಾಕ್ಷಿಯಾಗಲು ರಾಜಧಾನಿಯ ದಶದಿಕ್ಕುಗಳಿಂದ ಯುವ ಅಭಿಮಾನಿಗಳು ಸಾಗರೋಪಾದಿಯಾಗಿ ಹರಿದು ಬಂದಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸುವುದು ಬೇಡ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಸಲಹೆಯನ್ನು ನಿರ್ಲಕ್ಷ್ಯಿಸಿದ ಸರ್ಕಾರ 11 ಮಂದಿಯನ್ನು ಸಾವಿನ ದವಡೆಗೆ ತಳ್ಳಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆರ್‌ಸಿಬಿ ತಂಡವನ್ನು ಸನ್ಮಾನಿಸುತ್ತಿದ್ದ ವಿಧಾನಸೌಧದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಈ ದುರಂತ ಸಂಭವಿಸಿದೆ.

ಸನ್ಮಾನ ಕಾರ್ಯಕ್ರಮ ನಡೆಯುತ್ತಿದ್ದ ವಿಧಾನಸೌಧದ ಮೇಲೆ ಪೊಲೀಸರು ಪ್ರಮುಖ ಗಮನ ಹರಿಸಿದ್ದರು, ಅಲ್ಲಿ ವಿಐಪಿಗಳಿಗೆ ಬಂದೋಬಸ್ತ್ ನೋಡಿಕೊಳ್ಳಲಾಗುತ್ತಿತ್ತು. ಕ್ರೀಡಾಂಗಣದ ಬಳಿಯ ಬೀದಿಗಳಲ್ಲಿ ಜನಸಂದಣಿ ನಿಯಂತ್ರಿಸಲು ಯಾವುದೇ ಹಿರಿಯ ಅಧಿಕಾರಿಗಳು ಇರಲಿಲ್ಲ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯ ವಿಜಯೋತ್ಸವ ಆಚರಣೆ ಮತ್ತು ಪ್ರಯಾಣದ ವೇಳಾಪಟ್ಟಿಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ 'ಮಾಧ್ಯಮ ಸಲಹೆ' ಬೆಳಗಿನ ಜಾವದಿಂದಲೇ ಹರಿದಾಡುತ್ತಿದ್ದದ್ದು ಕೂಡ ಈ ದುರಂತಕ್ಕೆ ಕಾರಣವಾಗಿದೆ.

ಕಸ್ತೂರ್ ಬಾ ರಸ್ತೆ, ಎಂಜಿ ರಸ್ತೆ, ಕಬ್ಬನ್ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಎಲ್ಲಾ ದಿಕ್ಕುಗಳಿಂದ ಜನಸಮೂಹವು ಕ್ರೀಡಾಂಗಣದ ಕಡೆಗೆ ಧಾವಿಸಿತ್ತು. ಕ್ರೀಡಾಂಗಣದ ಹೊರಗೆ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಗಿಂತ ಜನಸಂದಣಿ ಹೆಚ್ಚು ಸಂಖ್ಯೆಯಲ್ಲಿತ್ತು ಎಂದು ಮೂಲಗಳು ತಿಳಿಸಿವೆ.

ಕ್ರೆಡಿಟ್ ಪಡೆಯುವ ಉನ್ಮಾದ: ಪೊಲೀಸ್ ಅಧಿಕಾರಿಯ ಸಲಹೆ ನಿರ್ಲಕ್ಷ್ಯಿಸಿ ಅಭಿಮಾನಿಗಳನ್ನು ಸಾವಿನ ದವಡೆಗೆ ನೂಕಿತೇ ಸರ್ಕಾರ?
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ: ಮೃತಪಟ್ಟ ಅಭಿಮಾನಿಗಳ ವಿವರ...

ವಿಜಯೋತ್ಸವ ಆಚರಿಸಲು ಸರ್ಕಾರಕ್ಕೇಕೆ ಇಷ್ಟು ಆತುರ?

ಆರ್‌ಸಿಬಿ ವಿಜಯವನ್ನು ಮುಚ್ಚಿದ ಸ್ಥಳದಲ್ಲಿ ಆಚರಿಸಲು ಆತುರ ಏಕೆ ಇತ್ತು? ಐಪಿಎಲ್ ಒಂದು ಖಾಸಗಿ ಮತ್ತು ಹೆಚ್ಚು ವಾಣಿಜ್ಯ ಕಾರ್ಯಕ್ರಮವಾಗಿದ್ದು, ಸರ್ಕಾರವು ಅದನ್ನು ಇಷ್ಟು ಆತುರ ಮತ್ತು ಕಳಪೆ ರೀತಿಯಲ್ಲಿ ಆಚರಿಸುವ ಅಗತ್ಯವೇನಿತ್ತು? ಆದರೆ ತಮ್ಮ ಸರ್ಕಾರದ ಅವಧಿಯಲ್ಲಿ ಆರ್ ಸಿಬಿ ಗೆಲುವು ಸಾಧಿಸಿದ್ದು, ಅದರ ಕ್ರೆಡಿಟ್ ಪಡೆಯುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಸನ್ಮಾನ ಕಾರ್ಯಕಮವನ್ನು ತರಾತುರಿಯಲ್ಲಿ ಆಯೋಜಿಸಿತ್ತು ಎನ್ನಲಾಗಿದೆ.

ಒಂದು ವೇಳೆ, ಕಾರ್ಯಕ್ರಮವನ್ನು ಕೆಲವು ದಿನಗಳ ನಂತರ ಅರಮನೆ ಮೈದಾನದಂತಹ ತೆರೆದ ಸ್ಥಳದಲ್ಲಿ ಉತ್ತಮವಾಗಿ ಯೋಜಿಸಿ, ನಿರ್ವಹಿಸಿ ನಡೆಸಬಹುದಿತ್ತು. ಬುಧವಾರ ಬೆಳಿಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಭೆಯ ಸಮಯದಲ್ಲಿ ಕ್ರೀಡಾಂಗಣದ ಕಾರ್ಯಕ್ರಮದ ಬಗ್ಗೆ ಪ್ರಶ್ನೆಯನ್ನು ಎತ್ತಿದ್ದರು, ಆದರೆ ಅವರ ಸಲಹೆಯನ್ನು ಕಡೆಗಣಿಸಲಾಗಿತ್ತು," ಎಂದು ಮೂಲಗಳು ತಿಳಿಸಿವೆ.

ಕ್ರೆಡಿಟ್ ಪಡೆಯುವ ಉನ್ಮಾದ: ಪೊಲೀಸ್ ಅಧಿಕಾರಿಯ ಸಲಹೆ ನಿರ್ಲಕ್ಷ್ಯಿಸಿ ಅಭಿಮಾನಿಗಳನ್ನು ಸಾವಿನ ದವಡೆಗೆ ನೂಕಿತೇ ಸರ್ಕಾರ?
Bengaluru Stampede: ಕಾಲ್ತುಳಿತ ಪ್ರಕರಣದ ತನಿಖೆಗೆ ಮ್ಯಾಜಿಸ್ಟ್ರೇಟ್ ನೇಮಕ

ಕ್ಷಣದಲ್ಲೇ ತಪ್ಪಿದ ನಿಯಂತ್ರಣ!

ಜನಸಂದಣಿಯ ನಿರ್ವಹಣೆ ಸರಿಯಾಗಿರಲಿಲ್ಲ. ಕ್ರೀಡಾಂಗಣದ ಒಳಗೆ ಕಾವಲುಗಾರರು ಮತ್ತು ಹೊರಗೆ ಪೊಲೀಸ್ ಸಿಬ್ಬಂದಿ ಇದ್ದರು. ಕಾವಲುಗಾರರು ಜನರನ್ನು ಒಳಗೆ ಬಿಡುತ್ತಿರಲಿಲ್ಲ. ಜನಸಂದಣಿಯನ್ನು ನಿರ್ವಹಿಸಲು ಸ್ಥಳದಲ್ಲಿ ಸಾಕಷ್ಟು ಪೊಲೀಸರು ಇರಲಿಲ್ಲ, ಜನರ ಚಲನವಲನವನ್ನು ಅಳೆಯಲು ಯಾವುದೇ ದೊಡ್ಡ ಪರದೆಗಳನ್ನು ಹಾಕಿರಲಿಲ್ಲ ಕ್ರಿಕೆಟ್ ಪಂದ್ಯಕ್ಕಿಂತ ಈ ಕಾರ್ಯಕ್ರಮ ಭಿನ್ನವಾಗಿತ್ತು, ಜೊತೆಗೆ ಎಲ್ಲರಿಗೂ ಉಚಿತವಾಗಿತ್ತು. ಕ್ಷಣಾರ್ಧದಲ್ಲಿ ವಿಷಯಗಳು ನಿಯಂತ್ರಣ ತಪ್ಪಿದವು. ಉಚಿತ ಪಾಸ್‌ಗಳ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ವೈರಲ್ ಆದ ನಂತರ ಲಕ್ಷಾಂತರ ಜನರು ಜಮಾಯಿಸಿದರು. ಕ್ರೀಡಾಂಗಣದ ಸಾಮರ್ಥ್ಯ ಸುಮಾರು 35,000 ಮಾತ್ರ ಎಂದು ಮೂಲವೊಂದು ತಿಳಿಸಿದೆ.

"ಆರ್‌ಸಿಬಿ ಕಪ್ ಗೆದ್ದ ನಂತರ ಮಂಗಳವಾರ ಸಂಜೆ ನಗರದಲ್ಲಿ ನಡೆದ ಜನರ ಉನ್ಮಾದವನ್ನು ಗಮನಿಸಿದರೆ, ಸರ್ಕಾರ ಮತ್ತು ಪೊಲೀಸರು ಜನರ ಮನಸ್ಥಿತಿಯನ್ನು ಅವಲೋಕಿಸಬೇಕಾಗಿತ್ತು. ಪರಿಸ್ಥಿತಿಯನ್ನು ನಿರ್ಣಯಿಸಿ ಚಿನ್ನಸ್ವಾಮಿ ಕ್ರೀಡಾಂಗಣದಂತಹ ಮುಚ್ಚಿದ ಸ್ಥಳದಲ್ಲಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಅವಕಾಶ ನೀಡುವಲ್ಲಿ ಹೆಚ್ಚು ಜಾಗರೂಕರಾಗಿರಬೇಕಿತ್ತು.

ಕ್ರೆಡಿಟ್ ಪಡೆಯುವ ಉನ್ಮಾದ: ಪೊಲೀಸ್ ಅಧಿಕಾರಿಯ ಸಲಹೆ ನಿರ್ಲಕ್ಷ್ಯಿಸಿ ಅಭಿಮಾನಿಗಳನ್ನು ಸಾವಿನ ದವಡೆಗೆ ನೂಕಿತೇ ಸರ್ಕಾರ?
ವಿಜಯೋತ್ಸವ ಮೆರವಣಿಗೆ ಗೊಂದಲ, ಉಚಿತ ಪಾಸ್, ಜನದಟ್ಟಣೆ ಬೆಂಗಳೂರು ಕಾಲ್ತುಳಿತಕ್ಕೆ ಕಾರಣವಾಯಿತೇ; ಪೊಲೀಸರು ಏನಂತಾರೆ?

ಸಂಜೆ 5 ಗಂಟೆಗೆ ವಿಧಾನಸೌಧದಿಂದ ಕ್ರೀಡಾಂಗಣಕ್ಕೆ ಓಪನ್-ಟಾಪ್ ಬಸ್‌ನಲ್ಲಿ ವಿಜಯೋತ್ಸವ ಮೆರವಣಿಗೆಗೆ ಅನುಮತಿಯನ್ನು ಪೊಲೀಸರು ನಿರಾಕರಿಸಿದ್ದರೂ, ಕ್ರೀಡಾಂಗಣದಲ್ಲಿ ಲೆಕ್ಕವಿಲ್ಲದಷ್ಟು ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಅವರು ಏಕೆ ಮತ್ತು ಹೇಗೆ ಅವಕಾಶ ನೀಡಿದರು? ಕ್ರೀಡಾಂಗಣದಂತಹ ಮುಚ್ಚಿದ ಸ್ಥಳದಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದು ಹಾಗೂ ಕಡಿಮೆ ಸಮಯದಲ್ಲಿ ನಿರ್ವಹಿಸುವುದು ಅಸಾಧ್ಯವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಹೈಕಮಾಂಡ್ ಬುಧವಾರ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರಿಗೂ ನವದೆಹಲಿಯಲ್ಲಿರಲು ತಿಳಿಸಿತ್ತು ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಆದರೆ ಅವರು ದೆಹಲಿಗೆ ಹೋಗಲು ಬಯಸದ ಕಾರಣ, ದೆಹಲಿ ಭೇಟಿ ತಪ್ಪಿಸಲು ಆಚರಣೆಯು ಒಂದು ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com