ಕಳೆದ ಮೂರು ತಿಂಗಳಿನಿಂದ ಸಂಬಳವಿಲ್ಲ: ಬಿಬಿಎಂಪಿ ಮಾರ್ಷಲ್‌ಗಳ ಗೋಳು ಕೇಳೋರಿಲ್ಲ!

ಕಸ ನಿರ್ವಹಣೆಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಬಿಬಿಎಂಪಿಯಿಂದ ಬೇರ್ಪಟ್ಟ ನಂತರ ಈ ಪರಿಸ್ಥಿತಿ ಉದ್ಭವಿಸಿದೆ. ಅವರ ವೇತನವನ್ನು ಸಾಮಾನ್ಯವಾಗಿ ಮಾಜಿ ಸೈನಿಕರ ಕಲ್ಯಾಣ ಸಂಘದ ಮೂಲಕ ನೀಡಲಾಗುತ್ತದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೆರೆ ಭದ್ರತೆ ಮತ್ತು ಮೇಲ್ವಿಚಾರಣಾ ವಿಭಾಗ, ವಾರ್ಡ್ ಮೇಲ್ವಿಚಾರಣೆ ಮತ್ತು ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿಯೋಜಿಸಲಾದ ಬಿಬಿಎಂಪಿ ಮಾರ್ಷಲ್‌ಗಳು ಮಾರ್ಚ್‌ನಿಂದ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದಾರೆ.

ಕಸ ನಿರ್ವಹಣೆಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಬಿಬಿಎಂಪಿಯಿಂದ ಬೇರ್ಪಟ್ಟ ನಂತರ ಈ ಪರಿಸ್ಥಿತಿ ಉದ್ಭವಿಸಿದೆ. ಅವರ ವೇತನವನ್ನು ಸಾಮಾನ್ಯವಾಗಿ ಮಾಜಿ ಸೈನಿಕರ ಕಲ್ಯಾಣ ಸಂಘದ ಮೂಲಕ ನೀಡಲಾಗುತ್ತದೆ ಮತ್ತು ಪ್ರತಿ ಮಾರ್ಷಲ್‌ಗೆ ಮಾಸಿಕ 17,500 ರೂ. ನಿಗದಿ ಪಡಿಸಲಾಗಿದೆ.

ಕೆಲವು ಕಾರ್ಯವಿಧಾನಗಳಿಂದಾಗಿ ವೇತನದಲ್ಲಿ ವಿಳಂಬವಾಗಿದೆ ಎಂದು ಮೇಲ್ವಿಚಾರಕರು ಹೇಳುತ್ತಾರೆ. ಈ ಹಿಂದೆ ವೇತನ ನೀಡಲು ಬಿಬಿಎಂಪಿಯಿಂದ ಮಾಜಿ ಸೈನಿಕರ ಕಲ್ಯಾಣ ಸಂಘಕ್ಕೆ ಹಣ ನೀಡಲಾಗುತ್ತಿತ್ತು. ಈಗ BWSML ನಿಂದ ವಾರ್ಡ್ ಮಾರ್ಷಲ್‌ಗಳಿಗೆ ಫೈಲ್‌ಗಳನ್ನು ತೆರವುಗೊಳಿಸಬೇಕಾಗಿದೆ. ಅದೇ ರೀತಿ ಅರಣ್ಯ ವಿಭಾಗದಿಂದ ಫೈಲ್ ಕ್ಲಿಯರೆನ್ಸ್ ನಂತರ ಸುಮಾರು 250 ಮಾರ್ಷಲ್‌ಗಳಿಗೆ ವೇತನ ಪಾವತಿಸಬೇಕಾಗುತ್ತದೆ. ಕೊನೆಯದಾಗಿ, ಬಿಬಿಎಂಪಿಯ ಆರೋಗ್ಯ ಇಲಾಖೆಯು ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿಯೋಜಿಸಲಾದ ಮಾರ್ಷಲ್‌ಗಳಿಗೆ ಸಂಬಂಧಿಸಿದ ಫೈಲ್‌ಗಳನ್ನು ತೆರವುಗೊಳಿಸಬೇಕಾಗುತ್ತದೆ. ಈ ಎಲ್ಲಾ ಕಾರ್ಯವಿಧಾನಕ್ಕಾಗಿ ಸಮಯ ತೆಗೆದುಕೊಳ್ಳುತ್ತಿರುವುದರಿಂದ ವಿಳಂಬವಾಗುತ್ತದೆ ಎಂದು ಮೇಲ್ವಿಚಾರಕರು ತಿಳಿಸಿದ್ದಾರೆ ಎಂದು ಮಾರ್ಷಲ್ ಒಬ್ಬರು ಹೇಳಿದರು.

ವಾರ್ಡ್ ಮಾರ್ಷಲ್‌ಗಳಿಗೆ ಸಂಬಂಧಿಸಿದಂತೆ ಮಾರ್ಚ್‌ನಲ್ಲಿ ವೇತನ ಪಾವತಿಯನ್ನು ತೆರವುಗೊಳಿಸಿದೆ, ಆದಾಗ್ಯೂ, ಅವರ ಸಂಬಳ ಏಪ್ರಿಲ್‌ನಿಂದ ಬಾಕಿ ಇದೆ. ಅದೇ ರೀತಿ ಕೆರೆ ಮತ್ತು ಆರೋಗ್ಯ ಇಲಾಖೆಗಳ ವ್ಯಾಪ್ತಿಯಲ್ಲಿರುವ ಮಾರ್ಷಲ್‌ಗಳ ವೇತನವನ್ನು ಮಾರ್ಚ್‌ನಿಂದ ಇನ್ನೂ ಪಾವತಿಸಲಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Representational image
ನಗರವನ್ನು ಸ್ವಚ್ಛವಾಗಿಡಲು ನಾಗರಿಕರ ಸಹಾಯ ಕೋರಿದ ಬಿಬಿಎಂಪಿ!

ಇಂದಿರಾ ಕ್ಯಾಂಟೀನ್ ಭದ್ರತೆಯನ್ನು ನೋಡಿಕೊಳ್ಳಲು ಬಿಬಿಎಂಪಿ ಆರೋಗ್ಯ ಇಲಾಖೆಯಲ್ಲಿ ಸುಮಾರು 200 ಮಾರ್ಷಲ್‌ಗಳಿದ್ದಾರೆ. ಪಾವತಿ ಸಂಬಂಧಿತ ಫೈಲ್ ಅನ್ನು ತೆರವುಗೊಳಿಸಲು ಅಧಿಕಾರ ಹೊಂದಿರುವ ವೈದ್ಯಕೀಯ ಆರೋಗ್ಯ ಅಧಿಕಾರಿ (ಎಂಎಚ್‌ಒ) ಅವರನ್ನು ಬಿಬಿಎಂಪಿಯ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಲಾಗಿದೆ, ಹೀಗಾಗಿ ವೇತನ ಪಾವತಿ ಮಾಡುವಂತೆ ಅಧಿಕಾರಿಗೆ ಅನುಮತಿ ಕೋರಿ ಬಿಬಿಎಂಪಿಯ ಆರೋಗ್ಯ ವಿಶೇಷ ಆಯುಕ್ತರಿಗೆ ಟಿಪ್ಪಣಿ ಕಳುಹಿಸಲಾಗಿದೆ. ಅದು ಮುಗಿದ ನಂತರ, ಸಂಬಳವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಬೈಕ್‌ಗೆ ಪೆಟ್ರೋಲ್ ತುಂಬಿಸಲು ಮತ್ತು ಕೆಲಸಕ್ಕೆ ಬರಲು ಸಂಬಂಧಿಕರು ಮತ್ತು ಸ್ನೇಹಿತರಿಂದ ಹಣವನ್ನು ಸಾಲ ಪಡೆಯಬೇಕಾಯಿತು ಮತ್ತು ನಿಯಮಿತ ಸಂಬಳವಿಲ್ಲದೆ ಮನೆ ನಡೆಸುವುದು ತುಂಬಾ ಕಷ್ಟ ಎಂದುಬಿಬಿಎಂಪಿ ಮಾರ್ಷಲ್‌ಗಳು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com