ಡಿಮ್ಯಾಂಡಪ್ಪೋ ಡಿಮ್ಯಾಂಡು: ಕಲಬುರಗಿಯ ಖಡಕ್ ರೊಟ್ಟಿ ಬಗ್ಗೆ 'ಮನ್ ಕೀ ಬಾತ್'​ನಲ್ಲಿ PM ಮೋದಿ ಮಾತು; ದಿಢೀರ್ ಆರ್ಡರ್ ಹೆಚ್ಚಳ!

ಕಲಬುರಗಿ ಜಿಲ್ಲೆಯ ಜೋಳದ ರೊಟ್ಟಿಗಳನ್ನು ತಯಾರಿಸುವ ನೂರಾರು ಮಹಿಳೆಯರನ್ನು ಬೆಂಬಲಿಸುವ ಸಂಘವು 1,000 ರೊಟ್ಟಿಗಳಿಗೆ (60 ಆರ್ಡರ್‌ಗಳು) ಆರ್ಡರ್‌ಗಳನ್ನು ಸ್ವೀಕರಿಸಿದೆ.
ಮನ್ ಕೀ ಬಾತ್ ನಲ್ಲಿ ಖಡಕ್ ರೊಟ್ಟಿ ಬಗ್ಗೆ ಪ್ರಸ್ತಾಪ
ಮನ್ ಕೀ ಬಾತ್ ನಲ್ಲಿ ಖಡಕ್ ರೊಟ್ಟಿ ಬಗ್ಗೆ ಪ್ರಸ್ತಾಪ
Updated on

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಕಲಬುರಗಿ ರೊಟ್ಟಿಗಳ ಬಗ್ಗೆ ಪ್ರಸ್ತಾಪಿಸಿದರು ಮತ್ತು ಕೆಲವೇ ಗಂಟೆಗಳಲ್ಲಿ, ಕಲಬುರಗಿ ರೊಟ್ಟಿ ಉತ್ಪಾದಕರ ಸಹಕಾರ ಸಂಘವು ಅಮೆಜಾನ್ ಮೂಲಕ 60 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆದುಕೊಂಡಿತು.

ಕಲಬುರಗಿ ಜಿಲ್ಲೆಯ ಜೋಳದ ರೊಟ್ಟಿಗಳನ್ನು ತಯಾರಿಸುವ ನೂರಾರು ಮಹಿಳೆಯರನ್ನು ಬೆಂಬಲಿಸುವ ಸಂಘವು 1,000 ರೊಟ್ಟಿಗಳಿಗೆ (60 ಆರ್ಡರ್‌ಗಳು) ಆರ್ಡರ್‌ಗಳನ್ನು ಸ್ವೀಕರಿಸಿದೆ ಹಾಗೂ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸಂಘವು ಕಲಬುರಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿರುವ ಮಹಿಳಾ ಸ್ವ-ಸಹಾಯ ಗುಂಪುಗಳಿಂದ ರೊಟ್ಟಿಗಳನ್ನು ಖರೀದಿಸುತ್ತದೆ ಮತ್ತು ಅವುಗಳನ್ನು ಇ-ಕಾಮರ್ಸ್ ವೇದಿಕೆಗಳ ಮೂಲಕ ರವಾನಿಸುತ್ತದೆ.

ಕಲಬುರಗಿ ನಗರದ ಹೊರವಲಯದಲ್ಲಿರುವ ಕೊಟ್ನೂರ್ ಗ್ರಾಮದ ನಂದಿ ಬಸವೇಶ್ವರ ರೊಟ್ಟಿ ಕೇಂದ್ರದ ನಿಂಗಮ್ಮ ಅವರು ಪ್ರಧಾನಿ ಕಲಬುರಗಿ ರೊಟ್ಟಿಗಳ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಸಂತೋಷ ವ್ಯಕ್ತ ಪಡಿಸಿದ್ದಾರೆ. ಅವರೆಲ್ಲರೂ ಮೊದಲು ಗೃಹಿಣಿಯರಾಗಿದ್ದರು, ಜಿಲ್ಲಾಡಳಿತವು ನೀಡಿದ ಸಹಾಯದಿಂದಾಗಿ ಈಗ ಅವರು ಸೊಸೈಟಿಯ ಮೂಲಕ ರೊಟ್ಟಿ ತಯಾರಿಸುವ ಯಂತ್ರಗಳನ್ನು ಖರೀದಿಸಲು ಸಾಲ ಪಡೆದು ಉದ್ಯಮಿಗಳಾಗಿದ್ದಾರೆ ಎಂದು ನಿಂಗಮ್ಮ ಹೇಳಿದರು. ಅವರು ತಯಾರಿಸುವ ರೊಟ್ಟಿಗಳನ್ನು ಸಹ ಸೊಸೈಟಿಯು ಮರಳಿ ಖರೀದಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಜೂನ್ 1 ರ ಆವೃತ್ತಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ಲೇಖನವನ್ನು ನಿಂಗಮ್ಮ ಸ್ಮರಿಸಿದರು. ಕಲಬುರಗಿ ರೊಟ್ಟಿಗೆ ಮನ್ನಣೆ ಹೆಚ್ಚಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು. ಚಿತ್ತಾಪುರದಲ್ಲಿ ಮಾತಾ ಮಲ್ಲಮ್ಮ ರೊಟ್ಟಿ ಕೇಂದ್ರವನ್ನು ನಡೆಸುತ್ತಿರುವ ಶರಣಮ್ಮ, ಪ್ರಧಾನಿಯವರು ಕಲಬುರಗಿ ರೊಟ್ಟಿಗಳನ್ನು ಉಲ್ಲೇಖಿಸಿದ್ದಾರೆ ಎಂದು ಅವರು ಸಂತೋಷಪಟ್ಟರು. "ಇದು ಒಂದು ಗೌರವ. ಇದು ಜಿಲ್ಲೆಯ ಬಡ ಮಹಿಳೆಯರಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು. ನಿಂಗಮ್ಮ ಮತ್ತು ಶರಣಮ್ಮ ಇಬ್ಬರೂ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಧನ್ಯವಾದ ಅರ್ಪಿಸಿದರು. ಈ ಲೇಖನವು ತಮ್ಮ ಉತ್ಪನ್ನ ಮತ್ತು ಪ್ರಯತ್ನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದೆ ಎಂದು ಶ್ಲಾಘಿಸಿದ್ದಾರೆ

ಮನ್ ಕೀ ಬಾತ್ ನಲ್ಲಿ ಖಡಕ್ ರೊಟ್ಟಿ ಬಗ್ಗೆ ಪ್ರಸ್ತಾಪ
ಇದು ಮಹಿಳಾ ಶಕ್ತಿ: ರೊಟ್ಟಿ ತಟ್ಟಿ ಬದುಕು ಕಟ್ಟಿಕೊಳ್ಳುತ್ತಿರುವ ಗಟ್ಟಿಗಿತ್ತಿಯರು; ಬೆನ್ನೆಲುಬಾಗಿ ನಿಂತ ಕಲಬುರಗಿ ಜಿಲ್ಲಾಡಳಿತ ಮಂಡಳಿ

TNIE ಜೊತೆ ಮಾತನಾಡಿದ ಸೊಸೈಟಿ ಅಧ್ಯಕ್ಷ ಶರಣು ಆರ್ ಪಾಟೀಲ್, ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯು ಸೊಸೈಟಿಗೆ ತನ್ನ ಕಚೇರಿ ಆವರಣದಲ್ಲಿ ಒಂದು ಮಳಿಗೆಯನ್ನು ತೆರೆಯಲು 10x10 ಚದರ ಅಡಿ ಜಾಗವನ್ನು ಒದಗಿಸಲು ಮುಂದೆ ಬಂದಿದೆ ಎಂದು ಹೇಳಿದ್ದರು. ಅದು ಕಾರ್ಯರೂಪಕ್ಕೆ ಬಂದರೆ, ಬೆಂಗಳೂರಿನಲ್ಲಿ ಕಲಬುರಗಿ ರೊಟ್ಟಿಯ ಎರಡನೇ ಫ್ರಾಂಚೈಸಿ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರಣಮ್ ಅವರು ಪ್ರಧಾನಿಯವರು ರೊಟ್ಟಿಗಳ ಬಗ್ಗೆ ಪ್ರಸ್ತಾಪಿಸಿರುವುದು ಜಿಲ್ಲಾಡಳಿತದ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಹೇಳಿದರು. ಇದು ಕಲಬುರಗಿ ಜಿಲ್ಲೆಯ ಮಹಿಳೆಯರು ತಮ್ಮ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಾವು ಮಹಿಳಾ ಸ್ವಸಹಾಯ ಗುಂಪುಗಳ ಜಾಲವನ್ನು ವಿಸ್ತರಿಸುತ್ತೇವೆ ಮತ್ತು ಸಾಧ್ಯವಾದಲ್ಲೆಲ್ಲಾ ಮಾರುಕಟ್ಟೆಯನ್ನು ಸುಧಾರಿಸುತ್ತೇವೆ" ಎಂದು ಅವರು ಹೇಳಿದರು.

ಮನ್ ಕಿ ಬಾತ್ ಉಲ್ಲೇಖವು ಕಲಬುರಗಿ ಜಿಲ್ಲೆಯಲ್ಲಿ ಜೋಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಆಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com