
ಬೆಂಗಳೂರು: ಬಿಡಿಎ ಮಂಡಳಿಯ ಸಭೆಯಲ್ಲಿ ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಡಾ. ಶಿವರಾಮ ಕಾರಂತ್ ಲೇಔಟ್ನಲ್ಲಿ ಮೂಲಸೌಕರ್ಯಗಳನ್ನು ಪೂರ್ಣಗೊಳಿಸಲು ಮೂರು ತಿಂಗಳ ವಿಸ್ತರಣೆ, ಬೆಂಗಳೂರು ವ್ಯಾಪಾರ ಕಾರಿಡಾರ್ (ಪಿಆರ್ಆರ್) ಗೆ ಸಲಹೆಗಾರರನ್ನು ನೇಮಿಸುವ ಪ್ರಕ್ರಿಯೆಯನ್ನು ಪ್ರಾರಂಭ ಹಾಗೂ ಸದಾಶಿವನಗರದಲ್ಲಿರುವ ಬಿಡಿಎಯ ವಾಣಿಜ್ಯ ಸಂಕೀರ್ಣದ ವಿವರವಾದ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಡಾ. ಕಾರಂತ್ ಲೇಔಟ್ 30,000 ನಿವೇಶನಗಳ ಹಂಚಿಕೆ ಮುಂದುವರೆಸಲು ಹೈಕೋರ್ಟ್ನ ಅನುಮೋದನೆಗಾಗಿ ಕಾಯುತ್ತಿದೆ. ಹಿರಿಯ ಅಧಿಕಾರಿಯೊಬ್ಬರು ಟಿಎನ್ಐಇ ಮಾಹಿತಿ ನೀಡಿದ್ದು, ಡಾ. ಕಾರಂತ್ ಲೇಔಟ್ನಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಬಹುತೇಕ ಶೇಕ 85ರಷ್ಟು ಪೂರ್ಣಗೊಂಡಿದೆ. ಇತ್ತೀಚೆಗೆ, ಸುಪ್ರೀಂ ಕೋರ್ಟ್ ಬಿಡಿಎಗೆ ಸುಮಾರು 200 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುಮತಿ ನೀಡಿತು, ಇದನ್ನು ಭೂಮಾಲೀಕರು ಈ ಹಿಂದೆ ವಿರೋಧಿಸಿದ್ದರು. ಈ ತಿಂಗಳ ಅಂತ್ಯದ ವೇಳೆಗೆ ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಈ ಕಾಮಗಾರಿಯಲ್ಲಿ ಭಾಗಿಯಾಗಿರುವ ಒಂಬತ್ತು ಗುತ್ತಿಗೆದಾರರಿಗೆ ಜೂನ್ ಅಂತ್ಯದವರೆಗೆ ಅವುಗಳನ್ನು ಪೂರ್ಣಗೊಳಿಸಲು ಮಂಡಳಿಯು ಗಡುವು ನೀಡಿದೆ.
ಸದಾಶಿವ ನಗರದಲ್ಲಿರುವ ಬಿಡಿಎ ವಾಣಿಜ್ಯ ಸಂಕೀರ್ಣದ ವಿವರವಾದ ಯೋಜನೆಗೆ ಮಂಡಳಿಯು ಹಸಿರು ನಿಶಾನೆ ತೋರಿಸಿದೆ. ಈ ಕ್ರಮಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು. ಆ ನಂತರ ಅದನ್ನು ಪುನರಾರಂಭಿಸಲಾಗಿತ್ತು. ಎರಡು ನೆಲಮಾಳಿಗೆಗಳು, ಒಂದು ನೆಲ ಮಹಡಿ ಮತ್ತು ಅದರ ಮೇಲೆ ನಾಲ್ಕು ಮಹಡಿಗಳನ್ನು ಹೊಂದುವುದು ಯೋಜನೆಯಾಗಿದೆ. ಗುತ್ತಿಗೆದಾರ ಎಂಫಾರ್ ಡೆವಲಪರ್ಸ್ ಕೇವಲ 1.97 ಎಫ್ಎಆರ್ (ನೆಲದ ವಿಸ್ತೀರ್ಣ ಅನುಪಾತ) ಯೋಜಿಸುತ್ತಿದ್ದು, 2.25 ಎಫ್ಎಆರ್ ಅನ್ನು ಅನುಮತಿಸಲಾಗಿದೆ. ಭವಿಷ್ಯದಲ್ಲಿ ಜಾಗವನ್ನು ಸಂಪೂರ್ಣವಾಗಿ ಬಳಸದಿರುವ ಬಗ್ಗೆ ಯಾವುದೇ ಪ್ರಶ್ನೆಗಳು ಉದ್ಭವಿಸದಂತೆ ಮಂಡಳಿಯ ಒಪ್ಪಿಗೆಯನ್ನು ನೀಡಲು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.
ಬಿಬಿಸಿ ಯೋಜನೆಗೆ ಸಲಹೆಗಾರರನ್ನು ನೇಮಿಸಲು ಟೆಂಡರ್ ನೀಡಲು ಸಹ ಮಂಡಳಿಯು ಅನುಮತಿ ನೀಡಿತು. ರೈತರು ಪರಿಹಾರದಿಂದ ತೃಪ್ತರಾಗದ ಕಾರಣ ಮತ್ತು ಸರ್ಕಾರವು ಅದನ್ನು ವಿಂಗಡಿಸಲು ವಿಶೇಷ ಸಮಿತಿಯನ್ನು ನೇಮಿಸಿರುವುದರಿಂದ ಯೋಜನೆಯು ಸ್ಥಗಿತಗೊಂಡಿತ್ತು.
Advertisement