ಬೆಂಗಳೂರಿನಲ್ಲಿ ಎರಡು ದಿನಗಳ 'ಉತ್ಪಾದನಾ ಮಂಥನ್‌' ಸಮಾವೇಶ: ಪೂರ್ವಭಾವಿ ಸಭೆ

ಮೇ 30 ಹಾಗೂ 31ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ 'ಸಮಾವೇಶದ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಸೋಮವಾರ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
MB Patil
ಎಂಬಿ ಪಾಟೀಲ್ ನೇತೃತ್ವದ ಸಭೆ
Updated on

ಬೆಂಗಳೂರು: ಕರ್ನಾಟಕವನ್ನು 'ಜಾಗತಿಕ ತಯಾರಿಕಾ ಕೇಂದ್ರ'ವನ್ನಾಗಿ ಅಭಿವೃದ್ಧಿಪಡಿಸುವ ಮುನ್ನೋಟ ಕುರಿತ '' ಉತ್ಪಾದನಾ ಮಂಥನ್‌' ಎರಡು ದಿನಗಳ ಚಿಂತನ – ಮಂಥನ ಸಮಾವೇಶವನ್ನು ರಾಜ್ಯ ಸರ್ಕಾರ ಆಯೋಜಿಸುತ್ತಿದೆ.

ಮೇ 30 ಹಾಗೂ 31ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ 'ಸಮಾವೇಶದ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಸೋಮವಾರ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಈ ಸಮಾವೇಶದಲ್ಲಿ ಪ್ರಮುಖ ತಯಾರಿಕಾ ವಲಯಗಳು ಮತ್ತು ನವೋದ್ಯಮಗಳ ಸಿಇಒಗಳು ಭಾಗವಹಿಸಲಿದ್ದಾರೆ. ವೈಮಾನಿಕ ಹಾಗೂ ರಕ್ಷಣೆ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಡ್ರೋನ್, ಎಲೆಕ್ಟ್ರಾನಿಕ್ಸ್‌, ಸೆಮಿ ಕಂಡಕ್ಟರ್, ಯಂತ್ರೋಪಕರಣ ಮತ್ತು ರೋಬೊಟಿಕ್ಸ್ , ವಿದ್ಯುತ್ ಚಾಲಿತ ವಾಹನಗಳು, ಜವಳಿ ಮತ್ತು ಟಾಯ್ಸ್ ನಂತಹ ಗ್ರಾಹಕ ಉತ್ಪನ್ನ ಕ್ಷೇತ್ರಗಳಲ್ಲಿನ ಪ್ರಗತಿ ಕುರಿತು ಚರ್ಚೆ ನಡೆಸಲಾಗುತ್ತದೆ.

ಸಮಾವೇಶದಲ್ಲಿ ಉದ್ಯಮ ದಿಗ್ಗಜರು ನೀತಿ ಮತ್ತು ಹೂಡಿಕೆ ಕಾರ್ಯತಂತ್ರದ ಬಗ್ಗೆ ರಾಜ್ಯ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.ಯಂತ್ರೋಪಕರಣ ಮತ್ತು ರೋಬೊಟಿಕ್ಸ್ , ವಿದ್ಯುತ್ ಚಾಲಿತ ವಾಹನಗಳು, ಜವಳಿ ಮತ್ತು ಟಾಯ್ಸ್ ನಂತಹ ಗ್ರಾಹಕ ಉತ್ಪನ್ನ ಕ್ಷೇತ್ರಗಳಲ್ಲಿನ ಪ್ರಗತಿ ಕುರಿತು ಚರ್ಚೆ ನಡೆಸಲಾಗುತ್ತದೆ.

ಸಮಾವೇಶದಲ್ಲಿ ಉದ್ಯಮ ದಿಗ್ಗಜರು ನೀತಿ ಮತ್ತು ಹೂಡಿಕೆ ಕಾರ್ಯತಂತ್ರದ ಬಗ್ಗೆ ರಾಜ್ಯ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com