
ಬೆಂಗಳೂರು: ವಸಂತ ನಗರದ ಕಂಟೋನ್ಮೆಂಟ್ ಕಾಲೋನಿಯಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಸಮಾಲೋಚನೆಯಲ್ಲಿ, 368 ಹಳೆಯ ಮರಗಳನ್ನು ಕತ್ತರಿಸುವ ಉದ್ದೇಶಿತ ವಾಣಿಜ್ಯ ಯೋಜನೆಗೆ ನಿವಾಸಿಗಳು ಮತ್ತು ಪರಿಸರ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆಯ
ಮರ ಕತ್ತರಿಸುವ ಪ್ರಸ್ತಾಪವನ್ನು ವಿರೋಧಿಸಿ 10,500 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ನಾವು ಇದರ ವಿರುದ್ಧ ದೃಢವಾಗಿ ನಿಲ್ಲುತ್ತೇವೆ ಎಂದು ಹೆರಿಟೇಜ್ ಬೇಕು ಸಂಸ್ಥಾಪಕಿ ಪ್ರಿಯಾ ಚೆಟ್ಟಿ ಹೇಳಿದರು.
ರೈಲ್ವೆ ಮತ್ತು ಅರಣ್ಯ ಇಲಾಖೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ನಿವಾಸಿಯೊಬ್ಬರು "ಅರಣ್ಯ ಇಲಾಖೆಯು ನಮ್ಮ ಮರಗಳನ್ನು ರಕ್ಷಿಸಬೇಕು. ಇಲ್ಲದಿದ್ದರೆ, ನಾವು ಅದನ್ನು ನಮ್ಮ ಕೈಯಲ್ಲಿ ತೆಗೆದುಕೊಂಡು ಈ ಪರಂಪರೆಯನ್ನು ಉಳಿಸಿಕೊಳ್ಳಲು ಏನು ಅಗತ್ಯವಿದೆಯೋ ಅದೆಲ್ಲಾವನ್ನು ಮಾಡುತ್ತೇವೆ ಎಂದು ಹೇಳಿದರು.
ಸುಧಾರಿತ ಸಂಚಾರ ನಿರ್ವಹಣೆ, ಸಾರ್ವಜನಿಕ ಅನುಕೂಲತೆ ಮತ್ತು ಹೆಚ್ಚಿದ ಆದಾಯದಂತಹ ಅಂಶಗಳನ್ನು ಉಲ್ಲೇಖಿಸಿ, ಪ್ರಸ್ತಾವಿತ ಯೋಜನೆಯ ಪ್ರಯೋಜನಗಳನ್ನು ರೈಲ್ವೆ ಅಧಿಕಾರಿಗಳು ವಿವರಿಸಿದರು. ಅವರ ವಾದಗಳನ್ನು ತಕ್ಷಣವೇ ತಿರಸ್ಕರಿಸಲಾಯಿತು. ಅನೇಕರು ಪ್ರಸ್ತಾವನೆಯನ್ನು ವೀಕ್ಷಿಸಲು ನಿರಾಕರಿಸಿದರು. ಈ ಯೋಜನೆಯ ಅಡಿಪಾಯ ಯಾವಾಗಲೂ ಸಾರ್ವಜನಿಕ ಕಾಳಜಿ ಮತ್ತು ಅಭಿಪ್ರಾಯಗಳನ್ನು ಆಧರಿಸಿರುತ್ತದೆ" ಎಂದು ರೈಲ್ವೆ ಅಧಿಕಾರಿಗಳು ಒತ್ತಿ ಹೇಳಿದರು.
ಈ ಮರಗಳು ನಗರಕ್ಕೆ ಸೇರಿವೆ. ಅವುಗಳನ್ನು ಕಡಿಯುವುದರಿಂದ ಗಳಿಸಿದ ಆದಾಯವು ಸರ್ಕಾರಕ್ಕೆ ಹೋಗುತ್ತದೆ ಎಂದು ನಂಬುವುದು ಹೇಗೆ?" ಹೆರಿಟೇಜ್ ಬೇಕು ಸದಸ್ಯೆ ಪ್ರಭಾ ದೇವ್ ಹೇಳಿದರು. "ಯಾವುದೇ ಯೋಜನೆಯ ಹಂತದಲ್ಲಿ ಸಾರ್ವಜನಿಕ ಸಮಾಲೋಚನೆ ಪ್ರಾರಂಭವಾಗಬೇಕು. ಈ ಸಂದರ್ಭದಲ್ಲಿ, ಅದು ತುಂಬಾ ತಡವಾಗಿ ಆಗಿದೆ. ನಾಗರಿಕರಾಗಿ, ನಮಗೆ ಪ್ರಶ್ನಿಸುವ ಹಕ್ಕಿದೆ" ಎಂದು ಅವರು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಮಿ ಮಾತನಾಡಿ "ಯೋಜನೆಯು ಅದರ ಅಂತಿಮ ಹಂತದಲ್ಲಿ ನಮಗೆ ಬಂದಿತು. ನಾವು ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೆವು ಮತ್ತು ಈಗ ಸಮುದಾಯವು ತನ್ನ ವಿರೋಧವನ್ನು ವ್ಯಕ್ತಪಡಿಸಿದೆ, ನಿಮ್ಮ ಆತಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
Advertisement