

ಬೆಂಗಳೂರು: ಫ್ಲೀಟ್ ಚಾಲಕರು ಮತ್ತು ಸ್ವತಂತ್ರ ಚಾಲಕರ ನಡುವೆ ಕಂಪನಿಯು ವಿಭಿನ್ನವಾಗಿ ವರ್ತಿಸುವುದರಿಂದ ಕಡಿಮೆ ಗಳಿಕೆಯಾಗಿದೆ ಎಂದು ಆರೋಪಿಸಿ ಹಲವಾರು ಕ್ಯಾಬ್ ಚಾಲಕರು ಸೋಮವಾರ ಉಬರ್ನ ಚಾಲಕ ಕೇಂದ್ರದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಚಾಲಕರ ಈ ಆರೋಪವನ್ನು ಸಂಸ್ಥೆ ತಳ್ಳಿಹಾಕಿದೆ. ಭಾರತ್ ಟ್ರಾನ್ಸ್ಪೋರ್ಟೇಶನ್ ಗ್ರೂಪ್ ಬ್ಯಾನರ್ ಅಡಿಯಲ್ಲಿ ಚಾಲಕರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ, ಕಂಪನಿಯು ರಾಜ್ಯದ ಹೊರಗಿನಿಂದ ಚಾಲಕರನ್ನು ನೇಮಿಸಿಕೊಳ್ಳುತ್ತಿದೆ ಇದು ಇಲ್ಲಿನ ಸ್ಥಳೀಯ ಚಾಲಕರ ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ಎಂದು ಆರೋಪಿಸಲಾಗಿದೆ.
ಕೆಲವು ಚಾಲಕರು ಬೀಗ ಹಾಕಿದ ಬಾಗಿಲನ್ನು ಮುರಿದು ಕಚೇರಿಗೆ ಪ್ರವೇಶಿಸಲು ಪ್ರಯತ್ನಿಸಿದ್ದು, ಪೊಲೀಸರು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದರು. ಉಬರ್ ಘಟನೆಯನ್ನು ಬಲವಾಗಿ ಖಂಡಿಸಿದ್ದು ಫ್ಲೀಟ್ ಚಾಲಕರು ಮತ್ತು ಸ್ವತಂತ್ರ ಚಾಲಕರ ನಡುವೆ ವಿಭಿನ್ನವಾಗಿ ವರ್ತಿಸಲಾಗಿದೆ ಎಂಬ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದೆ.
"ಬೆಂಗಳೂರಿನಲ್ಲಿರುವ ಉಬರ್ನ ಚಾಲಕ ಕೇಂದ್ರದ ಹೊರಗೆ ಜಮಾಯಿಸಿದ ಕೆಲವು ವ್ಯಕ್ತಿಗಳಿಂದ ಹಿಂಸಾಚಾರ ಮತ್ತು ಬೆದರಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಫ್ಲೀಟ್ ಚಾಲಕರು ಮತ್ತು ಸ್ವತಂತ್ರ ಚಾಲಕರ ನಡುವೆ ವಿಭಿನ್ನವಾಗಿ ವರ್ತಿಸಲಾಗಿದೆ ಎಂಬ ಯಾವುದೇ ಆರೋಪವನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ - ಅವರ ಕಾರ್ಯಾಚರಣೆಯ ಮಾದರಿಯನ್ನು ಲೆಕ್ಕಿಸದೆ ಎಲ್ಲರಿಗೂ ನ್ಯಾಯ, ಪಾರದರ್ಶಕತೆ ಮತ್ತು ಸಮಾನ ಅವಕಾಶವನ್ನು ಖಚಿತಪಡಿಸಿಕೊಳ್ಳಲು ನಮ್ಮ ನೀತಿಗಳನ್ನು ವಿನ್ಯಾಸಗೊಳಿಸಲಾಗಿದೆ" ಎಂದು ಸಂಸ್ಥೆ ಹೇಳಿದೆ.
ಇದು ಶೂನ್ಯ-ಕಮಿಷನ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಅಲ್ಲಿ ಚಾಲಕರು ನಾಮಮಾತ್ರ ಚಂದಾದಾರಿಕೆ ಶುಲ್ಕದ ನಂತರ 100 ಪ್ರತಿಶತ ದರಗಳನ್ನು ಉಳಿಸಿಕೊಳ್ಳುತ್ತಾರೆ ಎಂದು ಉಬರ್ ಹೇಳಿದೆ.
Advertisement