ನನ್ನ ತಪ್ಪು ಸಾಬೀತುಪಡಿಸಿ, ಅಧಿಕಾರ ದುರುಪಯೋಗಪಡಿಸಿಕೊಂಡು ನಿರ್ಬಂಧ ಹೇರಿದರೆ ಒಪ್ಪಲ್ಲ: ಸರ್ಕಾರಕ್ಕೆ ಪುನೀತ್ ಕೆರೆಹಳ್ಳಿ

ಸರ್ಕಾರದ ವಿರುದ್ಧ ಮಾತಾಡಬಾರದು ಎಂದು ಮೊನ್ನೆ ನನ್ನ ವಿರುದ್ಧ ನಿರ್ಬಂಧ ಏರಲಾಗಿತ್ತು ಈಗ ಮುಂದುವರಿದು ಪುನೀತ್ ಕೆರೆಹಳ್ಳಿ ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳನ್ನು ಬಳಸಬಾರದು ಎಂದು ನಿರ್ಬಂಧ ಏರಿದೆ.
Puneeth Kerehalli
ಪುನೀತ್ ಕೆರೆಹಳ್ಳಿ
Updated on

ಬೆಂಗಳೂರು: ತಮ್ಮ ವಿರುದ್ಧ ಮಾತನಾಡದಂತೆ ನಿರ್ಬಂಧ ಹೇರಿದ್ದ ರಾಜ್ಯ ಸರ್ಕಾರ, ಇದೀಗ ಸಾಮಾಜಿಕ ಜಾಲತಾಣವನ್ನೂ ಬಳಸದಂತೆ ನಿರ್ಬಂಧ ಹೇರಿರುವುದಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರು ತೀವ್ರವಾಗಿ ಕಿರಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕ ಸರ್ಕಾರ ನನ್ನ ಸಂಪೂರ್ಣ ವಾಕ್ ಸ್ವಾತಂತ್ರ್ಯವನ್ನು ಕಿತ್ತು ಕೊಂಡಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರದ ವಿರುದ್ಧ ಮಾತಾಡಬಾರದು ಎಂದು ಮೊನ್ನೆ ನನ್ನ ವಿರುದ್ಧ ನಿರ್ಬಂಧ ಏರಲಾಗಿತ್ತು ಈಗ ಮುಂದುವರಿದು ಪುನೀತ್ ಕೆರೆಹಳ್ಳಿ ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳನ್ನು ಬಳಸಬಾರದು ಎಂದು ನಿರ್ಬಂಧ ಏರಿದೆ.

ನಾನು ತಪ್ಪು ಮಾಡಿದ್ದರೆ ಮೊದಲು ನ್ಯಾಯಾಲಯದಲ್ಲಿ ಅದನ್ನು ರುಜುವಾತು ಮಾಡಲಿ ನಂತರ ನನ್ನ ಮೇಲೆ ನಿರ್ಬಂಧ ಏರಲಿ. ಅದು ಬಿಟ್ಟು ಈ ರೀತಿ ಕಾನೂನು ಮತ್ತು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನನ್ನ ಮೇಲೆ ನಿರ್ಬಂಧ ಹೇರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಈ ಟ್ವೀಟ್ ನನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬಿಜೆಪಿ ನಾಯಕ ಸಿಟಿ ರವಿ, ಪ್ರತಾಪ್ ಸಿಂಹ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರಿಗೂ ಟ್ಯಾಗ್ ಮಾಡಿದ್ದಾರೆ.

Puneeth Kerehalli
ಗೋಮಾಂಸ ಸಾಗಣೆ ಮಾಡುತ್ತಿದ್ದ ವಾಹನ ಅಡ್ಡಗಟ್ಟಿ ಹಲ್ಲೆ: ಪುನೀತ್ ಕೆರೆಹಳ್ಳಿ ಬಂಧನ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com