ಚನ್ನಪಟ್ಟಣ: ತೆಂಗಿನ ಮರದ ತಿರುಳಿನಾಸೆಗೆ ಬಂದ ಆನೆ ವಿದ್ಯುತ್ ತಂತಿಗೆ ಸಾವು!

ಶುಕ್ರವಾರ ರಾತ್ರಿ ಜಮೀನೊಂದರಲ್ಲಿ ತೆಂಗಿನಮರದ ಸುಳಿಯನ್ನು ಕಿತ್ತು ತಿನ್ನಲು‌ ಯತ್ನಿಸಿದಾಗ ತೆಂಗಿನ‌ ಮರ‌ದ‌ ಗರಿ 11ಕೆವಿ ವಿದ್ಯುತ್ ತಂತಿಗೆ ತಗುಲಿದ್ದರಿಂದ‌ ಸ್ಥಳದಲ್ಲೇ ಕಾಡಾನೆ‌ ಸಾವಿಗೀಡಾಗಿದೆ.
Elephant electrocuted in a farm at Chennapatna
ವಿದ್ಯುತ್ ಶಾಕ್ ಗೆ ಆನೆ ಬಲಿ
Updated on

ರಾಮನಗರ: ವಿದ್ಯುತ್ ಸ್ಪರ್ಶದಿಂದ ಕಾಡಾನೆ‌ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ಚಿಕ್ಕವಿಠಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಜಮೀನೊಂದರಲ್ಲಿ ತೆಂಗಿನಮರದ ಸುಳಿಯನ್ನು ಕಿತ್ತು ತಿನ್ನಲು‌ ಯತ್ನಿಸಿದಾಗ ತೆಂಗಿನ‌ ಮರ‌ದ‌ ಗರಿ 11ಕೆವಿ ವಿದ್ಯುತ್ ತಂತಿಗೆ ತಗುಲಿದ್ದರಿಂದ‌ ಸ್ಥಳದಲ್ಲೇ ಕಾಡಾನೆ‌ ಸಾವಿಗೀಡಾಗಿದೆ.

ಸುಮಾರು 40 ವರ್ಷದ ಹೆಣ್ಣು ಆನೆಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಸಾಗರ್ ತಿಳಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿನೀಡಿ ಪರಿಶೀಲನೆ ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ‌ ಮೃತ ಆನೆಯ ಮರಣೋತ್ತರ ‌ಪರೀಕ್ಷೆ ನಡೆಸಲಾಯಿತು. ಚಾಮರಾಜನಗರ ಜಿಲ್ಲೆಯ ಮಲೆ ಮಾದೇಶ್ವರ ಬೆಟ್ಟದಲ್ಲಿ ಹುಲಿ ಮೃತಪಟ್ಟ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ.

Elephant electrocuted in a farm at Chennapatna
MM Hills ನಲ್ಲಿ ಮತ್ತೆ ಹುಲಿ ಬೇಟೆ; ಹುಲಿಯ ಅರ್ಧ ಮೃತದೇಹ ಪತ್ತೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com