ಮೈಸೂರು ಅರಮನೆ ಬಳಿ ರೌಡಿ ಸಹಚರನ ಹತ್ಯೆ

ವೆಂಕಟೇಶ್, ಸುಮಾರು ಐದು ತಿಂಗಳ ಹಿಂದೆ ಮೈಸೂರಿನ ಹೊರವಲಯದಲ್ಲಿ ಹತ್ಯೆಯಾಗಿದ್ದ ಕುಖ್ಯಾತ ರೌಡಿ ಶೀಟರ್ ಕಾರ್ತಿಕ್ ಜೊತೆ ಗುರುತಿಸಿಕೊಂಡಿದ್ದ ಪ್ರಮುಖ ವ್ಯಕ್ತಿಯಾಗಿದ್ದ
Venkatesh
ಮೃತ ವೆಂಕಟೇಶ್
Updated on

ಮೈಸೂರು: ಮೈಸೂರಿನಲ್ಲಿ ಮತ್ತೆ ಗ್ಯಾಂಗ್‌ವಾರ್‌ನ ಸರಣಿ ಕೊಲೆಗಳು ಮುಂದುವರೆದಿದ್ದು, ಕೆಲವೇ ತಿಂಗಳ ಹಿಂದೆ ಹತ್ಯೆಯಾದ ರೌಡಿ ಶೀಟರ್ ಕಾರ್ತಿಕ್ ಹತ್ಯೆಯ ಬೆನ್ನಲ್ಲೇ, ಆತನ ಆಪ್ತ ಸಹಚರನಾಗಿದ್ದ ಗಿಲ್ಕಿ ವೆಂಕಟೇಶ್ ಎಂಬ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಕೊಲೆಯಾದ ಯುವಕನನ್ನು ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಯಾದ ಗಿಲ್ಕಿ ವೆಂಕಟೇಶ್ ಎಂದು ಗುರುತಿಸಲಾಗಿದೆ.

ವೆಂಕಟೇಶ್, ಸುಮಾರು ಐದು ತಿಂಗಳ ಹಿಂದೆ ಮೈಸೂರಿನ ಹೊರವಲಯದಲ್ಲಿ ಹತ್ಯೆಯಾಗಿದ್ದ ಕುಖ್ಯಾತ ರೌಡಿ ಶೀಟರ್ ಕಾರ್ತಿಕ್ ಜೊತೆ ಗುರುತಿಸಿಕೊಂಡಿದ್ದ ಪ್ರಮುಖ ವ್ಯಕ್ತಿಯಾಗಿದ್ದ. ಈ ಇಬ್ಬರೂ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.

ಕಾರ್ತಿಕ್‌ನ ಹತ್ಯೆಯು ನಗರದಲ್ಲಿನ ಎರಡು ಬಣಗಳ ನಡುವಿನ ಗ್ಯಾಂಗ್‌ವಾರ್‌ನ ಭಾಗ ಎಂದು ಪೊಲೀಸರು ಶಂಕಿಸಿದ್ದರು. ಈಗ ಕಾರ್ತಿಕ್‌ನ ಆಪ್ತನಾಗಿದ್ದ ವೆಂಕಟೇಶನ ಕೊಲೆಯೂ ಅದೇ ಗ್ಯಾಂಗ್‌ವಾರ್‌ನ ಮುಂದುವರೆದ ಭಾಗವಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

Venkatesh
ಹೊಸಪೇಟೆ: ಇನ್ಸೂರೆನ್ಸ್ ಹಣಕ್ಕಾಗಿ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ ಆರು ಜನರ ಗ್ಯಾಂಗ್‌ ಬಂಧನ!

ಮಂಗಳವಾರ ಬೆಳಿಗ್ಗೆ 11.45 ರ ಸುಮಾರಿಗೆ ವೆಂಕಟೇಶ್ ದಸರಾ ವಸ್ತು ಪ್ರದರ್ಶನ ಮೈದಾನದ ಬಳಿ ತನ್ನ ಕಾರನ್ನು ಚಲಾಯಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆಟೋ ಮತ್ತು ಬೈಕ್‌ನಲ್ಲಿ ಬಂದ ಆರು ಜನರ ತಂಡವು ವಾಹನ ಅಡ್ಡಗಟ್ಟಿದೆ. ಅವರು ಅವನ ಮೇಲೆ ಮೆಣಸಿನ ಪುಡಿ ಎಸೆದು, ನಂತರ ಮಚ್ಚುಗಳು ಮತ್ತು ಕತ್ತಿಗಳಿಂದ ಹಲ್ಲೆ ನಡೆಸಿ ಸ್ಥಳದಲ್ಲೇ ಕೊಂದಿದ್ದಾರೆ.

ಕಾರ್ತಿಕ್ ಮತ್ತು ಗಿಲ್ಕಿ ವೆಂಕಟೇಶ್ ಇಬ್ಬರ ನಡುವೆ ಹಣಕಾಸಿನ ವ್ಯವಹಾರಗಳು ಸಹ ಇತ್ತು ಎಂದು ಮೂಲಗಳು ತಿಳಿಸಿವೆ. ಕಾರ್ತಿಕ್‌ನ ಕೊಲೆಯ ನಂತರ, ಇದೇ ಹಣಕಾಸಿನ ವಿಚಾರಕ್ಕಾಗಿ ಈ ಹತ್ಯೆ ನಡೆದಿರಬಹುದೇ ಎಂಬ ದೃಷ್ಟಿಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com