Hassan: ಮೂರು ದಿನಗಳಲ್ಲಿ 3.5 ಲಕ್ಷಕ್ಕೂ ಅಧಿಕ ಭಕ್ತರಿಂದ 'ಹಾಸನಾಂಬೆ ದರ್ಶನ': ಲಡ್ಡು ಮಾರಾಟದಿಂದ ಸುಮಾರು ರೂ. 2.24 ಕೋಟಿ ಸಂಗ್ರಹ!

ಭಾನುವಾರ ಮಧ್ಯಾಹ್ನದ ವೇಳೆಗೆ ಜನಸಂದಣಿ ಹೆಚ್ಚಾಯಿತು. ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಿದ್ದರಿಂದ ಕೆಲವೇ ಗಂಟೆಗಳಲ್ಲಿ ದರ್ಶನ ಪಡೆಯಲು ಸಾಧ್ಯವಾಯಿತು.
Hasanamba temple
ಹಾಸನಾಂಬ ದೇವಸ್ಥಾನ
Updated on

ಹಾಸನ: ಹಾಸನಾಂಬ ದೇವಸ್ಥಾನದಲ್ಲಿ ಭಾನುವಾರವೂ ಸಾವಿರಾರು ಜನರು 'ಹಾಸನನಾಂಬೆ' ದರ್ಶನ ಪಡೆದರು. ಮೂರನೇ ದಿನ 3.5 ಲಕ್ಷಕ್ಕೂ ಹೆಚ್ಚು ಜನರು ದೇವರ ದರ್ಶನ ಪಡೆದು ಪುನೀತರಾದರು. ನೂಕುನುಗ್ಗಲು ಹೆಚ್ಚಿದ್ದರಿಂದ ಶನಿವಾರ ಸಂಜೆ 7 ಗಂಟೆಗೆ ದರ್ಶನವನ್ನು ನಿಲ್ಲಿಸಿ ಭಾನುವಾರ ಬೆಳಗ್ಗೆ 5 ಗಂಟೆಗೆ ಪುನರಾರಂಭಿಸಲಾಯಿತು. ಶನಿವಾರ ಮಧ್ಯರಾತ್ರಿಯಿಂದಲೇ ಸಾವಿರಾರು ಜನರು ದರ್ಶನಕ್ಕಾಗಿ ಕಾದು ಕುಳಿತಿದ್ದರು.

ಲಡ್ಡು ಮಾರಾಟದಿಂದ ರೂ. 2.24 ಕೋಟಿ ಸಂಗ್ರಹ: ಭಾನುವಾರ ಮಧ್ಯಾಹ್ನದ ವೇಳೆಗೆ ಜನಸಂದಣಿ ಹೆಚ್ಚಾಯಿತು. ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಿದ್ದರಿಂದ ಕೆಲವೇ ಗಂಟೆಗಳಲ್ಲಿ ದರ್ಶನ ಪಡೆಯಲು ಸಾಧ್ಯವಾಯಿತು. ರೂ. 300 ಮತ್ತು 1,000 ಟಿಕೆಟ್ ಖರೀದಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಲಡ್ಡು ಮಾರಾಟದ ಮೂಲಕ ದೇವಸ್ಥಾನವು ಸುಮಾರು 2.24 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯವಸ್ಥಿತ, ಸುಗಮ ದರ್ಶನ:

ಈ ವರ್ಷ ವ್ಯವಸ್ಥಿತ ಹಾಗೂ ಸುಗಮ ದರ್ಶನವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ರೂ. 1,000 ಟಿಕೆಟ್ ಖರೀದಿಸುವವರು 10 ನಿಮಿಷಗಳಲ್ಲಿ ಮತ್ತು ರೂ. 300 ಟಿಕೆಟ್ ಹೊಂದಿರುವವರು 30 ನಿಮಿಷದೊಳಗೆ ದರ್ಶನ ಪಡೆಯಬಹುದು. ಧರ್ಮ ದರ್ಶನವನ್ನು ಹೊಂದಿರುವವರು ಕನಿಷ್ಠ 30 ನಿಮಿಷದಿಂದ 2 ರಿಂದ 3 ಗಂಟೆಗಳವರೆಗೆ ಅದನ್ನು ಪೂರೈಸಲು ಸಾಧ್ಯವಾಗುತ್ತದೆ. ಎಲ್ಲವನ್ನೂ ಸುವ್ಯವಸ್ಥಿತಗೊಳಿಸಲಾಗುತ್ತಿದೆ ಎಂದರು.

ಅ. 18 ರಿಂದ ಭಕ್ತರ ಸಂಖ್ಯೆ ಹೆಚ್ಚಳದ ನಿರೀಕ್ಷೆ:

ಅಕ್ಟೋಬರ್ 18 ರಿಂದ 22 ರ ವರೆಗೆ ಜನಸಂದಣಿ ಹೆಚ್ಚಾಗುವ ನಿರೀಕ್ಷೆಯಿದ್ದು, ಅದಕ್ಕೂ ಮುನ್ನ ಭಕ್ತರು ದರ್ಶನ ಪಡೆದು ಸಹಕರಿಸುವಂತೆ ಕೋರಲಾಗಿದೆ. ಭಕ್ತರಿಗೆ ಮತ್ತು ದರ್ಶನಕ್ಕೆ ಸಹಾಯ ಮಾಡಲು 700 ಕ್ಕೂ ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ಮತ್ತು ರೇಂಜರ್‌ಗಳನ್ನು ನಿಯೋಜಿಸಲಾಗಿದೆ.

ದೇವಸ್ಥಾನದ ಸುತ್ತ 280ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅಧಿಕಾರಿಗಳು ದೇವಸ್ಥಾನದ ಬಳಿ ಇರುವ ನಿಯಂತ್ರಣ ಕೊಠಡಿಯಿಂದ ವೀಕ್ಷಿಸುತ್ತಿದ್ದಾರೆ. ಭಕ್ತರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಚಲನವಲನದ ಮೇಲೆ ಹಗಲಿರುಳು ನಿಗಾ ವಹಿಸಲಾಗಿದೆ. ಯಾವ ಸರತಿ ಸಾಲಿನಲ್ಲಿ ಹೆಚ್ಚು ಜನರಿದ್ದಾರೆ. ಯಾವ ಸಾಲುಗಳಲ್ಲಿ ಕಡಿಮೆ ಭಕ್ತರಿದ್ದಾರೆ ಎಂಬುದನ್ನು ಅವರು ವೀಕ್ಷಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೆ.

ವಿಐಪಿ, ವಿವಿಐಪಿ ಪಾಸ್‌ಗಳ ನಿಷೇಧ: ಜಿಲ್ಲಾಡಳಿತ ಈ ವರ್ಷ ವಿಐಪಿ, ವಿವಿಐಪಿ ಪಾಸ್‌ಗಳನ್ನು ನಿಷೇಧಿಸಿರುವುದರಿಂದ ಜಿಲ್ಲಾಡಳಿತಕ್ಕೆ ತೊಂದರೆಯಾಗದಂತೆ ಹಾಗೂ ಬೆಂಬಲಿಗರಿಗೆ ಬೇಸರವಾಗದಂತೆ ನೋಡಿಕೊಳ್ಳಲು ಹಾಸನ ಸಂಸದ ಶ್ರೇಯಸ್ ಪಟೇಲ್ ಅವರು ರೂ. 5 ಲಕ್ಷ ಮೌಲ್ಯದ ಸುಮಾರು 1200 ಟಿಕೆಟ್‌ಗಳನ್ನು ಖರೀದಿಸಿ ಪಕ್ಷದ ಕಾರ್ಯಕರ್ತರಿಗೆ ಹಂಚಿದ್ದರು. ಸಚಿವ ಕೃಷ್ಣ ಬೈರೇಗೌಡ ಕೂಡ ತಮ್ಮ ಕ್ಷೇತ್ರದ ಜನರಿಗೆ ರೂ. 5 ಲಕ್ಷ ಕೊಟ್ಟು ಟಿಕೆಟ್ ಖರೀದಿಸಿದ್ದರು ಎನ್ನಲಾಗಿದೆ.

Hasanamba temple
ಹಾಸನಾಂಬ ದರ್ಶನ: ಎರಡೇ ದಿನಗಳಲ್ಲಿ 2.24 ಕೋಟಿ ರೂ ಆದಾಯ; ಆರು ಸಿಬ್ಬಂದಿ ಅಮಾನತು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com