Financial relief: ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ 5 ಕೋಟಿ ರೂ ನೆರವು; ಇದು ನ್ಯಾಯವೇ ಸಿದ್ದರಾಮಯ್ಯ? ಬಿಜೆಪಿ ಆಕ್ರೋಶ

ಸಿದ್ದರಾಮಯ್ಯನವರೇ , ತಮ್ಮ ಮಾನವೀಯತೆ ಹೈಕಮಾಂಡ್ ಮೆಚ್ಚಿಸಲಾ?ಅಥವಾ ಕುರ್ಚಿ ಉಳಿಸಿಕೊಳ್ಳುವುದಕ್ಕಾ? ಎಂದು ಟೀಕಾ ಪ್ರಹಾರ
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ನಿರಂತರ ಮಳೆ ಹಾಗೂ ಹಠಾತ್ ಪ್ರವಾಹ, ಭೂಕುಸಿತದಿಂದ ನಲುಗಿರುವ ಹಿಮಾಚಲ ಪ್ರದೇಶದ ರಾಜ್ಯ ಪ್ರಕೃತಿ ವಿಕೋಪ ನಿಧಿಗೆ ಕರ್ನಾಟಕ ಸರ್ಕಾರ ರೂ. 5 ಕೋಟಿ ನೆರವು ನೀಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಇದು ನ್ಯಾಯವೇ ಸಿದ್ದರಾಮಯ್ಯ ಎಂದು ಪ್ರಶ್ನಿಸಿದೆ.

ಹಿಮಾಚಲ ಪ್ರದೇಶದ ನೆರೆಗೆ ರೂ.5 ಕೋಟಿ, ಕೇರಳ ಆನೆ ದುರಂತಕ್ಕೆ ರೂ.15 ಲಕ್ಷ, ವಯನಾಡಿಗೆ ರೂ. 10 ಕೋಟಿ, ದೂರದ ಹಿಮಾಚಲ ಪ್ರದೇಶದ ನೆರೆಗೆ ಮಿಡಿದು ರೂ. 5 ಕೋಟಿ ಪರಿಹಾರ ಘೋಷಿಸುವ ಮೂಲಕ ನಾಡ ವಿರೋಧಿ ಕಾಂಗ್ರೆಸ್ ಸರ್ಕಾರ ರಾಜ್ಯದ ನೆರೆ ಸಂತ್ರಸ್ತರನ್ನು ನಡು ನೀರಲ್ಲಿ ಕೈಬಿಟ್ಟು ದ್ರೋಹ ಬಗೆದಿದೆ ಎಂದು ಕಿಡಿಕಾರಿದೆ.

ಸಿದ್ದರಾಮಯ್ಯನವರೇ, ತಮ್ಮ ಮಾನವೀಯತೆ ಹೈಕಮಾಂಡ್ ಮೆಚ್ಚಿಸಲಾ? ಅಥವಾ ಕುರ್ಚಿ ಉಳಿಸಿಕೊಳ್ಳುವುದಕ್ಕಾ? ಎಂದು ಟೀಕಾ ಪ್ರಹಾರ ನಡೆಸಿದ್ದು, ಕೂಡಲೇ ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಿ ಹಾಗೇ ಹಾಸನದ ಅಮಾಯಕ ಮಕ್ಕಳ ಮೃತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಿ ಎಂದು ಒತ್ತಾಯಿಸಿದೆ.

CM Siddaramaiah
Himachal Rain Horror: ನೆರೆಯಿಂದ ತತ್ತರಿಸಿದ ಹಿಮಾಚಲ ಪ್ರದೇಶ: 404 ಜನರ ಸಾವು, 598 ರಸ್ತೆಗಳು ಬಂದ್!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com