ಅಗತ್ಯ ಔಷಧಿಗಳ ಬೆಲೆ ಏರಿಸುವ ಮೂಲಕ ಕನ್ನಡಿಗರ ಲೂಟಿ ಮಾಡುತ್ತಿರುವ ಕೇಂದ್ರ ಸರ್ಕಾರ: ರಣದೀಪ್ ಸುರ್ಜೇವಾಲಾ

ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ಜೀವನ ಕಸಿಯಲಿದೆ ಎಂದು ಆರೋಪಿಸಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸಾಂಕ್ರಾಮಿಕ ರೋಗಗಳು ಸೇರಿದಂತೆ 900 ಅಗತ್ಯ ಔಷಧಿಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ.
Randeep Singh Surjewala
ರಣದೀಪ್ ಸಿಂಗ್ ಸುರ್ಜೇವಾಲಾ
Updated on

ಬೆಂಗಳೂರು: ಏಪ್ರಿಲ್ 1 ರಿಂದ ಟೋಲ್‌, ಔಷಧ ಸೇರಿದಂತೆ ಕೆಲವು ವಸ್ತುಗಳ ಬೆಲೆ ಏರಿಕೆ ಆಗಲಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಜನರನ್ನು ಲೂಟಿ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ಜೀವನ ಕಸಿಯಲಿದೆ ಎಂದು ಆರೋಪಿಸಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸಾಂಕ್ರಾಮಿಕ ರೋಗಗಳು ಸೇರಿದಂತೆ 900 ಅಗತ್ಯ ಔಷಧಿಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ.

ಮೋದಿ ಸರ್ಕಾರ ಮತ್ತು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಐಸಿಯುಗಳಲ್ಲಿ ಬಳಸುವ ಮಧುಮೇಹ ಮತ್ತು ರೋಗನಿರೋಧಕ ಮೆರೊಫೆನ್ 500 MG ಸೇರಿದಂತೆ 31 ಔಷಧಿಗಳ ಬೆಲೆಗಳನ್ನು ಹೆಚ್ಚಿಸುತ್ತಿದೆ. ಅಗತ್ಯ ಔಷಧಿಗಳ ಮೇಲೆ ಜಿಎಸ್‌ಟಿ ವಿನಾಯಿತಿ ನೀಡಬೇಕೆಂಬ ಬೇಡಿಕೆಯ ಹೊರತಾಗಿಯೂ ಅದು ಶೇ. 12 ರಷ್ಟು ಜಿಎಸ್‌ಟಿ ವಿಧಿಸಿದೆ ಎಂದು ಆರೋಪಿಸಿದ್ದಾರೆ.

ಮಾರ್ಚ್ 2026 ರಿಂದ ಪ್ಲಾಸ್ಟಿಕ್ ಸರಕು ಸಾಮಾಗ್ರಿಗಳ ಬೆಲೆಗಳು ಶೇ. 50 ಹೆಚ್ಚಾಗಿದೆ. ಮಾರ್ಚ್ 25 ರಂದು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪಾಲಿಥಿಲೀನ್ ಬೆಲೆಯನ್ನು ಪ್ರತಿ ಟನ್‌ಗೆ 7,000 ರೂ.ಗಳಷ್ಟು ಹೆಚ್ಚಿಸಿದೆ. ಡಾಂಬರಿಗೆ ಬಳಸುವ ಪಾಲಿಪ್ರೊಪಿಲೀನ್ ಬಿಟುಮೆನ್ ಬೆಲೆ ಮಾರ್ಚ್ 2026 ರಲ್ಲಿ ಪ್ರತಿ ಟನ್‌ಗೆ 45,000 ರೂ.ಗಳಿಂದ 65,000 ರೂ.ಗಳಿಗೆ ಏರಿದೆ ಎಂದು ಅವರು ವಿವರಿಸಿದರು.

Randeep Singh Surjewala
ದಾವಣಗೆರೆ ದಕ್ಷಿಣ ಉಪಚುನಾವಣೆ: ಸಮರ್ಥ್ ಗೆಲುವು ಶತಸಿದ್ಧ; ಶೇ.79ರಷ್ಟು ಮತದಾರರ ಒಲವು ಕಾಂಗ್ರೆಸ್‌ ಪರ; ಡಿಕೆ ಶಿವಕುಮಾರ್

2026 ರ ಏಪ್ರಿಲ್‌ನಲ್ಲಿ ಸಿಮೆಂಟ್ ಬೆಲೆ ಪ್ರತಿ ಚೀಲಕ್ಕೆ 50-100 ರೂ.ಗಳಷ್ಟು ಹೆಚ್ಚಾಗುವ ಅಂದಾಜಿದೆ. ದೇಶದ ಸಿಮೆಂಟ್ ವಲಯವು ಅದಾನಿ ನಿಯಂತ್ರಣದಲ್ಲಿದೆ. ಹೀಗಾಗಿ ಅದರ ಬೆಲೆ ಮತ್ತಷ್ಟು ಹೆಚ್ಚಾಗಬಹುದು. ಕಬ್ಬಿಣದ ಬೆಲೆಗಳು ಸಹ ಇದೇ ರೀತಿಯಲ್ಲಿ ಏರುತ್ತಿವೆ, ಆದರೆ ಮೋದಿ ಸರ್ಕಾರವು ಮೂಕ ಪ್ರೇಕ್ಷಕನಾಗಿಯೇ ಉಳಿದಿದೆ ಎಂದು ಅವರು ಆರೋಪಿಸಿದರು.

ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ವಿಮಾನ ದರಗಳು ಶೇ. 10-15 ರಷ್ಟು ಹೆಚ್ಚಾಗಿದ್ದು, ಏರ್ ಇಂಡಿಯಾ ಮತ್ತು ಇಂಡಿಗೊ ಇಂಧನ ಸರ್‌ಚಾರ್ಜ್ ವಿಧಿಸಿವೆ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರವು ಕನ್ನಡಿಗರನ್ನು ಲೂಟಿ ಮಾಡುತ್ತಿರುವುದಕ್ಕೆ ಉತ್ತಮ ಉದಾಹರಣೆಯೆಂದರೆ, 2023 ರಿಂದ ಇಲ್ಲಿಯವರೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 900 ಕೋಟಿ ರೂ.ಗಳಷ್ಟು ಸಂಗ್ರಹವಾಗಿದೆ. ಈ ಮೊತ್ತವು ಏಪ್ರಿಲ್ 1 ರಿಂದ ಹೆಚ್ಚಾಗುತ್ತದೆ ರಣದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದರು.

2019-20 ರಿಂದ ಮೋದಿ ಸರ್ಕಾರವು ಟೋಲ್ ಹೆಚ್ಚಳ ಮತ್ತು ಟೋಲ್ ತೆರಿಗೆಯ ಮೂಲಕ 23,000 ಕೋಟಿ ರೂ.ಗಳಷ್ಟು ಸಂಗ್ರಹಿಸಿದೆ ಎಂದು ಅವರು ಹೇಳಿದರು. ಏಪ್ರಿಲ್ 1 ರಿಂದ ಕೇಂದ್ರವು ಟೋಲ್ ತೆರಿಗೆಯನ್ನು ಶೇ. 5 ರಷ್ಟು ಏರಿಕೆ ಮಾಡುತ್ತಿದ್ದು, ಇದು 250 ಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆಯನ್ನು ಹೇರಲಿದೆ.

ಕೇಂದ್ರವು ಸ್ಪೀಡ್ ಪೋಸ್ಟ್ ದರವನ್ನು ಶೇ. 34 ರಷ್ಟು ಹೆಚ್ಚಿಸಿದೆ, ಇದು ಇಂಡಿಯಾ ಪೋಸ್ಟ್ ಮೂಲಕ ಸಣ್ಣ ವಸ್ತುಗಳು ಅಥವಾ ದಾಖಲೆಗಳನ್ನು ಕಳುಹಿಸುವುದನ್ನು ದುಬಾರಿಯನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು. "ಮತ ಕೇಳುವ ಮೊದಲು, ಪ್ರಧಾನಿ ಮತ್ತು ಪ್ರತಿಯೊಬ್ಬ ಬಿಜೆಪಿ ನಾಯಕರು ಬೆಲೆ ಏರಿಕೆಗೆ ಉತ್ತರಿಸಬೇಕು" ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com