'ರೇವಣ್ಣ ಕಾಲಿಗೆ ಚಪ್ಪಲಿನೂ ಹಾಕಲ್ಲ, ಅದೆಷ್ಟು ದೇವಸ್ಥಾನ ಕಟ್ಟಿದ್ದಾನೋ, ಸ್ವಲ್ಪ ಕೋಪ ಜಾಸ್ತಿ ಅವನಿಗೆ': ಹೆಚ್.ಡಿ ಕುಮಾರಸ್ವಾಮಿ

ನಿನ್ನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉದ್ದನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ರೇವಣ್ಣ ಅವರು ದೇವಸ್ಥಾನಕ್ಕೆ ಹೋಗಿ ದೇವರ ಪ್ರಸಾದ ತೆಗೆದುಕೊಳ್ಳುವವರೆಗೆ ಕಾಲಿಗೆ ಚಪ್ಪಲಿನೂ ಹಾಕಲ್ಲ ಎಂದರು.
H D Kumaraswamy
ಹೆಚ್ ಡಿ ಕುಮಾರಸ್ವಾಮಿ
Updated on

ಹೊಳೆನರಸೀಪುರ: ನನ್ನ ಅಣ್ಣ ಹೆಚ್ ಡಿ ರೇವಣ್ಣ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ, ಅದೆಷ್ಟು ದೇವಸ್ಥಾನ ಕಟ್ಟಿದ್ದಾರೋ, ಇಡೀ ಹೊಳೆನರಸೀಪುರ ಹಾಸನ ಜಿಲ್ಲೆಯೊಳಗೆ ಸಾಕಷ್ಟು ದೇವಸ್ಥಾನ ಕಟ್ಟಿದ್ದಾರೆ, ದೇವರ ಮೇಲೆ ಅವನಿಗೆ ಅತೀವ ನಂಬಿಕೆ ಎಂದು ಸಹೋದರ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಿನ್ನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉದ್ದನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ರೇವಣ್ಣ ಅವರು ದೇವಸ್ಥಾನಕ್ಕೆ ಹೋಗಿ ದೇವರ ಪ್ರಸಾದ ತೆಗೆದುಕೊಳ್ಳುವವರೆಗೆ ಕಾಲಿಗೆ ಚಪ್ಪಲಿನೂ ಹಾಕಲ್ಲ, ಚಪ್ಪಲಿ ಹಾಕದೆ ಸಾಕಷ್ಟು ಬಾರಿ ವಿಧಾನ ಸೌಧಕ್ಕೂ ಹೋಗಿದ್ದಾರೆ. ಅಷ್ಟು ದೇವರ ಮೇಲೆ ಭಕ್ತಿ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.

H D Kumaraswamy
'ಒಮ್ಮೆ ನನ್ನ ಕೈಗೆ ಸರ್ಕಾರ ಕೊಡಿ, ಕರ್ನಾಟಕದಲ್ಲಿ ರಾಮರಾಜ್ಯ ಸ್ಥಾಪನೆ ಮಾಡಿ ತೋರಿಸುತ್ತೇನೆ; ನಾನು ಸಿಎಂ ಆದರೆ 5 ಸಾವಿರ ರೂ ಕೊಡುತ್ತೇನೆ': HDK

ದೇವರು ಅವರಿಗೆ ಸ್ವಲ್ಪ ಕೋಪ ಕೊಟ್ಟುಬಿಟ್ಟ, ಜನರ ಜೊತೆ ಸ್ವಲ್ಪ ಶಾಂತ ರೀತಿಯಲ್ಲಿ ವರ್ತಿಸುತ್ತಿದ್ದರೆ ಇನ್ನೂ ಎತ್ತರಕ್ಕೆ ಜನರು ತೆಗೆದುಕೊಂಡು ಹೋಗುತ್ತಿದ್ದರು. ಅದೊಂದನ್ನು ಸ್ವಲ್ಪ ಬದಲಾವಣೆ ಮಾಡಿಕೊ ಅಂತೀನಿ, ಅವರು ಮಾಡಿಕೊಳ್ಳಲ್ಲ ಎಂದು ಅಣ್ಣನ ಬಗ್ಗೆ ಗುಣಗಾನ ಮಾಡಿದರು.

ರೇವಣ್ಣ ಹೊರಗೆ ಜನರ ಜೊತೆ ಸ್ವಲ್ಪ ರೇಗೋದು ಸ್ವಲ್ಪ ಬೇಸರವಾಗಬಹುದು, ಆದರೆ ಅವನ ಹೃದಯದಲ್ಲಿ ಶುದ್ಧವಾಗಿದ್ದಾನೆ. ಈ ರಾಜ್ಯ ಮತ್ತು ಹಾಸನ ಜಿಲ್ಲೆಯ ಅಭಿವೃದ್ಧಿಗೆ ದೇವೇಗೌಡರ ಕನಸನ್ನು ನನಸು ಮಾಡುವ ದಿನ ದೂರವಿಲ್ಲ. ಈ ಜಿಲ್ಲೆಯ ಬಗ್ಗೆ ನಮ್ಮ ಬಗ್ಗೆ ವಿಶ್ವಾಸ ಇಡಿ ಎಂದು ಜನತೆಯನ್ನು ಕೇಳಿಕೊಂಡರು.

H D Kumaraswamy
Hassan: 'ಬಡ್ಡಿ ಸಮೇತ ತೀರಿಸೋವರ್ಗೂ ರಾಜಕೀಯದಲ್ಲಿ ಇರ್ತೀನಿ'; HDK ಮುಂದೆ HD Revanna ಕಣ್ಣೀರಿನ ಶಪಥ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com