ರಾಮನಾಮ ಜಪಿಸಿ ರಾಮನ ದುಡ್ಡನ್ನೇ ನುಂಗಿದ ಬಿಜೆಪಿಗರು ಸಂತರಾ? ನೆಹರೂ ಬಗ್ಗೆ ಮಾತಾಡಲು ರಾಮುಲುಗೆ ನೈತಿಕ ಹಕ್ಕಿಲ್ಲ; ತಂಗಡಗಿ

ಜನರಿಗೆ ಲೇಬಲ್‌ಗಳನ್ನು ನೀಡುವ ವಿಷಯದಲ್ಲಿ ಬಿಜೆಪಿ ನಾಯಕರು ನಂಬರ್ ಒನ್. ನಾಗೇಂದ್ರ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆಯೇ? ಆರೋಪಿ ಶಿಕ್ಷೆಗೊಳಗಾದ ವ್ಯಕ್ತಿಗಿಂತ ಭಿನ್ನ. ಎಸ್‌ಐಟಿ ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ನೀಡಿದೆ.
Shivaraj thangadagi
ಶಿವರಾಜ್ ತಂಗಡಗಿ
Updated on

ಕೊಪ್ಪಳ: ಬಿಜೆಪಿಯವರು ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯ ಮಾಡುತ್ತಿದೆ. ಮೊದಲು ತಮ್ಮ ಪಕ್ಷದ ನಾಯಕರ ವಿರುದ್ಧದ ಆರೋಪಗಳತ್ತ ಗಮನಹರಿಸಲಿ. ತಾವು ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಪ್ಪು ಎಂಬ ಮನೋಭಾವ ಬಿಜೆಪಿಯವರದ್ದು ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.

ಜವಾಹರಲಾಲ್​ ನೆಹರು ಭ್ರಷ್ಟಾಚಾರ ಆರಂಭಿಸಿದರು ಎಂಬ ಹೇಳಿಕೆ ನೀಡುತ್ತಿರುವ ಶ್ರೀರಾಮುಲುಗೆ ನೆಹರು ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ಬಿಜೆಪಿಯವರೆಲ್ಲರೂ ಸಾಚಾನಾ? ಸಂತರಾ, ಅವರು ಮೇಲಿಂದ ಬಂದವರಾ? ಎಂದರು. ರಾಮುಲು ಸ್ನೆಹಿತ ಜನಾರ್ದನ ರೆಡ್ಡಿ ದೊಡ್ಡ ಗುಡ್ಡವನ್ನೆ ನುಂಗಿ ಭ್ರಷ್ಟಚಾರ ಮಾಡಿದ ಆರೋಪಗಳಿದ್ದಾಗ ಭ್ರಷ್ಠಾಚಾರ ಕಾಣಿಸಲಿಲ್ಲವೇ? ಎಂದಿದ್ದಾರೆ.

ಜನರಿಗೆ ಲೇಬಲ್‌ಗಳನ್ನು ನೀಡುವ ವಿಷಯದಲ್ಲಿ ಬಿಜೆಪಿ ನಾಯಕರು ನಂಬರ್ ಒನ್. ನಾಗೇಂದ್ರ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆಯೇ? ಆರೋಪಿ ಶಿಕ್ಷೆಗೊಳಗಾದ ವ್ಯಕ್ತಿಗಿಂತ ಭಿನ್ನ. ಎಸ್‌ಐಟಿ ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಸಿಬಿಐ ತನಿಖೆಯ ಬೇಡಿಕೆಯ ಮೇರೆಗೆ ನಾವು ನ್ಯಾಯಾಲಯವನ್ನು ಸಂಪರ್ಕಿಸುತ್ತೇವೆ," ಎಂದು ಅವರು ಹೇಳಿದರು.

ನಾಗೇಂದ್ರ ರಾಜಿನಾಮೆ ನೀಡುವವರೆಗೂ ವಿಧಾನಸಭೆ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ? ರೈತರ ಸಮಸ್ಯೆಗಳು ಮತ್ತು ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆಯಲಿ. ಬಿಜೆಪಿ ನಾಯಕರು ಸಂತರಲ್ಲ; ಅವರೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ನನಗೆ ಯಾವುದೇ ಖಾತೆ ನೀಡಿ, ನಾನು ಪೂರ್ಣ ಹೃದಯದಿಂದ ಕೆಲಸ ಮಾಡುತ್ತೇನೆ" ಎಂದು ಅವರು ಹೇಳಿದರು.

Shivaraj thangadagi
ಕೇಸ್‌ಗಳು ಯಾರ ಮೇಲಿಲ್ಲ ಹೇಳ್ರಿ; HDK ಜಾಮೀನು ಪಡೆದುಕೊಂಡಿಲ್ಲವೇ: ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳಿಗೆ ಡಿಕೆಶಿ ತಿರುಗೇಟು

ಖಾತೆ ಹಂಚಿಕೆ ವಿಳಂಬದ ಬಗ್ಗೆ ನಮ್ಮ ಗಮನಕ್ಕೆ ಯಾವುದೇ ಮಾಹಿತಿ ಬಂದಿಲ್ಲ. ಮುಖ್ಯಮಂತ್ರಿ ಹಾಗೂ ಹೈಕಮಾಂಡ್​ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. ಬಹುಶ ಇಂದು ಖಾತೆ ಹಂಚಿಕೆಯಾಗಬಹುದು ಎಂಬ ನಿರೀಕ್ಷೆ ಇದೆ. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿಯೂ ಖಾತೆ ಹಂಚಿಕೆಯಾಗಲು ಸುಮಾರು 15 ದಿನ ವಿಳಂಬವಾಗಿತ್ತು.

ಆಗ ನಾನು ಸಚಿವರಾಗಿದ್ದೆ. ಬಿಜೆಪಿ ಆಡಳಿತದಲ್ಲಿಯೂ ಖಾತೆ ಹಂಚಿಕೆ ವಿಳಂಬವಾಗಿರುವ ಉದಾಹರಣೆಗಳಿವೆ. ಮಲ್ಲಿಕಾರ್ಜುನ ರ್ಖಗೆ ಅವರನ್ನು ಭೇಟಿಯಾಗಿ, ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿ, ಅವರ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com