ಶಿರಾಡಿಘಾಟ್‌ನಲ್ಲಿ Vande Bharat ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ..!

ನೈಋತ್ಯ ರೈಲ್ವೆಯ ಎಂಜಿನಿಯರ್‌ಗಳನ್ನು ಒಳಗೊಂಡ ತಾಂತ್ರಿಕ ತಂಡವು ಹಳಿಯನ್ನು ಪರಿಶೀಲಿಸಿ, ಘಾಟ್‌ ಮಾರ್ಗದಲ್ಲಿ ರೈಲಿನ ವೇಗ ಹಾಗೂ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಿತು.
Sakleshpur MLA Cement Manju flags off the Vande Bharat trial run
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ವಂದೇ ಭಾರತ್ ಪ್ರಾಯೋಗಿಕ ಸಂಚಾರಕ್ಕೆ ಬುಧವಾರ ಚಾಲನೆ ನೀಡಿದರು.
Updated on

ಹಾಸನ: ಶಿರಾಡಿಘಾಟ್‌ ಮಾರ್ಗದ ಸಕಲೇಶಪುರ-ಕುಕ್ಕೆ ಸುಬ್ರಹ್ಮಣ್ಯ ಜಂಕ್ಷನ್‌ ನಡುವೆ ವಂದೇ ಭಾರತ್‌ ರೈಲಿನ ಪ್ರಾಯೋಗಿಕ ಸಂಚಾರವನ್ನು ಬುಧವಾರ ಯಶಸ್ವಿಯಾಗಿ ನಡೆಸಲಾಯಿತು.

ಘಾಟ್‌ ಪ್ರದೇಶದ ತಿರುವುಗಳಲ್ಲಿ ರೈಲಿನ ನಿಯಂತ್ರಣಕ್ಕೆ ನೆರವಾಗುವ ಸ್ವಯಂಚಾಲಿತ ತುರ್ತು ಬ್ರೇಕಿಂಗ್‌ ವ್ಯವಸ್ಥೆಯನ್ನು ರೈಲಿನಲ್ಲಿ ಅಳವಡಿಸಲಾಗಿದೆ.

ಮಂಗಳೂರು ಮೂಲಕ ಬೆಂಗಳೂರು-ಮಡಗಾಂವ್‌ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ರೈಲು ಸೇವೆ ಆರಂಭವಾದರೆ, ವಿಶೇಷವಾಗಿ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾಣಿಜ್ಯ ಚಟುವಟಿಕೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.

ನೈಋತ್ಯ ರೈಲ್ವೆಯ ಎಂಜಿನಿಯರ್‌ಗಳನ್ನು ಒಳಗೊಂಡ ತಾಂತ್ರಿಕ ತಂಡವು ಹಳಿಯನ್ನು ಪರಿಶೀಲಿಸಿ, ಘಾಟ್‌ ಮಾರ್ಗದಲ್ಲಿ ರೈಲಿನ ವೇಗ ಹಾಗೂ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಿತು.

ಈ ಮಾರ್ಗದಲ್ಲಿ 52 ಸುರಂಗಗಳು ಹಾಗೂ ತೀವ್ರ ತಿರುವುಗಳು ಇದ್ದು, ಲೋಕೋ ಪೈಲಟ್‌ಗಳಿಗೆ ಇದು ಪ್ರಮುಖ ಸವಾಲಾಗಿದೆ.

Sakleshpur MLA Cement Manju flags off the Vande Bharat trial run
ಜೂನ್‌ನಲ್ಲೇ ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಸೇವೆ ಆರಂಭ: ಪ್ರಧಾನಿ ಮೋದಿ ಚಾಲನೆ; ಕೇಂದ್ರ ಸಚಿವ ವಿ. ಸೋಮಣ್ಣ

ಸಕಲೇಶಪುರ ಜಂಕ್ಷನ್‌ನಲ್ಲಿ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದ ಸಕಲೇಶಪುರ ಶಾಸಕ ಸಿಮೆಂಟ್‌ ಮಂಜು, ವಂದೇ ಭಾರತ್‌ ರೈಲು ಭಾರತಕ್ಕೆ ಹೆಮ್ಮೆಯ ವಿಚಾರ ಎಂದರು.

ಯಾವುದೇ ಅಡೆತಡೆಗಳಿದ್ದರೂ ಅವುಗಳನ್ನು ನಿವಾರಿಸಿ ಆದಷ್ಟು ಬೇಗ ಪ್ರಯಾಣಿಕರ ಸೇವೆ ಆರಂಭಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಬೆಂಗಳೂರು-ಮಂಗಳೂರು ನಡುವೆ ನಿಯಮಿತ ವಂದೇ ಭಾರತ್‌ ರೈಲು ಸೇವೆ ಆರಂಭಿಸುವಂತೆ ಸ್ಥಳೀಯರು ಕೂಡ ರೈಲ್ವೆ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com