

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ವಿಡಿಯೋವನ್ನು ವಾರಗಟ್ಟಲೇ ತೋರ್ಸಿದ್ದೇ ತೋರಿಸಿದ್ದು, ಗೃಹ ಇಲಾಖೆಯನ್ನು ಸ್ವಚ್ಛ ಮಾಡ್ತೀನಿ, ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡುವುದಿಲ್ಲ ಅಂತಾ ಹೇಳಿದ್ರಿ. ಆದರೆ ಏನನ್ನೂ ಮಾಡಲಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿ ಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರ್ಯಾರ ಧ್ವನಿಯನ್ನು ಹೇಗೆ ಅಡಗಿಸಿಬೇಕೆಂದು ಪ್ಲಾನ್ ಮಾಡ್ತೀದ್ದೀರಾ. ನಮ್ಮ ಧ್ವನಿಯನ್ನು ನೀವು ನಿಲ್ಲಿಸಲು ಆಗೋದಿಲ್ಲ, ಕೆಪಿಎಸ್ ಸಿ ಹಗರಣ ಗ್ಯಾನೇಂದ್ರ ಎಲ್ಲಿದ್ದಾನೋ ಗೊತ್ತಿಲ್ಲ ಎಂದು ಹೇಳುತ್ತಿರಲ್ಲ, ಹಾಗಿದ್ದ ಮೇಲೆ ಗೃಹ ಇಲಾಖೆಯನ್ನು ಏಕೆ ನಡೆಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಿಂದ ಆತ ಓಡಿ ಹೋಗಲು ನೀವೇ ಅವಕಾಶ ಮಾಡಿಕೊಟ್ಟಿದ್ದೀರಿ, ಏನಾದರೂ ನಿಮಗೆ ನಾಲಗೆಗೆ ಅಲ್ಪಸ್ವಲ್ಪ ಗೌರವ ಕೊಡೋದಿದ್ದೆ ಆದರೆ ಕೂಡಲೇ ರಾಜಿನಾಮೆ ನೀಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕಳೆದ ಹಲವು ದಿನಗಳಿಂದ ಏನು ನಡೆಯುತ್ತಿದೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ.
ಪಶುವೈದ್ಯಕೀಯ ವೈದ್ಯ ಹುದ್ದೆಗೆ, ನೇಮಕಾತಿ ಮಾಡಲು ಮತ್ತು ಕೆಪಿಎಸ್ಸಿ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಲು ಅವರು 80 ಲಕ್ಷ ರೂ. ನಿಗದಿಪಡಿಸಿದ್ದಾರೆ ಎಂದು ಯುವಕನೊಬ್ಬ ಆರೋಪಿಸಿದ್ದಾರೆ. ಎಂದು ಕುಮಾರಸ್ವಾಮಿ ಹೇಳಿದರು.
ಕಳೆದ ವಾರ ಜಾರಿ ನಿರ್ದೇಶನಾಲಯವು ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಅವರು ಹೇಳಿದರು. ಕರ್ನಾಟಕ ರಾಜ್ಯ ಸರಿಪಡಿಸಲಿಕ್ಕೆ ಯುವಕರು ನಿರುದ್ಯೋಗದ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡಬೇಕು. ಸರ್ಕಾರದ ವಿರುದ್ಧ ಹೋರಾಟಕ್ಕೆ ಯುವಕರಿಗೆ ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಆರ್ಎಸ್ಎಸ್ ಮೆರವಣಿಗೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅಧಿಕಾರಿಗಳ ಅಮಾನತುಗೆ ಪ್ರತಿಕ್ರಿಯಿಸಿದ ಅವರು, "ಅದು ವಿಷಯವಲ್ಲ. ಆರ್ಎಸ್ಎಸ್ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಅವರು ಯಾವ ಪ್ರಮುಖ ತಪ್ಪನ್ನು ಮಾಡಿದ್ದಾರೆ? ಅವರು ರಾಜ್ಯಕ್ಕೆ ಹಾನಿ ಮಾಡುತ್ತಿಲ್ಲ.
ಆರ್ಎಸ್ಎಸ್ ಸಭೆಗೆ ಹಾಜರಾಗುವುದರಿಂದ ಯಾವುದೇ ಹಾನಿಯಾಗಿದೆಯೇ? ಕರ್ನಾಟಕದಲ್ಲಿ ಯಾವುದೇ ಹಿಂಸಾಚಾರ ನಡೆದಿದೆಯೇ? ಎಂದು ಪ್ರಶ್ನಿಸಿದ್ದಾರೆ. ಪ್ರತಿನಿತ್ಯ ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಬದಲು ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಎಂದು ಪ್ರಿಯಾಂಕ್ ಖರ್ಗೆಗೆ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.