ಸಭೆಯಿಂದ ಎದ್ದು ಹೋಗ್ತೀನೀ?: SC-STಗೆ ಅನ್ಯಾಯ; ಸಚಿವ ಸಂತೋಷ್ ಲಾಡ್ ಮುಂದೆ Congress MLC ಗುಡುಗು, Video!

ಧಾರವಾಡದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ SC-ST ಸಮಾಜವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು Congress ಎಂಎಲ್ ಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನಡುವೆ ಜಟಾಪಟಿ ನಡೆದ ಪ್ರಸಂಗ ನಡೆಯಿತು.
ಸಭೆಯಿಂದ ಎದ್ದು ಹೋಗ್ತೀನೀ?: SC-STಗೆ ಅನ್ಯಾಯ; ಸಚಿವ ಸಂತೋಷ್ ಲಾಡ್ ಮುಂದೆ Congress MLC ಗುಡುಗು, Video!
Updated on

ಧಾರವಾಡ: ಧಾರವಾಡದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ SC-ST ಸಮಾಜವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು Congress ಎಂಎಲ್ ಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನಡುವೆ ಜಟಾಪಟಿ ನಡೆದ ಪ್ರಸಂಗ ನಡೆಯಿತು. ಸಚಿವ ಸಂತೋಷ್​ ಲಾಡ್ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ಪರಿಶೀಲನೆ ವೇಳೆ ಸಚಿವ ಲಾಡ್ ಹಾಗೂ ಎಂಎಲ್​ಸಿ FH ಜಕ್ಕಪ್ಪ ನಡುವೆ ವಾಗ್ವಾದ ನಡೆಯಿತು.

ಸಭೆಯಲ್ಲಿ ಮಾತನಾಡಿದ ಜಕ್ಕಪ್ಪ ನಾನು SC-ST ಸಮಾಜದ ಪರ ದ್ವನಿ ಎತ್ತುತ್ತಿದ್ದೇನೆ ಎಂದರು. ಈ ವೇಳೆ ಸಚಿವರು ಹಾಗೂ ಎಂಎಲ್​ಸಿ ನಡುವೆ ವಾಗ್ದಾಳಿ ನಡೆಯಿತು. ಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಜಕ್ಕಪ್ಪನವರ ಆರೋಪಿಸಿದರು. ಎಲ್ಲರಿಗೂ ಮಾತನಾಡಲು ಅವಕಾಶ ನೀಡಲಾಗುತ್ತಿದೆ. ವಾದ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವ ಲಾಡ್ ಹೇಳಿದರು.

ಈ ವೇಳೆ ಮಾತಿಗೆ ಮಾತು ಬೆಳೆದು ಸಭೆಯಿಂದ ಹೊರ ನಡೆಯುವುದಾಗಿ ಜಕ್ಕಪ್ಪನವರ ಹೇಳಿದರು. ಸಭೆಯಿಂದ‌ ಹೊರ ಹೋಗುವಂತೆ‌ ನಾನು ಹೇಳಿಲ್ಲ. ಹೋಗಬೇಕು ಅನಿಸಿದರೆ ಹೋಗಬಹುದು ಎಂದು ಲಾಡ್ ಹೇಳಿದರು. ಈ ವೇಳೆ ಅಧಿಕಾರಿಗಳು ಹಾಗೂ ಕಾಂಗ್ರೆಸ್ ನಾಯಕರ ಮಧ್ಯಸ್ಥಿಕೆ ವಹಿಸಿ ವಾಗ್ವಾದ ತಿಳಿಗೊಳಿಸಿದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಸಭೆಯಿಂದ ಎದ್ದು ಹೋಗ್ತೀನೀ?: SC-STಗೆ ಅನ್ಯಾಯ; ಸಚಿವ ಸಂತೋಷ್ ಲಾಡ್ ಮುಂದೆ Congress MLC ಗುಡುಗು, Video!
ನಾಯಕತ್ವ ಬದಲಾವಣೆ ಗದ್ದಲ ನಡುವೆ ಹೈಕಮಾಂಡ್ ಗೆ 31 ಮಂದಿ 'ಕೈ' ಶಾಸಕರು ಪತ್ರ; ಬೇಡಿಕೆ ಏನು ಗೊತ್ತಾ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com