ಭಾರತದ ಡಿಜಿಟಲ್ ಪಾವತಿ ಜರ್ನಿಯನ್ನು ದಾಖಲಿಸಿ: ನಾರಾಯಣ ಮೂರ್ತಿ

'ಡಿಸೈನಿಂಗ್ ಚೇಂಜ್: ಮೈ ಜರ್ನಿ ಥ್ರೂ ಡಿಜಿಟಲ್ ಪೇಮೆಂಟ್ಸ್ ಟ್ರಾನ್ಸ್‌ಫರ್ಮೇಷನ್' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮೂರ್ತಿ, ಯುಪಿಐ ಸಾಮಾನ್ಯ ಜನರ ವಿಶ್ವಾಸ ಗಳಿಸಿದೆ ಎಂದರು.
Narayana Murthy
ನಾರಾಯಣ ಮೂರ್ತಿ
Updated on

ಬೆಂಗಳೂರು: “ಭಾರತದಲ್ಲಿ ಡಿಜಿಟಲ್ ಪಾವತಿ ಬೆಳೆದುಬಂದ ಹಾದಿಯನ್ನು ತಂತ್ರಜ್ಞಾನದ ಯಶಸ್ಸಿನ ಜೊತೆಗೆ ಒಂದು ಕಥೆಯಾಗಿ ದಾಖಲಿಸುವುದು ಮುಖ್ಯ. ಆರ್‌ಬಿಐನಂತಹ ಸಂಸ್ಥೆಗಳು ಯುಪಿಐ ಅನ್ನು ಬಳಕೆದಾರರಿಗೆ ಅತ್ಯಂತ ಸುಲಭ ಮತ್ತು ಕಡಿಮೆ ವೆಚ್ಚದಾಯಕವಾಗಿಸುವ ಮೂಲಕ ಪರಿಣಾಮಕಾರಿಯಾಗಿಸಿವೆ” ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಶುಕ್ರವಾರ ಡಾ. ಬಾಲಕೃಷ್ಣನ್ ಮಹಾದೇವನ್ ಅವರು ಬರೆದ 'ಡಿಸೈನಿಂಗ್ ಚೇಂಜ್: ಮೈ ಜರ್ನಿ ಥ್ರೂ ಡಿಜಿಟಲ್ ಪೇಮೆಂಟ್ಸ್ ಟ್ರಾನ್ಸ್‌ಫರ್ಮೇಷನ್' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮೂರ್ತಿ, ಯುಪಿಐ ಸಾಮಾನ್ಯ ಜನರ ವಿಶ್ವಾಸ ಗಳಿಸಿದೆ. ನಿಮ್ಮಲ್ಲಿ ಹೆಚ್ಚಿನ ಆಕಾಂಕ್ಷೆಗಳನ್ನು ಹೊಂದಿರುವ ಮತ್ತು ಉತ್ತಮ ಉದ್ದೇಶ ಹೊಂದಿರುವ ನಾಯಕರು ಇದ್ದಾಗ, ನೀವು ರಾಷ್ಟ್ರವನ್ನು ಪರಿವರ್ತಿಸಬಹುದು ಎಂದರು.

ಭಾರತದ ರಾಷ್ಟ್ರೀಯ ಪಾವತಿ ನಿಗಮದ ಮಾಜಿ ಅಧ್ಯಕ್ಷರೂ ಆಗಿರುವ ನಾರಾಯಣ ಮೂರ್ತಿ, ಭಾರತದ ಡಿಜಿಟಲ್ ಪಾವತಿ ಯಶಸ್ಸು ಸಾರ್ವಜನಿಕ, ಪರಸ್ಪರ ಕಾರ್ಯನಿರ್ವಹಿಸಬಹುದಾದ ಮೂಲಸೌಕರ್ಯ ಮತ್ತು ಖಾಸಗಿ ನಾವೀನ್ಯತೆ ಮತ್ತು ನಾಯಕರ ನಡುವಿನ ವಿಶಿಷ್ಟ ಸಮತೋಲನದ ಮೇಲೆ ನಿಂತಿದೆ ಎಂದು ಎತ್ತಿ ತೋರಿಸಿದರು.

Narayana Murthy
Year Ender 2025: ಡಿಜಿಟಲ್ ಪಾವತಿ ಹೆಚ್ಚಳ; ಎಟಿಎಂಗಳ ಸಂಖ್ಯೆ ಇಳಿಕೆ

ನಾಯಕರು ಸರಳ ಜೀವನವನ್ನು ಅನುಸರಿಸಬೇಕು, ಶ್ರೀಮಂತಿಕೆಯ ಅಸಭ್ಯ ಪ್ರದರ್ಶನ ಬೇಡ. ಸಮಾಜಕ್ಕೆ ಮಾದರಿಯಾಗಬೇಕು ಎಂದು ನಾರಾಯಣ ಮೂರ್ತಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com