ಪಾಪದ ಹಣದಿಂದ ರಾಜಕೀಯ ಮಾಡಲ್ಲ: ಮನೆಯಿಂದ ಹಣ ತಂದು ರಾಜಕಾರಣ ಮಾಡೋಗುತ್ತಾ; ಆಲೂಗೆಡ್ಡೆ ಬೆಳೆದ ದುಡ್ಡಲ್ಲಿ ಪಕ್ಷ ನಡೆಸೋಕಾಗುತ್ತಾ?

ಚುನಾವಣೆ ಸಂದರ್ಭದಲ್ಲಿ ಮನೆಯಿಂದ ಹಣ ತಂದು ರಾಜಕಾರಣ ಮಾಡುವುದಕ್ಕಾಗುತ್ತಾ, ಆಲೂಗೆಡ್ಡೆ ಬೆಳೆದ ದುಡ್ಡಲ್ಲಿ ಪಕ್ಷವನ್ನು ನಡೆಸಲಿಕ್ಕಾಗುತ್ತಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
Union Minister HD Kumaraswamy
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
Updated on

ಮೈಸೂರು: ‘ಮುಖ್ಯಮಂತ್ರಿ ಆಗಿದ್ದಾಗ ಸಹಿ ಮಾರಾಟಕ್ಕೆ ಇಟ್ಟಿರಲಿಲ್ಲ. ಈಗಲೂ ಕೇಂದ್ರದಲ್ಲಿ ಸಚಿವನಾಗಿದ್ದೇನೆ, ಎರಡು ಇಲಾಖೆಗಳನ್ನು ವಿಶ್ವಾಸದಿಂದ ನಡೆಸಿಕೊಂಡು ಹೋಗುತ್ತಿದ್ದೇನೆ. ಅಲ್ಲೂ ನನ್ನ ಸಹಿಯನ್ನು ಮಾರಾಟಕ್ಕಿಟ್ಟಿಲ್ಲ ಎಂದು ಕೇಂದ್ರ ಸಚಿವ ಕುಮಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪಿಸುವವರಿಂದ ನಾನು ಪ್ರಮಾಣಪತ್ರ ಪಡೆದುಕೊಳ್ಳಬೇಕಿಲ್ಲ’ ಎಂದು ಹೇಳಿದರು. ನಮ್ಮೊಂದಿಗೇ ಇದ್ದು ಈಗ ಕಾಂಗ್ರೆಸ್‌ನಲ್ಲಿರುವವರು, ನನ್ನ ಬಂಡವಾಳವನ್ನೆಲ್ಲಾ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ, ಬಿಚ್ಚಿಡಲಿ’ ಎಂದು ಸವಾಲು ಹಾಕಿದರು.

ಚುನಾವಣೆ ಸಂದರ್ಭದಲ್ಲಿ ಮನೆಯಿಂದ ಹಣ ತಂದು ರಾಜಕಾರಣ ಮಾಡುವುದಕ್ಕಾಗುತ್ತಾ, ಆಲೂಗೆಡ್ಡೆ ಬೆಳೆದ ದುಡ್ಡಲ್ಲಿ ಪಕ್ಷವನ್ನು ನಡೆಸಲಿಕ್ಕಾಗುತ್ತಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ರಾಜ್ಯದಲ್ಲಿ ಲಾಟರಿ ನಿಷೇಧಿಸದಂತೆ ಕೋಟ್ಯಂತರ ರೂಪಾಯಿ ಸುರಿಯಲು ಬಂದಿದ್ದರು. ಪಾಪದ ಹಣದಿಂದ ರಾಜಕೀಯ ಮಾಡುವುದಿಲ್ಲ ಎಂದು ಅಧಿಕಾರಿಗೆ ಬೈದು ಕಳಿಸಿದ್ದೆ.

ಆದರೆ, ವಿಧಾನಪರಿಷತ್‌, ರಾಜ್ಯಸಭಾ ಚುನಾವಣೆಗಳ ಸಂದರ್ಭದಲ್ಲಿ ಟಿಕೆಟ್ ಕೊಡುವಾಗ ಪಕ್ಷಕ್ಕೆ ದೇಣಿಗೆ ತೆಗೆದುಕೊಂಡಿದ್ದೇನೆ. ಅದನ್ನು ಪಕ್ಷ ನಡೆಸಲು ಬಳಸಿದ್ದೇನೆ. ಅದನ್ನೇನೂ ನನ್ನ ಸ್ವಂತಕ್ಕೆ ಬಳಸಿಕೊಂಡಿಲ್ಲ’ ಎಂದರು.

Union Minister HD Kumaraswamy
ನಮ್ಮಲ್ಲಿ ನಾಲ್ಕು ಜನ ಅಡ್ಡ ಮತದಾನ ಮಾಡಿದ್ದಾರೆ, ಅದು ಯಾರೆಂದು ನನಗೆ ಗೊತ್ತಿದೆ, GT ದೇವೇಗೌಡ ವಿಷಯವೇ ನನ್ನಲ್ಲಿ ತೆಗೆಯಬೇಡಿ: HD ಕುಮಾರಸ್ವಾಮಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com