

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇಂದು ಮಂಗಳವಾರ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಸಂವಿಧಾನದ ಬಗ್ಗೆ ಕಾಂಗ್ರೆಸ್ಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಕಲಿಯಬೇಕಾದದ್ದೇನೂ ಇಲ್ಲ ಎಂದು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, 1950ರಲ್ಲಿ ಭಾರತೀಯ ಸಂವಿಧಾನ ಅಂಗೀಕರಿಸಲ್ಪಟ್ಟಾಗ ಆರ್ಎಸ್ಎಸ್ ಅದನ್ನು ವಿರೋಧಿಸಿತ್ತು ಎಂದು ಆರೋಪಿಸಿದರು.
ಸಂವಿಧಾನದ ಬಗ್ಗೆ ನಮಗೆ ಮೋದಿ ಅವರಿಂದ ಕಲಿಯಬೇಕಾದ ಅಗತ್ಯವಿಲ್ಲ. ಅವರು ಸಂವಿಧಾನವನ್ನು ನಿರ್ಲಕ್ಷಿಸಿದ್ದ ಚಿಂತನಾ ಪರಂಪರೆಯಿಂದ ಬಂದವರು. ಆರ್ಎಸ್ಎಸ್ ತಮ್ಮ ಸಂಪಾದಕೀಯದಲ್ಲಿ ಸ್ಪಷ್ಟವಾಗಿ ಸಂವಿಧಾನವನ್ನು ತಿರಸ್ಕರಿಸುತ್ತೇವೆ ಎಂದು ಬರೆದಿತ್ತು.
ದೆಹಲಿಯ ರಾಮಲೀಲಾ ಮೈದಾನದಲ್ಲಿ 150ಕ್ಕೂ ಹೆಚ್ಚು ಪ್ರತಿಭಟನೆಗಳನ್ನು ನಡೆಸಿ, ಮಹರ್ಷಿ ನೆಹರು ಮತ್ತು ಋಷಿ ಅಂಬೇಡ್ಕರ್ ವೇದಗಳನ್ನು ಮುಗಿಸಿ ‘ಸಂವಿಧಾನ’ ಎಂಬುದನ್ನು ತರುತ್ತಿದ್ದಾರೆ, ನಾವು ಅದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ; ದೇಶದ ಸಂವಿಧಾನವಾಗಿ ಮನುಸ್ಮೃತಿಯೇ ಬೇಕು ಎಂದು ಹೇಳಿದ್ದರು. ಅಂತಹ ಹಿನ್ನೆಲೆಯವರಿಂದ ನಮಗೆ ಸಂವಿಧಾನದ ಪಾಠ ಬೇಕೇ? ಸಂಸತ್ತು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನೀವು ನೋಡುತ್ತಿಲ್ಲವೇ ಎಂದು ಕೇಳಿದರು.
ಖರ್ಗೆ ಅವರ ಈ ಹೇಳಿಕೆ, ಸಂವಿಧಾನ ಮತ್ತು ನಕ್ಸಲ್ ವಾದ ವಿಷಯದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ ಬೆನ್ನಲ್ಲೇ ಬಂದಿದೆ.
ನಿನ್ನೆ ಸೋಮವಾರ ನಡೆದ ರಿಪಬ್ಲಿಕ್ ಟಿವಿ ಸಮ್ಮಿಟ್ ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ನಕ್ಸಲರ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದ್ದರು.
ಇತ್ತೀಚೆಗೆ ಸದಾ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗುವವರು, ಅಧಿಕಾರದಲ್ಲಿದ್ದಾಗ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಂವಿಧಾನದ ಬಗ್ಗೆ ಮಾತನಾಡಿದ ಕಾರಣಕ್ಕೆ ಜನರನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿತ್ತು. ಆಗ ಅವರ ಕೈಯಲ್ಲಿ ಸಂವಿಧಾನ ಕಾಣಿಸಲಿಲ್ಲ; ಅವರ ಕೈಗಳು ನಡುಗುತ್ತಿದ್ದವು. ಆ ಭೀಕರ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ಬಹುತೇಕ ನಿರ್ಲಕ್ಷ್ಯ ತೋರಿತು. 2014ರ ನಂತರ ನಾವು ‘ರಾಷ್ಟ್ರ ಮೊದಲಿಗೆ’ ಎಂಬ ಮನೋಭಾವದೊಂದಿಗೆ ಪರಿಸ್ಥಿತಿಯನ್ನು ಬದಲಾಯಿಸುವ ಕಾರ್ಯ ಆರಂಭಿಸಿದೆವು ಎಂದು ಪ್ರಧಾನಿ ಮೋದಿ ಹೇಳಿದ್ದರು.
ಅಧಿಕೃತವಾಗಿ ಆರ್ ಎಸ್ ಎಸ್ ನೋಂದಣಿ ಮಾಡಿಸಿಕೊಳ್ಳಲಿ
ಸಂವಿಧಾನದ ಕುರಿತ ಟೀಕೆಗಳ ಜೊತೆಗೆ, ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ವಿರುದ್ಧದ ತಮ್ಮ ಟೀಕೆಯನ್ನು ಮುಂದುವರಿಸಿ, ಸಂಘವು ಅಧಿಕೃತವಾಗಿ ನೋಂದಣಿ ಮಾಡಿಕೊಂಡು ತನ್ನ ದಾಖಲೆಗಳನ್ನು ಸಾರ್ವಜನಿಕವಾಗಿ ಮಂಡಿಸಬೇಕು ಎಂದು ಆಗ್ರಹಿಸಿದರು.
Advertisement