ಕುಮಾರಣ್ಣ ಹೇಳ್ದಂಗೆ ರೈತರ ಎದುರಿಗೆ ಚರ್ಚಿಸೋದಕ್ಕೆ ಸಮಸ್ಯೆಯೇನು ಡಿಕೆಶಿಯವ್ರೆ ? ಪ್ರತಾಪ್ ಸಿಂಹ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಚರ್ಚೆಗೆ ಆಹ್ವಾನಿಸಿರುವುದನ್ನು ಉಲ್ಲೇಖಿಸಿದ ಪ್ರತಾಪ್‌ ಸಿಂಹ, ಚರ್ಚೆ ನಡೆಯಬೇಕಿರುವುದು ವಿಧಾನಸೌಧದಲ್ಲಲ್ಲ. ರೈತರ ಮಧ್ಯೆ ಹೋಗಿ ಮಾತುಕತೆ ನಡೆಸಬೇಕು ಎಂದರು.
Pratap Simha
ಪ್ರತಾಪ್ ಸಿಂಹ
Updated on

ಹಾಸನ: ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರು ಸ್ವಇಚ್ಛೆಯಿಂದ ಜಮೀನು ನೀಡಿದರೆ ಸಮಸ್ಯೆಯಿಲ್ಲ. ಆದರೆ ಅವರ ಹಕ್ಕುಗಳನ್ನು ಗೌರವಿಸಬೇಕು. ರೈತರೊಂದಿಗೆ ನೇರವಾಗಿ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಬೇಕು. ಬಲವಂತದ ಭೂಸ್ವಾಧೀನ ಬೇಡ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಚರ್ಚೆಗೆ ಆಹ್ವಾನಿಸಿರುವುದನ್ನು ಉಲ್ಲೇಖಿಸಿದ ಪ್ರತಾಪ್‌ ಸಿಂಹ, ಚರ್ಚೆ ನಡೆಯಬೇಕಿರುವುದು ವಿಧಾನಸೌಧದಲ್ಲಲ್ಲ. ರೈತರ ಮಧ್ಯೆ ಹೋಗಿ ಮಾತುಕತೆ ನಡೆಸಬೇಕು ಎಂದರು.

ನಾಗಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಉದ್ದೇಶ ಸ್ವಾಗತಾರ್ಹ. ಆದರೆ ಕೈಗಾರಿಕೆಗಳನ್ನು ಸರ್ಕಾರಿ ಅಥವಾ ಬಂಜರು ಭೂಮಿಯಲ್ಲಿ ಸ್ಥಾಪಿಸಬೇಕು. ರೈತರ ಜಮೀನನ್ನು ಅಧಿಕಾರದ ಬಲದಿಂದ ಕಿತ್ತುಕೊಳ್ಳುವುದು ಸರಿಯಲ್ಲ ಎಂದರು.

ಕೈಗಾರಿಕಾ ಅಭಿವೃದ್ಧಿ ಅಗತ್ಯವಾದರೂ, ಅದರಲ್ಲೂ ರೈತರಿಗೆ ಪಾಲುದಾರಿಕೆ ನೀಡಬೇಕು. ನಾನು ಮಾಡಿಯೇ ತೀರುತ್ತೇನೆ ಎನ್ನುವ ಧೋರಣೆ ಪ್ರಜಾಪ್ರಭುತ್ವಕ್ಕೆ ಸೂಕ್ತವಲ್ಲ ಎಂದು ಹೇಳಿದರು.

Pratap Simha
ಬಿಡದಿ ಟೌನ್ ಶಿಪ್ ಗೆ HDK ವಿರೋಧ ಶುದ್ಧ ನಾಟಕ: ಅಲ್ಲಿ ಅನಿತಾ ಕುಮಾರಸ್ವಾಮಿಯದ್ದು 100 ಎಕರೆ ಜಮೀನಿದೆ- ಎಂ.ಬಿ ಪಾಟೀಲ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com