'ಕೇಂದ್ರದ ಅನುದಾನಕ್ಕೆ ಕಾನೂನಾತ್ಮಕವಾಗಿ ಹೋರಾಟ ಮಾಡೋಣ': ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರ ಒತ್ತಾಯ

ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಬಿಜೆಪಿ ಆಡಳಿತದ ರಾಜ್ಯಗಳು ಬಹುಮತದಲ್ಲಿವೆ. ಆದ್ದರಿಂದ ನಾವು ಕಾನೂನು ಆಯ್ಕೆಗಳನ್ನೂ ಪರಿಶೀಲಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
Workshop on state budget and allocation of funds
ಕರ್ನಾಟಕ ವಿಧಾನ ಮಂಡಲದಿಂದ ಶಾಸಕರುಗಳಿಗೆ ಆಯೋಜಿಸಿದ್ದ "ಆಯವ್ಯಯ, ರಾಜಸ್ವ ಸಂಗ್ರಹಣೆ, ಅನುದಾನಗಳ ವರ್ಗೀಕರಣ ಹಾಗೂ ಆಯವ್ಯಯ ಅನುದಾನ ಬಳಕೆ ಮತ್ತು ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಮತ್ತು ಶಾಸಕರು ಭಾಗವಹಿಸಿದ್ದರು.
Updated on

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮುನ್ನ ಅಭಿವೃದ್ಧಿ ಕಾರ್ಯಗಳಿಗೆ ನಿಧಿಗಳ ಕೊರತೆ ತೀವ್ರವಾಗಿರುವುದನ್ನು ಉಲ್ಲೇಖಿಸಿ, ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಅನುದಾನಗಳು ಮತ್ತು ಜಿಎಸ್‌ಟಿ ಸಂಗ್ರಹಣೆಯಲ್ಲಿ ರಾಜ್ಯದ ನ್ಯಾಯಯುತ’ಪಾಲಿಗಾಗಿ ಕಾನೂನು ಹೋರಾಟ ನಡೆಸುವಂತೆ ಒತ್ತಾಯಿಸಿದರು.

ಎಂಎಲ್‌ಸಿ ರಮೇಶ್ ಬಾಬು, ಕರ್ನಾಟಕವು ಜಿಎಸ್‌ಟಿ ಸಂಗ್ರಹಣೆಯಲ್ಲಿ ತನ್ನ ನ್ಯಾಯಯುತ ಪಾಲನ್ನು ಹೇಗೆ ಪಡೆಯಬಹುದು ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲು ವಿಫಲವಾದರೆ,ನ್ಯಾಯಾಲಯದ ಮೂಲಕ ಹೋರಾಟ ನಡೆಸಬೇಕು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹಾಗೂ ಮುಖ್ಯಮಂತ್ರಿಯ ಕಾನೂನು ಸಲಹೆಗಾರರು ಸಲಹೆ ನೀಡಿದರು.

ಕರ್ನಾಟಕ ವಿಧಾನ ಮಂಡಲದಿಂದ ಶಾಸಕರುಗಳಿಗೆ ಆಯೋಜಿಸಿದ್ದ "ಆಯವ್ಯಯ, ರಾಜಸ್ವ ಸಂಗ್ರಹಣೆ, ಅನುದಾನಗಳ ವರ್ಗೀಕರಣ ಹಾಗೂ ಆಯವ್ಯಯ ಅನುದಾನ ಬಳಕೆ ಮತ್ತು ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಮತ್ತು ಶಾಸಕರು ಭಾಗವಹಿಸಿದ್ದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ನಿಧಿಗಳು ಅಗತ್ಯ,” ಎಂದು ಶಾಸಕ ಕೋನರೆಡ್ಡಿ ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಬಿಜೆಪಿ ಆಡಳಿತದ ರಾಜ್ಯಗಳು ಬಹುಮತದಲ್ಲಿವೆ. ಆದ್ದರಿಂದ ನಾವು ಕಾನೂನು ಆಯ್ಕೆಗಳನ್ನೂ ಪರಿಶೀಲಿಸುತ್ತಿದ್ದೇವೆ. ಈ ಹಿಂದೆ ಕೂಡ ಕರ್ನಾಟಕ ಸರ್ಕಾರ ಕಾನೂನು ಹೋರಾಟದ ನಂತರ ಕೇಂದ್ರದಿಂದ ಬರ ಪರಿಹಾರವಾಗಿ 3,000 ಕೋಟಿ ರೂಪಾಯಿ ಪಡೆಯಲು ಸಾಧ್ಯವಾಗಿತ್ತು ಎಂದು ನೆನಪಿಸಿದರು.


ಮುಖ್ಯಮಂತ್ರಿಗಳಿಂದ ಶಾಸಕರಿಗೆ ಸಿಎಂ ಪಾಠ

ನಿನ್ನೆ ಶಾಸಕರೊಂದಿಗೆ ಸಭೆ ನಡೆಸಿ ಸಂವಾದ ನಡೆಸಿದ ಮುಖ್ಯಮಂತ್ರಿ, ರಾಜ್ಯ ಬಜೆಟ್ ಮತ್ತು ಹಣಕಾಸು ನಿರ್ವಹಣೆಯ ಮೂಲಭೂತ ಅಂಶಗಳನ್ನು ವಿವರಿಸಿದರು. ಕರ್ನಾಟಕವು ಅತಿಯಾದ ಸಾಲಗಳ ಮೇಲೆ ನಡೆಯುತ್ತಿದೆ ಎಂಬ ಪ್ರತಿಪಕ್ಷದ ಆರೋಪಕ್ಕೂ ಅವರು ಉತ್ತರಿಸಿದರು.

ಹಣಕಾಸು ಜವಾಬ್ದಾರಿ ಕಾಯ್ದೆಯ ಪ್ರಕಾರ ಹಣಕಾಸು ಕೊರತೆ (Fiscal deficit) ಒಟ್ಟು ದೇಶೀಯ ಉತ್ಪನ್ನದ (GSDP) 3 ಶೇಕಡಾ ಒಳಗೆ ಇರಬೇಕು ಹಾಗೂ ಸಾರ್ವಜನಿಕ ಸಾಲವು 25 ಶೇಕಡಾ ಮೀರಬಾರದು ಎಂದು ಅವರು ತಿಳಿಸಿದರು.

ಈ ವರ್ಷ ಒಟ್ಟು ಸಾಲವು 1.32 ಲಕ್ಷ ಕೋಟಿ ರೂಪಾಯಿ. ರಾಜ್ಯದ ಬಾಕಿ ಸಾಲವು 8.24 ಲಕ್ಷ ಕೋಟಿ ರೂಪಾಯಿ. ಹಣಕಾಸು ಕೊರತೆ GSDPಯ 2.94% ಮತ್ತು ಸಾಲವು 24.94% ಆಗಿದೆ. ಹಿಂದಿನ ಬಜೆಟ್‌ಗಳಲ್ಲಿ ಆದಾಯ ಹೆಚ್ಚುವರಿ (Revenue Surplus) ಇತ್ತು. ಆದರೆ ಕಳೆದ ವರ್ಷ 19,000 ಕೋಟಿ ರೂಪಾಯಿ ಆದಾಯ ಕೊರತೆ ದಾಖಲಾಗಿದ್ದು, ಮುಂದಿನ ವರ್ಷ ಅದು 22,000 ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

Workshop on state budget and allocation of funds
GST ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ, ಆದರೆ ರಾಜ್ಯಕ್ಕೆ ಅನುದಾನ ಕಡಿಮೆ: ಸಿಎಂ ಸಿದ್ದರಾಮಯ್ಯ

ಜಿಎಸ್‌ಟಿ ದರಗಳ ಪುನರ್‌ವ್ಯವಸ್ಥೆಯಿಂದ ಜಿಎಸ್‌ಟಿ ಬೆಳವಣಿಗೆ 10%ರಿಂದ 4%ಕ್ಕೆ ಕುಸಿದಿದೆ. ಜೊತೆಗೆ 2022 ನಂತರ ರಾಜ್ಯಗಳಿಗೆ ನೀಡುತ್ತಿದ್ದ ಜಿಎಸ್‌ಟಿ ಪರಿಹಾರವನ್ನು ನಿಲ್ಲಿಸಲಾಗಿದೆ ಹಾಗೂ ಕೇಂದ್ರದ ಯೋಜನೆಗಳಿಗೆ ನೀಡುವ ಅನುದಾನವೂ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಭರವಸೆ ಯೋಜನೆಗಳನ್ನು (Guarantee Schemes) ನಡೆಸಲು ರಾಜ್ಯವು ದೊಡ್ಡ ಸಾಲ ಮಾಡುತ್ತಿದೆ ಎಂಬ ಬಿಜೆಪಿ ಟೀಕೆಗೆ ಹೇಗೆ ಉತ್ತರಿಸಬೇಕು ಎಂಬುದನ್ನೂ ಶಾಸಕರು ಕೇಳಿದರು.

ಮನಮೋಹನ್ ಸಿಂಗ್ ಸರ್ಕಾರದ ಸಮಯದಲ್ಲಿ ಕೇಂದ್ರದ ಸಾಲ 53 ಲಕ್ಷ ಕೋಟಿ ರೂಪಾಯಿ ಇತ್ತು. ಮೋದಿ ಸರ್ಕಾರದಲ್ಲಿ ಅದು 218 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಂದರೆ 165 ಲಕ್ಷ ಕೋಟಿಯ ಹೆಚ್ಚಳ. ಕೇಂದ್ರದ ಸಾಲವು ಜಿಡಿಪಿಯ 55.6% ಆಗಿದ್ದರೆ, ರಾಜ್ಯದ ಸಾಲವು GSDPಯ 24.94% ಮಾತ್ರ,” ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಹೆಚ್ಚು ಸಾಲ

ಇದೇ ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಹೆಚ್ಚಿನ ಸಾಲ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. 2022ರಲ್ಲಿ ರಾಜ್ಯದ ಸಾಲ 2.45 ಲಕ್ಷ ಕೋಟಿ ರೂಪಾಯಿ ಇದ್ದದ್ದು 2023ರ ವೇಳೆಗೆ 5.22 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿತ್ತು ಎಂದು ಅವರು ತಿಳಿಸಿದರು.

ಡಾ. ರಂಗನಾಥ್ ಅವರು ಶಾಸಕರಿಗೆ ನಿಧಿ ಒದಗಿಸಲು ಇನ್ನಷ್ಟು ಸಾಲ ಪಡೆಯುವ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು. ಕೋವಿಡ್ ಮಹಾಮಾರಿಯ ಸಮಯದಲ್ಲಿ ಬಿಜೆಪಿ ಸರ್ಕಾರವೂ ಸಾಲ ಮಿತಿಯನ್ನು ಮೀರಿತ್ತು ಎಂದು ಅವರು ಹೇಳಿದರು. ಆದರೆ ಇದನ್ನು ರಾಜ್ಯವು ಏಕಪಕ್ಷೀಯವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಉತ್ತರಿಸಿದರು.

ಕರ್ನಾಟಕದ GSDP ಬೆಳವಣಿಗೆ ದರವು 8.1% ಎಂದು ಅಂದಾಜಿಸಲಾಗಿದ್ದು, ಇದು ರಾಷ್ಟ್ರೀಯ GDP ಬೆಳವಣಿಗೆ ದರವಾದ 7.4%ಗಿಂತ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

Workshop on state budget and allocation of funds
VB-G RAM G ಯೋಜನೆಗೆ ಅನುದಾನ ನೀಡದ ಸರ್ಕಾರ: ಅರ್ಥವಿಲ್ಲದ ಬಜೆಟ್ ಎಂದು ಪ್ರಹ್ಲಾದ್ ಜೋಶಿ ಟೀಕೆ

ಕೇಂದ್ರದಿಂದ ತೆರಿಗೆ ಹಂಚಿಕೆ ಕಡಿಮೆಯಾಗಿರುವ ಕುರಿತು ಮಾತನಾಡಿದ ಅವರು, 14ನೇ ಹಣಕಾಸು ಆಯೋಗದ ವೇಳೆ ನಮಗೆ 4.7% ಪಾಲು ಸಿಕ್ಕಿತ್ತು. ಅದು ನಂತರ 3.6% ಹಾಗೂ 4.13%ಕ್ಕೆ ಇಳಿಸಲಾಗಿದೆ. ನಾವು 4.5 ಲಕ್ಷ ಕೋಟಿ ರೂಪಾಯಿ ತೆರಿಗೆ ನೀಡಿದ್ದರೂ ಈ ವರ್ಷ ಕೇವಲ 60,000 ಕೋಟಿ ರೂಪಾಯಿ ಮಾತ್ರ ಮರಳಿ ಸಿಕ್ಕಿದೆ. ಮುಂದಿನ ವರ್ಷ 73,000 ಕೋಟಿ ರೂಪಾಯಿ ಸಿಗುವ ನಿರೀಕ್ಷೆ ಇದೆ. ನಾವು ತೆರಿಗೆ ರೂಪದಲ್ಲಿ ಕೊಡುವ ಪ್ರತಿಯೊಂದು ರೂಪಾಯಿಗೆ ಕೇವಲ 15 ಪೈಸೆ ಮಾತ್ರ ಮರಳಿ ಸಿಗುತ್ತದೆ ಎಂದು ಹೇಳಿದರು.

ಇದು ರಾಜಕೀಯ ವಿಷಯವಲ್ಲ. ಹಲವಾರು ರಾಜ್ಯಗಳು ಇದೇ ರೀತಿಯ ಅಸಮಾಧಾನ ಹೊಂದಿವೆ. ಅದನ್ನು ಒಪ್ಪಿಕೊಳ್ಳುವುದು ನನ್ನ ಕರ್ತವ್ಯ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com