

ಮೈಸೂರು: ಬಂಡೀಪುರ ಹುಲಿ ಮೀಸಲು ಪ್ರದೇಶ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶಗಳಲ್ಲಿ ನವೆಂಬರ್ 7 ರಿಂದ ಫೆಬ್ರವರಿ 21 ರವರೆಗೆ ವನ್ಯಜೀವಿ ಸಫಾರಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಎರಡು ಪ್ರಮುಖ ವನ್ಯಜೀವಿ ತಾಣಗಳಿಗೆ ಒಟ್ಟಾರೆಯಾಗಿ ಸುಮಾರು ₹6 ಕೋಟಿ ಆದಾಯ ನಷ್ಟವಾಗಿದೆ.
ಈ ಅವಧಿಯಲ್ಲಿ ಸಫಾರಿ ಸ್ಥಗಿತಗೊಳಿಸುವುದರಿಂದ ಅರಣ್ಯ ಇಲಾಖೆಗೆ ಬರುವ ಆದಾಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಎರಡು ಮೀಸಲು ಪ್ರದೇಶಗಳಲ್ಲಿ, ಬಂಡೀಪುರ ಹುಲಿ ಮೀಸಲು ಪ್ರದೇಶವು ಸುಮಾರು ₹2.5 ಕೋಟಿ ನಷ್ಟವನ್ನು ಅನುಭವಿಸಿದೆ ಎಂದು ವರದಿಯಾಗಿದೆ.
ನಾಗರಹೊಳೆ ಹುಲಿ ಮೀಸಲು ಪ್ರದೇಶವು ಇದೇ ಅವಧಿಯಲ್ಲಿ ಸುಮಾರು ₹3.5 ಕೋಟಿ ನಷ್ಟ ಅನುಭವಸಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ಲಭ್ಯವಾಗಿದೆ. ಎರಡು ಸಂರಕ್ಷಿತ ಅರಣ್ಯ ಪ್ರದೇಶಗಳ ಸುತ್ತಮುತ್ತಲಿನ ಅಂಚಿನ ಹಳ್ಳಿಗಳಲ್ಲಿ ಹುಲಿಗಳ ಓಡಾಟದ ಸರಣಿ ಘಟನೆಗಳು ವರದಿಯಾದ ನಂತರ ಸಫಾರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅರಣ್ಯ ಗಡಿಯಲ್ಲಿರುವ ಹಳ್ಳಿಗಳಲ್ಲಿ ಹುಲಿಗಳು ಮೂವರನ್ನು ಕೊಂದಿದ್ದವು. ಹಲವು ಮಂದಿ ಗಾಯಗೊಂಡಿದ್ದು, ಜಾನುವಾರುಗಳನ್ನು ಬೇಟೆಯಾಡಿದ ನಂತರ ಈ ಘಟನೆಗಳು ನಿವಾಸಿಗಳು ಮತ್ತು ಅಧಿಕಾರಿಗಳಲ್ಲಿ ವ್ಯಾಪಕ ಕಳವಳವ ಉಂಟುಮಾಡಿದವು.
ಈ ಘಟನೆಗಳ ನಂತರ, ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಮುನ್ನೆಚ್ಚರಿಕೆ ಕ್ರಮವಾಗಿ ಸಫಾರಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಮತ್ತು ಈ ಪ್ರದೇಶದಲ್ಲಿ ಹುಲಿಗಳ ಚಲನವಲನಗಳ ಮೇಲ್ವಿಚಾರಣೆಯನ್ನು ತೀವ್ರಗೊಳಿಸಲು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಘೋಷಿಸಿದರು.
ಸಫಾರಿ ರದ್ಧುಗೊಳಿಸಿರುವುದರಿಂದ ಸುರಕ್ಷತಾ ಕಾಳಜಿಗಳನ್ನು ಪರಿಹರಿಸಲು ಮತ್ತು ನೆಲದ ಪರಿಸ್ಥಿತಿಯನ್ನು ನಿರ್ವಹಿಸಲು ಉದ್ದೇಶಿಸಲಾಗಿದ್ದರೂ, ಇದು ಈ ಪ್ರದೇಶದ ಪ್ರವಾಸೋದ್ಯಮದ ಮೇಲೆ ಗಮನಾರ್ಹ ಆರ್ಥಿಕ ಪರಿಣಾಮ ಬೀರಿದೆ..
Advertisement