ಬೆಂಗಳೂರು: Bescom ದುರಸ್ತಿ ಕಾರ್ಯ ವೇಳೆ ಕಾವೇರಿ ನೀರಿನ ಪೈಪ್‌ಲೈನ್‌ ಕಟ್ ಮಾಡಿದ ಸಿಬ್ಬಂದಿ!

ಆದರೆ ಅಕ್ಷಯನಗರದ ಆಕ್ಸಿಸ್ ಅಂತರಾ ಅಪಾರ್ಟ್‌ಮೆಂಟ್‌ಗಳ 20 ಮನೆಗಳಿಗೆ ನೀರು ಸರಬರಾಜು ಇರಲಿಲ್ಲ. ವಿದ್ಯುತ್ ಲೈನ್ ಅನ್ನು ಪ್ರವೇಶಿಸಲು ಮಣ್ಣು ತೆಗೆಯುವ ಯಂತ್ರವು ಕಾವೇರಿ ಪೈಪ್‌ಲೈನ್ ಮುರಿದು ಹಾಕಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಹುಳಿಮಾವು ಬಳಿಯ ಬಿಡಿಎ ಲೇಔಟ್‌ನಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಭೂಗತ ವಿದ್ಯುತ್ ಕೇಬಲ್ ದುರಸ್ತಿ ಮಾಡುತ್ತಿದ್ದ ವೇಳೆ ಬೆಸ್ಕಾಂ ಸಿಬ್ಬಂದಿ ಆಕಸ್ಮಿಕವಾಗಿ ಭೂಗತ ಕಾವೇರಿ ನೀರಿನ ಪೈಪ್‌ಲೈನ್‌ಗೆ ಹಾನಿ ಮಾಡಿದರು.

ಈ ಪ್ರದೇಶದಲ್ಲಿ ನೀರು ವ್ಯರ್ಥವಾಗುವುದನ್ನುತಪ್ಪಿಸಲು ಪೈಪ್‌ಲೈನ್‌ಗೆ ಬರುತ್ತಿದ್ದ ನೀರಿನ ಸಂಪರ್ಕ ಕಡಿತಗೊಳಿಸಲಾಯಿತು. ಅದಾದ ನಂತರ ಕೇಬಲ್ ಸರಿಪಡಿಸಲಾಯಿತು. ಬೆಳಿಗ್ಗೆ 11.30 ರ ಸುಮಾರಿಗೆ ವಿದ್ಯುತ್ ಪೂರೈಸಲಾಯಿತು. ಇದರಿಂದಾಗಿ ಇಡೀ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡಿತ್ತು.

ಆದರೆ ಅಕ್ಷಯನಗರದ ಆಕ್ಸಿಸ್ ಅಂತರಾ ಅಪಾರ್ಟ್‌ಮೆಂಟ್‌ಗಳ 20 ಮನೆಗಳಿಗೆ ನೀರು ಸರಬರಾಜು ಇರಲಿಲ್ಲ. ವಿದ್ಯುತ್ ಲೈನ್ ಅನ್ನು ಪ್ರವೇಶಿಸಲು ಮಣ್ಣು ತೆಗೆಯುವ ಯಂತ್ರವು ಕಾವೇರಿ ಪೈಪ್‌ಲೈನ್ ಮುರಿದು ಹಾಕಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ವಾರಕ್ಕೆ ಎರಡು ಬಾರಿ ಈ ಪ್ರದೇಶಕ್ಕೆ ನೀರು ಪೂರೈಸುವ 4 ಇಂಚಿನ ಕಾವೇರಿ ಪೈಪ್‌ಲೈನ್ ಗೆ ಹಾನಿಯಾಗಿದೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗೆದ ಪ್ರದೇಶದ ಗೋಡೆಯನ್ನು ರಾತ್ರಿ 10 ಗಂಟೆಗೆ ಸರಿ ಪಡಿಸಲಾಯಿತು. ಮಧ್ಯರಾತ್ರಿಯ ಸುಮಾರಿಗೆ ಪೈಪ್‌ಲೈನ್ ಗೆ ತೇಪೆ ಹಾಕಲಾಯಿತು. ದುರಸ್ತಿ ನಂತರ, ಮನೆಗಳಿಗೆ ನೀರು ಸರಬರಾಜು ಪುನರಾರಂಭವಾಯಿತು.

Representational image
BESCOM ಗ್ರಾಹಕರಿಗೆ ವಿದ್ಯುತ್ ಶಾಕ್: ಆದಾಯ ಕೊರತೆ ತುಂಬಲು ಪ್ರತಿ ಯುನಿಟ್‌ಗೆ 56 ಪೈಸೆ ಹೆಚ್ಚಳ..!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com