ಬಿಸಿಲಿನ ತಾಪದ ಜೊತೆ ನೀರಿನ ಸಮಸ್ಯೆ: ಚಿತ್ರದುರ್ಗ ಜಿಲ್ಲೆಯ ಹಲವು ಗ್ರಾಮಗಳ ಜನರ ಪಾಡು-Video

ನೀರು ಸರಬರಾಜಿಗೆ ಬಳಸುತ್ತಿದ್ದ ಮೋಟಾರ್ ಕೆಟ್ಟುಹೋದ ಬಳಿಕ, ಗ್ರಾಮಸ್ಥರು ಈಗ ರಾಜ್ಯ ಹೆದ್ದಾರಿ ಸಮೀಪದ ಒಂದೇ ಒಂದು ಕೊಳವೆಯ ಮೇಲೆ ತಮ್ಮ ದಿನನಿತ್ಯದ ಅಗತ್ಯದ ನೀರಿನ ಅಗತ್ಯಗಳಿಗಾಗಿ ಅವಲಂಬಿತರಾಗಿದ್ದಾರೆ.
Water crisis deepens in Karnataka's Chitradurga, villagers struggle for every drop
ಪ್ಲಾಸ್ಟಿಕ್ ತಂಬಿಗೆಯಲ್ಲಿ ನೀರು ತುಂಬಲು ಹೋಗುತ್ತಿರುವ ಜನರು
Updated on

ಚಿತ್ರದುರ್ಗ ಜಿಲ್ಲೆಯಲ್ಲಿ ನೀರಿನ ಸಂಕಷ್ಟ ತೀವ್ರಗೊಂಡಿದ್ದು, ಗ್ರಾಮಸ್ಥರು ಪ್ರತಿಯೊಂದು ಹನಿ ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ಬೇಸಿಗೆ ತೀವ್ರಗೊಳ್ಳುತ್ತಿದ್ದಂತೆ ಚಿತ್ರದುರ್ಗ ಜಿಲ್ಲೆಯ ಹಲವು ಗ್ರಾಮಗಳು ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಮೊಗಳಹಳ್ಳಿ ಗ್ರಾಮದಲ್ಲಿ ನಿವಾಸಿಗಳು ಉರಿಯುವ ಬಿಸಿಲಿನಲ್ಲೇ ಪ್ಲಾಸ್ಟಿಕ್ ತಂಬಿಗೆಯಲ್ಲಿ ತುಂಬಿದ ಗಾಡಿಗಳನ್ನು ತಳ್ಳುತ್ತಾ, ಪ್ರತಿದಿನ ದೂರದೂರಿಗೆ ನಡೆದುಕೊಂಡು ಹೋಗಿ ಕುಡಿಯುವ ನೀರು ತರುತ್ತಿದ್ದಾರೆ.

ನೀರು ಸರಬರಾಜಿಗೆ ಬಳಸುತ್ತಿದ್ದ ಮೋಟಾರ್ ಕೆಟ್ಟುಹೋದ ಬಳಿಕ, ಗ್ರಾಮಸ್ಥರು ಈಗ ರಾಜ್ಯ ಹೆದ್ದಾರಿ ಸಮೀಪದ ಒಂದೇ ಒಂದು ಕೊಳವೆಯ ಮೇಲೆ ತಮ್ಮ ದಿನನಿತ್ಯದ ಅಗತ್ಯದ ನೀರಿನ ಅಗತ್ಯಗಳಿಗಾಗಿ ಅವಲಂಬಿತರಾಗಿದ್ದಾರೆ.

ಹೆಚ್ಚುತ್ತಿರುವ ನೀರಿನ ಕೊರತೆಯಿಂದ ಸಾಮಾನ್ಯ ಜೀವನ ಅಸ್ತವ್ಯಸ್ತಗೊಂಡಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ.

ಈ ಸಂಕಷ್ಟದಿಂದ ಅನೇಕ ಕುಟುಂಬಗಳು ಮನೆ ಕೆಲಸ ಬಿಟ್ಟು ತೀವ್ರ ಬಿಸಿಲಿನಲ್ಲಿ ದೂರದೂರಿಗೆ ಹೋಗಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ನೀರು ತುಂಬಿಕೊಳ್ಳಲು ಉದ್ದ ಸಾಲಿನಲ್ಲಿ ಕಾಯುತ್ತಿರುವ ಗ್ರಾಮಸ್ಥರು, ಸಂಬಂಧಪಟ್ಟ ಆಡಳಿತಾಧಿಕಾರಿಗಳು, ರಾಜಕೀಯ ನಾಯಕರು ಶೀಘ್ರದಲ್ಲೇ ಮಧ್ಯಪ್ರವೇಶಿಸಿ ಗ್ರಾಮಕ್ಕೆ ನೀರು ಸರಬರಾಜು ಪುನಃ ಆರಂಭಿಸಲಿ, ಬೇಸಿಗೆಯ ಕಡುಬಿಸಿಲಿನಲ್ಲಿ ಪ್ರತಿದಿನ ನೀರಿಗಾಗಿ ಅಲೆದಾಟಕ್ಕೆ ತೆರೆ ಬೀಳಲಿ ಎಂದು ಆಶಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com