ಎಲಿವೇಟೆಡ್ ಕಾರಿಡಾರ್ ಯೋಜನೆಗಳ DPR ಬಹಿರಂಗಪಡಿಸಿ, ಜನರ ಅಭಿಪ್ರಾಯ ಸಂಗ್ರಹಿಸಿ: ಸರ್ಕಾರಕ್ಕೆ ತೇಜಸ್ವಿ ಸೂರ್ಯ ಆಗ್ರಹ

ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ತಾಂತ್ರಿಕ ನಿರ್ದೇಶಕ ಬಿ ಎಸ್ ಪ್ರಲ್ಹಾದ್ ಅವರಿಗೆ ಪತ್ರ ಬರೆದಿರುವ ಅವರು, ನಗರದಲ್ಲಿ ಇತ್ತೀಚೆಗೆ ಟೆಂಡರ್ ಕರೆಯಲಾಗಿರುವ ಕೆಲವು ಶಾರ್ಟ್ ಹಾಗೂ ಮೀಡಿಯಂ ಉದ್ದದ ಎಲಿವೇಟೆಡ್ ಕಾರಿಡಾರ್ ಯೋಜನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
DK Shivakumar- MP Tejasvi Surya
ಡಿಕೆ ಶಿವಕುಮಾರ್-ಸಂಸದ ತೇಜಸ್ವಿ ಸೂರ್ಯonline desk
Updated on

ಬೆಂಗಳೂರು: ನಗರದಲ್ಲಿ ಪ್ರಸ್ತಾಪಗೊಂಡಿರುವ ಹಲವು ಎಲಿವೇಟೆಡ್ ಕಾರಿಡಾರ್ ಹಾಗೂ ಫ್ಲೈಓವರ್ ಯೋಜನೆಗಳ ಕುರಿತು ಸಾರ್ವಜನಿಕ ಸಮಾಲೋಚನೆ ನಡೆಸಬೇಕು ಮತ್ತು ಯೋಜನೆಗಳ ಡೀಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್‌ಗಳನ್ನು (DPR) ತಕ್ಷಣವೇ ಸಾರ್ವಜನಿಕ ವಲಯಕ್ಕೆ ಬಿಡುಗಡೆ ಮಾಡಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ತಾಂತ್ರಿಕ ನಿರ್ದೇಶಕ ಬಿ ಎಸ್ ಪ್ರಲ್ಹಾದ್ ಅವರಿಗೆ ಪತ್ರ ಬರೆದಿರುವ ಅವರು, ನಗರದಲ್ಲಿ ಇತ್ತೀಚೆಗೆ ಟೆಂಡರ್ ಕರೆಯಲಾಗಿರುವ ಕೆಲವು ಶಾರ್ಟ್ ಹಾಗೂ ಮೀಡಿಯಂ ಉದ್ದದ ಎಲಿವೇಟೆಡ್ ಕಾರಿಡಾರ್ ಯೋಜನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಗಳಲ್ಲಿನ ಕೆಲವು ಸಂಪೂರ್ಣವಾಗಿ ಅಥವಾ ಭಾಗಶಃ ಬೆಂಗಳೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರಸ್ತಾಪಿತ ಯೋಜನೆಗಳಲ್ಲಿ ಮಿನರ್ವ ಸರ್ಕಲ್‌ನಿಂದ ಹಡ್ಸನ್ ಸರ್ಕಲ್‌ವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸಿ, ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈಓವರ್‌ನಿಂದ ಟೌನ್‌ಹಾಲ್‌ಗೆ ಸಂಪರ್ಕ ಕಲ್ಪಿಸುವ ಲೂಪ್ ಫ್ಲೈಓವರ್ ಯೋಜನೆ ಸೇರಿದೆ. ಇದಲ್ಲದೆ, ಹಳೆ ಮದ್ರಾಸ್ ರಸ್ತೆಯಿಂದ ಇಂದಿರಾನಗರ, ಓಲ್ಡ್ ಏರ್‌ಪೋರ್ಟ್ ರಸ್ತೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಮೂಲಕ ಎಲೆಕ್ಟ್ರಾನಿಕ್ ಸಿಟಿವರೆಗೆ 5.2 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಿಸುವ ಯೋಜನೆಗೆ ಸುಮಾರು ₹852 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ಅದೇ ರೀತಿ, ಶೂಲೇ ಸರ್ಕಲ್‌ನಿಂದ ಅನೇಪಾಳ್ಯ ಮತ್ತು ಅಡಗೋಡಿ ಜಂಕ್ಷನ್ ಮೂಲಕ ಸೇಂಟ್ ಜಾನ್ಸ್ ಆಸ್ಪತ್ರೆ ರಸ್ತೆಯವರೆಗೆ 5.3 ಕಿ.ಮೀ ಉದ್ದದ ಮತ್ತೊಂದು ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ₹519 ಕೋಟಿ ವೆಚ್ಚದ ಯೋಜನೆಯೂ ಪ್ರಸ್ತಾಪಗೊಂಡಿದೆ. ಪೈಪ್‌ಲೈನ್ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ ಸಮೀಪ, ತುಮಕೂರು ರಸ್ತೆ, ಕೋಣನಕುಂಟೆ ಕ್ರಾಸ್ ಹಾಗೂ ಕನಕಪುರ ರಸ್ತೆಯ ಆದ್ಯಾರ್ ಆನಂದ ಭವನದ ಬಳಿ ಇನ್ನೂ ಹಲವು ಕಾರಿಡಾರ್‌ಗಳ ಯೋಜನೆಗಳೂ ಚರ್ಚೆಯಲ್ಲಿವೆ.

DK Shivakumar- MP Tejasvi Surya
ಕಾಂಗ್ರೆಸ್ ಅವಧಿಯಲ್ಲಿ ಆಂಧ್ರ ವಿಭಜನೆ ಭಾರತ-ಪಾಕ್ ವಿಭಜನೆಗಿಂತ ಕೆಟ್ಟದಾಗಿತ್ತು- ತೇಜಸ್ವಿ ಸೂರ್ಯ ವಾಗ್ದಾಳಿ; ತೆಲಂಗಾಣ ರಾಜಕಾರಣಿಗಳಿಂದ ಟೀಕೆ

ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ)ಕಾಯ್ದೆ-2022ರ ಪ್ರಕಾರ ನಗರ ಸಾರಿಗೆ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಪೂರ್ವಾನುಮೋದನೆ ನೀಡುವ ಜವಾಬ್ದಾರಿ BMLTAಗೆ ಇದೆ ಎಂದು ಉಲ್ಲೇಖಿಸಿದ್ದಾರೆ. ಆದರೆ, ಈ ಫ್ಲೈಓವರ್ ಯೋಜನೆಗಳಿಗೆ ಇನ್ನೂ BMLTA ಅನುಮೋದನೆ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.

ಸ್ವತಂತ್ರ ಪರಿಶೀಲನೆಯಿಲ್ಲದೆ ಈ ಫ್ಲೈಓವರ್‌ಗಳು ಪರಿಣಾಮಕಾರಿ ಆಗುತ್ತವೆಯೇ ಅಥವಾ ವೈಜ್ಞಾನಿಕ ಸಂಚಾರ ಯೋಜನೆಯ ಆಧಾರದಲ್ಲಿ ರೂಪಿಸಲ್ಪಟ್ಟಿವೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಉದಾಹರಣೆಗೆ ರಾಗಿಗುಡ್ಡ ಫ್ಲೈಓವರ್‌ನ್ನು ಉಲ್ಲೇಖಿಸಿರುವ ಸಂಸದರು, ಆ ಫ್ಲೈಓವರ್ ಸಂಚಾರ ದಟ್ಟಣೆಯನ್ನು ಪರಿಹರಿಸುವ ಬದಲು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಅರಬಿಂದೋ ಜಂಕ್ಷನ್‌ಗೆ ಸ್ಥಳಾಂತರಿಸಿದೆ ಎಂದು ಟೀಕಿಸಿದ್ದಾರೆ.

ಇದಲ್ಲದೆ, ಈ ಯೋಜನೆಗಳಿಗೆ ಸಂಬಂಧಿಸಿದ DPRಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಇನ್ನೂ ಪ್ರಕಟಿಸಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.

ಇಂತಹ ದೊಡ್ಡ ಮೊತ್ತದ ವೆಚ್ಚ ಮತ್ತು ನಗರದ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಯೋಜನೆಗಳನ್ನು ಮುಂದುವರಿಸುವ ಮೊದಲು ಜನಪ್ರತಿನಿಧಿಗಳು, ನಿವಾಸಿಗಳು, ಸಂಚಾರ ತಜ್ಞರು, ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಸಮಗ್ರ ಸಮಾಲೋಚನೆ ನಡೆಸಬೇಕು ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com