ಸುಪ್ರೀಂ ಕೋರ್ಟ್ ಆದೇಶವನ್ನೇ ನಕಲು ಮಾಡಿ ಜೈಲಿನಿಂದ ಪಾರಾಗಿದ್ದ ಜೀವಾವಧಿ ಕೈದಿ: 8 ವರ್ಷಗಳ ಬಳಿಕ ಶಂಕರ್ ಆರ್ಮುಗಂ, ಜೈಲು ಸಿಬ್ಬಂದಿ ಶ್ರೀಕಾಂತ್ ಬಂಧನ

ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನೇ ನಕಲಿ ಮಾಡಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಜೀವಾವಧಿ ಸಜಾ ಕೈದಿ ಶಂಕರ್ ಆರ್ಮುಗಂ ಮತ್ತು ಆತನಿಗೆ ನಕಲಿ ಆದೇಶ ಸೃಷ್ಟಿಸಲು ನೆರವಾಗಿದ್ದ ಜೈಲು ಸಿಬ್ಬಂದಿ ಶ್ರೀಕಾಂತ್‌ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Bengaluru Prison Staffer Held for Forging Supreme Court Order to Free Life Convict
ಸಾಂಕೇತಿಕ ಚಿತ್ರANI
Updated on

ಬೆಂಗಳೂರು: ಸುಪ್ರೀಂ ಕೋರ್ಟ್‌ನ ನಕಲಿ ಬಿಡುಗಡೆ ಆದೇಶವನ್ನು ಸೃಷ್ಟಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಜೀವಾವಧಿ ಶಿಕ್ಷೆಯ ಕೈದಿಯನ್ನು ಹಾಗೂ ಆತನಿಗೆ ಸಹಕರಿಸಿದ್ದ ಜೈಲು ಸಿಬ್ಬಂದಿಯನ್ನು 8 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಮುಖ ಆರೋಪಿ ಶಂಕರ್ ಆರ್ಮುಗಂ ಅಲಿಯಾಸ್ ಆರಾಧ್ಯ ಮತ್ತು ಈ ವಂಚನೆಗೆ ಸಾಥ್ ನೀಡಿದ್ದ ಜೈಲಿನ ಕನ್ವಿಕ್ಟ್ ವಿಭಾಗದ ಪ್ರಥಮ ದರ್ಜೆ ಸಹಾಯಕ ಶ್ರೀಕಾಂತ್ ಎಂಬುವವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಮತ್ತು ಆತನ ಗ್ಯಾಂಗ್ 2001ರಲ್ಲಿ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಅಪಹರಿಸಿತ್ತು. ಅದರಂತೆ, ಕಿಡ್ನ್ಯಾಪ್ ಫಾರ್ ರಾನ್ಸಮ್ (ಹಣಕ್ಕಾಗಿ ಅಪಹರಣ) ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವು 2004ರಲ್ಲಿ ಶಂಕರ್‌ನಿಗೆ ಜೀವಾವಧಿ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿತ್ತು. ಅದರಲ್ಲೂ, ಆತ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎರಡರಲ್ಲೂ ಮೇಲ್ಮನವಿ ಸಲ್ಲಿಸಿದ್ದರೂ, ಎರಡೂ ಕಡೆ ಶಿಕ್ಷೆ ಎತ್ತಿಹಿಡಿಯಲ್ಪಟ್ಟಿತ್ತು. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಅಪೀಲು ವಜಾಗೊಂಡಿದ್ದರೂ, ಜೈಲು ಸಿಬ್ಬಂದಿ ಶ್ರೀಕಾಂತ್ ಸಹಾಯದಿಂದ ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಪ್ರತಿಯನ್ನು ಸೃಷ್ಟಿಸಲಾಗಿತ್ತು. ಅದರಲ್ಲಿ ಕೈದಿಗೆ ಕೇವಲ ₹10,000 ದಂಡ ವಿಧಿಸಿ ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದು ನಕಲಿ ಸಹಿ, ಸೀಲು ಹಾಕಿ ಫೋರ್ಜರಿ ಮಾಡಲಾಗಿತ್ತು. ಜೊತೆಗೆ, ಈ ಫೋರ್ಜರಿ ದಾಖಲೆಗಳನ್ನು ನೈಜ ಎಂದು ನಂಬಿದ್ದ ಜೈಲು ಅಧಿಕಾರಿಗಳು, ನವೆಂಬರ್ 13, 2018 ರಂದು ₹10,000 ದಂಡ ಕಟ್ಟಿಸಿಕೊಂಡು ಶಂಕರ್‌ನನ್ನು ಜೈಲಿನಿಂದ ಮುಕ್ತಗೊಳಿಸಿದ್ದರು. ಅಲ್ಲಿಂದ ಆತ ತಲೆಮರೆಸಿಕೊಂಡು ಮೈಸೂರಿನಲ್ಲಿ ವಾಸವಿದ್ದನು.

ಹಾಗಾದ್ರೆ, ಇದು ಬೆಳಕಿಗೆ ಬಂದಿದ್ದು ಹೇಗೆ?

ಇತ್ತೀಚೆಗೆ (ಮೇ 2026 ರಲ್ಲಿ) ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಿಗೆ ಈ ಅಕ್ರಮ ಬಿಡುಗಡೆ ಕುರಿತು ಅನಾಮಧೇಯ ದೂರು ಬಂದಿತ್ತು. ಜೈಲು ಅಧಿಕಾರಿಗಳು ತಕ್ಷಣ ಸುಪ್ರೀಂ ಕೋರ್ಟ್‌ನ ಅಸಿಸ್ಟೆಂಟ್ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸಿ ದಾಖಲೆಗಳನ್ನು ಪರಿಶೀಲಿಸಿದಾಗ, ಕೋರ್ಟ್ ಅಂತಹ ಯಾವುದೇ ಆದೇಶ ನೀಡಿಲ್ಲ ಮತ್ತು ದಾಖಲೆಗಳು ಸಂಪೂರ್ಣ ನಕಲಿ ಎಂಬುದು ಸಾಬೀತಾಯಿತು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ವಂಚನೆ, ದಾಖಲೆಗಳ ತಿದ್ದುಪಡಿ ಹಾಗೂ ಕ್ರಿಮಿನಲ್ ಪಿತೂರಿಯಡಿ ಪ್ರಕರಣ ದಾಖಲಿಸಲಾಯಿತು.

Bengaluru Prison Staffer Held for Forging Supreme Court Order to Free Life Convict
ಪರಪ್ಪನ ಅಗ್ರಹಾರ ಕಾರಾಗೃಹ ಸುತ್ತಮುತ್ತ ಮೊಬೈಲ್‌ ನೆಟ್ವರ್ಕ್-ಇಂಟರ್‌ನೆಟ್‌ ಸಮಸ್ಯೆ: ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಸಂಸದ ಡಾ. ಮಂಜುನಾಥ್‌ ಮನವಿ

ಮುಂದೆ, ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನೇತೃತ್ವದ ಪೊಲೀಸರು ಮೈಸೂರಿನಲ್ಲಿದ್ದ ಸಜಾ ಕೈದಿ ಶಂಕರ್ ಆರ್ಮುಗಮ್‌ನ ಮನೆ ಮೇಲೆ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದರು. ನಂತರ ನಕಲಿ ಆದೇಶ ಸೃಷ್ಟಿಸಿದ್ದ ಜೈಲು ಸಿಬ್ಬಂದಿ ಶ್ರೀಕಾಂತ್‌ನನ್ನು ಬಂಧಿಸಲಾಯಿತು. ಈ ವೇಳೆ, ಜೈಲು ಸಿಬ್ಬಂದಿ ಶ್ರೀಕಾಂತ್ ಸ್ಥಳೀಯ ಪೋಸ್ಟ್ ಆಫೀಸ್ ಮೂಲಕ ಈ ನಕಲಿ ಆದೇಶವನ್ನು ಜೈಲಿಗೆ ತಲುಪಿಸಿ ಪರಿಶೀಲನೆಯಿಂದ ತಪ್ಪಿಸಿಕೊಂಡಿದ್ದನು.

ಏತನ್ಮಧ್ಯೆ, ಆರೋಪಿಯ ಪತ್ನಿಯು ಪೊಲೀಸರ ವಿಚಾರಣೆಯಲ್ಲಿ, "ಅಂದಿನ ಜೈಲಿನ ಚೀಫ್ ಸೂಪರಿಂಟೆಂಡೆಂಟ್ ಕೂಡ ಬಿಡುಗಡೆಗೆ ಸಹಾಯ ಮಾಡಿದ್ದರು" ಎಂದು ಹೇಳಿಕೆ ನೀಡಿದ್ದು, ಈ ಹಗರಣದಲ್ಲಿ ಇನ್ನೂ ಹಲವು ಜೈಲು ಅಧಿಕಾರಿಗಳ ಪಾತ್ರವಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಪೊಲೀಸರು ಪ್ರಸ್ತುತ ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ಆರ್ಥಿಕ ವಹಿವಾಟು ಹಾಗೂ ನಕಲಿ ದಾಖಲೆ ಜಾಲದ ಕುರಿತು ತನಿಖೆ ಮುಂದುವರಿಸಿದ್ದಾರೆ.

Bengaluru Prison Staffer Held for Forging Supreme Court Order to Free Life Convict
ಪ್ರಿಯಾಂಕ್ ಖರ್ಗೆ ಪರಪ್ಪನ ಅಗ್ರಹಾರ ಜೈಲು ಸೇರುವ ಕಾಲ ಹತ್ತಿರ ಬಂದಿದೆ: ಪ್ರತಾಪ್ ಸಿಂಹ ತಿರುಗೇಟು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com