ಮಕ್ಕಳಿಗೆ ಆರೋಗ್ಯಯುತ ಬೆಳಗಿನ ಆಹಾರದ ಅಗತ್ಯ ಎಂದಿರುವ ಶಿಲ್ಪಾ ಶೆಟ್ಟಿ, ಬಹುತೇಕ ಸಮಯದಲ್ಲಿ ಬೆಳ್ಳಂಬೆಳಗ್ಗೆ ಶೂಟಿಂಗ್ ಗೆ ಹೋಗಬೇಕಾಗುತ್ತದೆ. ಮುಂಬೈಯ ಮಲದ್ ಮತ್ತು ಮದ್ ದ್ವೀಪದಂತ ದೂರದ ಪ್ರದೇಶಗಳಲ್ಲಿ ಶೂಟಿಂಗ್ ಮಾಡುತ್ತಿರುವಾಗ ನನಗೆ ಭಯವಾಗುತ್ತದೆ. ದೇವರೇ ಏನು ಮಾಡುವುದಪ್ಪಾ, ನನ್ನ ಮಗನನ್ನು ಶಾಲೆಗೆ ತಿಂಡಿ ಕೊಟ್ಟು ಕಳುಹಿಸಬೇಕು. ನನಗೆ ಬೆಳಗ್ಗಿನ ಉಪಾಹಾರ ತಿನ್ನಲು ಕೂಡ ಸಮಯವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ದವಸ ಧಾನ್ಯಗಳು, ತಾಜಾ ಹಣ್ಣು, ಮೊಸರು ಮತ್ತು ತೆಂಗಿನ ಕಾಯಿ ಹಾಲನ್ನು ಮಿಶ್ರಣ ಮಾಡಿ ನನ್ನ ಕಾರಿನಲ್ಲಿಟ್ಟುಕೊಂಡು ತಿನ್ನುತ್ತೇನೆ. ಹೀಗಾಗಿ ನನಗೆ ಬೆಳಗಿನ ತಿಂಡಿ ತಿನ್ನಲು ಸಮಯವಿಲ್ಲ ಎಂದು ತಪ್ಪಿಸುವ ಪ್ರಮೇಯವೇ ಬರುವುದಿಲ್ಲ ಎನ್ನುತ್ತಾರೆ.