ಆತ್ಮಾಹುತಿ ದಾಳಿ: 15 ಸಾವು, 26 ಜನರಿಗೆ ಗಾಯ

ಉತ್ತರ ಬಾಗ್ದಾದ್‌ನಲ್ಲಿ ಆತ್ಮಾಹುತಿ ಬಾಂಬರ್ ಮಂಗಳವಾರ ನಡೆಸಿದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಾಗ್ದಾದ್: ಉತ್ತರ ಬಾಗ್ದಾದ್‌ನಲ್ಲಿ ಆತ್ಮಾಹುತಿ ಬಾಂಬರ್ ಮಂಗಳವಾರ ನಡೆಸಿದ ದಾಳಿಗೆ 15 ಜನ ಶಿಯಾ ಯಾತ್ರಿಕರು ಬಲಿಯಾಗಿದ್ದು, 27 ಮಂದಿ ಗಾಯಗೊಂಡಿದ್ದಾರೆ.

ಇರಾಕ್ ಸಾರ್ವಜನಿಕರು ಸೇರಿದಂತೆ ಇತರೆ ದೇಶದ ನಾಗರೀಕರು ಸಮರ್ರಾಗೆ ಹೋಗಲು ಯಾತ್ರೆ ಮುಂದುವರೆಸಿದ್ದು, ಹೋಗುವ ದಾರಿಯಲ್ಲಿ ಟೆಂಟ್‌ಗಳನ್ನು ಹೂಡಿ ಯಾತ್ರೆ ಕೈಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಅನಾಮಿಕ ವ್ಯಕ್ತಿಯೊಬ್ಬರು ಬಾಂಬ್ ಸ್ಫೋಟಿಸಿದ್ದಾರೆ. ಘಟನೆ ವೇಳೆ ಟೆಂಟ್‌ಗಳಲ್ಲಿದ್ದ 15 ಜನರು ಸಾವನ್ನಪ್ಪಿದ್ದು, 27 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಮರ್ರಾಗೆ ನಡೆದುಕೊಂಡು ಹೋಗುತ್ತಿದ್ದ ಯಾತ್ರಿಕರಿಗೆ  ಊಟ, ಹಣ್ಣು ಹಾಗೂ ಟೀ ನೀಡಲಾಗುತ್ತಿತ್ತು. ಈ ವೇಳೆ ಮುಸುಕುಧಾರಿಯಾಗಿ ಬಂದ ಅನಾಮಿಕನೊಬ್ಬನು ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟಿಸಿಕೊಂಡನು ಎಂದು ದಾಳಿ ವೇಳೆ ಗಾಯಗೊಂಡ ಸಜ್ಜಿದ್(25) ಹೇಳಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ಸಿಬ್ಬಂದಿಗಳು ಗಾಯಗೊಂಡ ಯಾತ್ರಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com