ಶಬರಿಮಲೆ: ಎರಡು ತಿಂಗಳ ಅವಧಿಯ ಶಬರಿಮಲೆ ಅಯ್ಯಪ್ಪ ದೇಗುಲದ ತೀರ್ಥಯಾತ್ರೆ ಭಾನುವಾರದಿಂದ ಆರಂಭವಾಗಿದೆ. ಸಂಜೆಯ ವೇಳೆಗೆ ದೇಗುಲದ ಬಾಗಿಲು ತೆರೆಯುತ್ತಿದ್ದಂತೆ 18 ಮೆಟ್ಟಿಲುಗಳನ್ನು ಹತ್ತಿ ಬಂದ ಸಾವಿರಾರು ಭಕ್ತಾದಿಗಳು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.
ಮುಂದಿನ ವರ್ಷಧ ಜನವರಿ 14 ರಂದು ಮಕರ ಜ್ಯೋತಿಯ ದರ್ಶನವಾಗುವುದರ ಜತೆಗೆ ತೀರ್ಥಯಾತ್ರೆ ಮುಕ್ತಾಯವಾಗುತ್ತದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಭಕ್ತರು ಈಗಾಗಲೇ ಆಗಮಿಸುತ್ತಿದ್ದಾರೆ.
ಡಿ.27ರಂದು ಮಂಡಲ ಪೂಜೆಯೊಂದಿಗೆ ಮೊದಲ ಹಂತದ ಯಾತ್ರೆಯ ಅದ್ಧೂರಿಯ ಹಂತ ತಲುಪುತ್ತದೆ.
ದೇಗುಲದ ಅಧಿಕೃತ ವೆಬ್ಸೈಟ್ http://www.sabarimala.kerala.gov.in, http://www.sabarimalaq.com ನಲ್ಲಿಯೂ ದೇವರ ದರ್ಶನಕ್ಕೆ ಕಾಯ್ದಿರಿಸುವ ವ್ಯವಸ್ಥೆ ಇದೆ. ಭದ್ರತೆಗಾಗಿ ಕೇರಳ ಪೊಲೀಸ್ ಇಲಾಖೆ ವಿಶೇಷ ವ್ಯವಸ್ಥೆ ಮಾಡಿದೆ.
Advertisement