ಮಹೇಶ್ ಭಟ್ ಹತ್ಯೆಗೆ ಯತ್ನಿಸಿದವರು 'ಮುಂಬ್ರಾ'ದ ಪುಂಡರು

ಬಾಲಿವುಡ್ ಚಿತ್ರ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಅವರನ್ನು ಹತ್ಯೆ ಮಾಡಲು ಯತ್ನಿಸಿದವರು ...
ಮಹೇಶ್ ಭಟ್
ಮಹೇಶ್ ಭಟ್
Updated on

ಥಾಣೆ: ಬಾಲಿವುಡ್ ಚಿತ್ರ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಅವರನ್ನು ಹತ್ಯೆ ಮಾಡಲು ಯತ್ನಿಸಿದವರು ಮುಂಬ್ರಾದ ಬಾಡಿಗೆ ಗೂಂಡಾಗಳು ಎಂದು ಪೊಲೀಸರು ಹೇಳಿದ್ದಾರೆ.

ಮಹೇಶ್ ಭಟ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಆರೋಪದಲ್ಲಿ ಮುಂಬೈ ಪೊಲೀಸರು 13 ಜನರನ್ನು ಬಂಧಿಸಿದ್ದರು. ಬಂಧಿತರಲ್ಲಿ ಒಬ್ಬನಾದ ಇಶ್ರತ್ ಶೇಖ್ ಅಲಿಯಾಸ್ ರಾಜಾ ಎಂಬಾತ ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ನೇರ ಸಂಪರ್ಕಹೊಂದಿದ್ದು, ಅಗತ್ಯ ಬಂದಾಗ ಪುಂಡರನ್ನು ಪೂರೈಸುತ್ತಿದ್ದ ಎಂದು ಪೊಲೀಸರು  ಹೇಳಿದ್ದಾರೆ.

ರವಿ ಪೂಜಾರಿಯ ಸಹಚರನಾಗಿರುವನ ಶೇಖ್‌ಗೆ ಇಂಥಾ ಕೆಲಸಗಳಿಗೆ ರೌಡಿಗಳನ್ನು ನಿಯೋಜನೆ ಮಾಡುವುದೇ ಕೆಲಸ. ಇಂಥಾ ಬಾಡಿಗೆ ರೌಡಿಗಳಿಗೆ ರು.25,000 ದಿಂದ 30,000 ರು. ನೀಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಇದೇ ಶೇಖ್ ಕಳೆದ ಅಗಸ್ಟ್ ತಿಂಗಳಲ್ಲಿ ಚಿತ್ರ ನಿರ್ಮಾಪಕ ಕರೀಂ ಮೊರಾನಿ ಅವರ ನಿವಾಸದ ಮೇಲೆ ಗುಂಡು ಹಾರಿಸಿದ್ದನು.  ಶೇಖ್ ಜತೆಗೆ ಮೊಹಮ್ಮದ್ ಖಾನ್, ಅದಿಮ್ ಖಾನ್, ಅಶ್‌ಫಾಕ್ ಸಯ್ಯದ್, ಅಸಿಫ್ ಖಾನ್, ಶಹ್‌ನವಾಜ್ ಶೇಖ್, ಫಿರೋಜ್ ಖಾದರ್, ಶಬ್ಬೀಕ್ ಶೇಖ್, ಫಾಹಿಂ ಖಾನ್, ಮೊಹಮ್ಮದ್ ಅನಿಸ್ ಮರ್ಚೆಂಟ್ ಮೊದಲಾದವರು ಬಂಧಿತ ಆರೋಪಿಗಳಾಗಿದ್ದು, ಮುಂಬ್ರಾ ನಿವಾಸಿಗಳಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com