ಭಯೋತ್ಪಾದಕ ದಾಳಿ ಸಾಧ್ಯತೆ: ಕೊಲ್ಕತಾ ಏರ್‌ಪೋರ್ಟ್‌ನಲ್ಲಿ ಕಟ್ಟೇಚ್ಚರ

ಕೊಲ್ಕತಾ  ವಿಮಾನ ನಿಲ್ದಾಣ
ಕೊಲ್ಕತಾ ವಿಮಾನ ನಿಲ್ದಾಣ
Updated on

ನವದೆಹಲಿ: ಕೊಲ್ಕತಾದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಸಂಭವನೀಯ ದಾಳಿ ಹಿನ್ನೆಲೆಯಲ್ಲಿ ಕೊಲ್ಕತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ಯನ್ನು ನಿಯೋಜಿಸಲಾಗಿದೆ.

ಅಹಮದಾಬಾದ್-ಮುಂಬೈ ಹಾಗೂ ಮುಂಬೈ-ಕೊಚ್ಚಿ ವಿಮಾನಗಳಲ್ಲಿ ಸಂಭವನಿಯ ಭಯೋತ್ಪಾತದಕರ ದಾಳಿ ನಡೆಸಲಾಗುವುದು ಎಂಬ ಅನಾಮೇಧೆಯ ಕರೆ ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿದೇಶಕರಿಗೆ ಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಕಟ್ಟೇಚ್ಚರ ವಹಿಸಲಾಗಿದೆ.

ಇದಲ್ಲದೆ ಕೊಲ್ಕತಾ ಪೋರ್ಟ್ ಮೇಲೂ ಸಂಭವನೀಯ ದಾಳಿಯ ಬಗ್ಗೆ ನಿರ್ದಿಷ್ಟ ಮಾಹಿತಿ ಸಿಕ್ಕ ಬಳಿಕ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com