ಪವನ್ ಹಂಸ ಕಾಪ್ಟರ್ ಅವಶೇಷ ಪತ್ತೆ: ಮೈಸೂರಿನ ರಾಜೀವ್ ಸಾವು

ಆರು ದಿನಗಳ ಹಿಂದೆ ನಾಪತ್ತೆಯಯಾಗಿದ್ದ ಪವನ್ ಹಂಸ ಹೆಲಿಕಾಪ್ಟರ್‍ನಲ್ಲಿದ್ದ ಮೈಸೂರಿನ ಪೈಲಟ್ ರಾಜೀವ್ ಬದುಕಿಬರಬಹುದು ಎಂಬ ನಿರೀಕ್ಷೆ ...
ಕ್ಯಾಪ್ಟರ್‍ನ ಅವಶೇಷಗಳನ್ನು ಹುಡುಕುತ್ತಿರುವ ರಕ್ಷಣಾ ಪಡೆ (ಕೃಪೆ : ಪಿಟಿಐ)
ಕ್ಯಾಪ್ಟರ್‍ನ ಅವಶೇಷಗಳನ್ನು ಹುಡುಕುತ್ತಿರುವ ರಕ್ಷಣಾ ಪಡೆ (ಕೃಪೆ : ಪಿಟಿಐ)
Updated on

ಇಟಾನಗರ/ಮೈಸೂರು: ಆರು ದಿನಗಳ ಹಿಂದೆ ನಾಪತ್ತೆಯಯಾಗಿದ್ದ ಪವನ್ ಹಂಸ ಹೆಲಿಕಾಪ್ಟರ್‍ನಲ್ಲಿದ್ದ ಮೈಸೂರಿನ ಪೈಲಟ್ ರಾಜೀವ್ ಬದುಕಿಬರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಕ್ಯಾಪ್ಟರ್‍ನ ಅವಶೇಷಗಳು ಸೋಮವಾರ ತಿರಾಪ್ ಜಿಲ್ಲೆ ಯ ಥಿನ್ಸಾ ಮತ್ತು ಸಾಂಗ್ಲಿಯಾನ್ ಗ್ರಾಮದ ನಡುವೆ ಪತ್ತೆಯಾಗಿದ್ದು, ರಾಜೀವ್ ಮೃತದೇಹವೂ ಸಿಕ್ಕಿದೆ. ಮೈಸೂರಿನ ರಮಾನುಜ ರಸ್ತೆ ನಿವಾಸಿಯಾಗಿದ್ದ ರಾಜೀವ್ ಅವರು ಸಿವಿಲ್ ಎಂಜಿನಿಯರ್ ಮಂಜುನಾಥ್ ಮತ್ತು ವಾಣಿಶ್ರೀ ಅವರ ಪುತ್ರ.ಮಗ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜೀವ್ ಪೋಷಕರು ಅರುಣಾಚಲ ಪ್ರದೇಶಕ್ಕೆ ಧಾವಿಸಿದ್ದಾರೆ. ರಾಜೀವ್‍ಗೆ ಇತ್ತೀಚೆಗಷ್ಟೇ ವಿವಾಹ ನಿಶ್ಚಯವಾಗಿತ್ತು. ಅ. 6ರಂದು ಮದುವೆಗೆ ಎಲ್ಲ ಸಿದ್ಧತೆಯಲ್ಲಿತೊಡಗಿ ದ್ದರು. ರಾಜೀವ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಒಮ್ಮೆ ಪೈಲೆಟ್ ಆಗಿದ್ದರು. ಸೋಮವಾರ ಕಾಪ್ಟರ್ ನಿಯಂತ್ರಣ ಕಳೆದುಕೊಂಡ ಸ್ಥಳದಲ್ಲಿ ವಾಯುಪಡೆ ರಕ್ಷಣಾ ತಂಡ ಹುಡುಕಾಟ ನಡೆಸಿದಾಗ ಕಾಪ್ಟರ್‍ನ ಅವಶೇಷ ಹಾಗೂ ಮೃತದೇಹಗಳು ಪತ್ತೆಯಾಗಿವೆ. ರಾಜೀವ್ ಜತೆಗೆ ತಿರಾಪ್ ಜಿಲ್ಲಾ ಧಿಕಾರಿ ಡಾ. ಕಮಲೇಶ್ ಕುಮಾರ್ ಜೋಶಿ ಹಾಗೂ ಮತ್ತೊಬ್ಬ ಪೈಲಟ್ ಮೃತದೇಹವೂ ಪತ್ತೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com