ನವದೆಹಲಿ: ಚೊಚ್ಚಲ ಬಾರಿಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿ ಬುಲೆಟ್ ಪ್ರೂಫ್ ಗ್ಲಾಸ್ ಇಲ್ಲದೆಯೇ ಭಾಷಣ ಮಾಡಿ ಎಲ್ಲರನ್ನೂ ದಿಗ್ಭ್ರಮೆ ಹುಟ್ಟಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಬುಲೆಟ್ ಪ್ರೂಫ್ ಗ್ಲಾಸ್ ಇಲ್ಲದೆಯೇ ಭಾಷಣವನ್ನು ಮಾಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
ಪ್ರಧಾನಿ ನರೇಂದ್ರ ಮೋದಿಗೆ ಹಲವಾರು ಜೀವ ಬೆದರಿಕೆ ಬಂದಿದ್ದು ಬುಲೆಟ್ ಪ್ರೂಫ್ ಗ್ಲಾಸ್ ಇಲ್ಲದೇ ಭಾಷಣ ಮಾಡುವುದು ಅವರ ಪ್ರಾಣಕ್ಕೆ ಅಪಾಯ ತರಬಹುದು. ಹೀಗಾಗಿ ಈ ಬಾರಿ ಬುಲೆಟ್ ಪ್ರೂಫ್ ಗ್ಲಾಸ್ ಬಳಸಲು ಭದ್ರತಾ ಸಂಸ್ಥೆ ಸಲಹೆ ನೀಡಿದೆ. ಈ ಬಾರಿ ಮೋದಿ ಅವರು ಏನು ಮಾಡುತ್ತಾರೆ ಎಂಬುದು ಕಾದು ನೋಡಬೇಕಿದೆ.
ಕಳೆದ ಬಾರಿ ಭದ್ರತಾ ಪಡೆಯ ಸಲಹೆಯನ್ನು ಕಡೆಗಣಿಸಿ ಪ್ರಧಾನಿ ಮೋದಿಯ ಬುಲೆಟ್ ಪ್ರೂಫ್ ಗ್ಲಾಸ್'ನ್ನು ತೆಗೆಯುವಂತೆ ಆದೇಶ ನೀಡಿದ್ದರು. ಹೀಗಾಗಿ ಭಾಷಣ ಮಾಡುವ ಕೆಲ ಗಂಟೆಗಳ ಮೊದಲೇ ಬುಲೆಟ್ ಪ್ರೂಫ್ ಗ್ಲಾಸ್ ನ್ನು ತೆಗೆದಿರಿಸಲಾಗಿತ್ತು.