ದೇಶ
ಎಫ್ಟಿಐಐ ವಿವಾದ: ಮೂರು ಸದಸ್ಯರ ತಂಡ ಪುಣೆಗೆ ರವಾನೆ
ಎಫ್ಟಿಐಐ ನಿರ್ದೇಶಕ ಗಜೇಂದ್ರ ಚೌಹಾಣ್ ನೇಮಕ ವಿವಾದ ಇದೀಗ ತಾರಕ್ಕೇರಿದ್ದು, ವಿವಾದ ಇತ್ಯರ್ಥಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರವು ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ ಮೂರು ಸದಸ್ಯರ ತಂಡವೊಂದನ್ನು ಗುರುವಾರ ನೇಮಕ ಮಾಡಿದೆ...
ನವದೆಹಲಿ: ಎಫ್ಟಿಐಐ ನಿರ್ದೇಶಕ ಗಜೇಂದ್ರ ಚೌಹಾಣ್ ನೇಮಕ ವಿವಾದ ಇದೀಗ ತಾರಕ್ಕೇರಿದ್ದು, ವಿವಾದ ಇತ್ಯರ್ಥಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರವು ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ ಮೂರು ಸದಸ್ಯರ ತಂಡವೊಂದನ್ನು ಗುರುವಾರ ನೇಮಕ ಮಾಡಿದೆ.
ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮೂರು ಸದಸ್ಯರ ತಂಡದಲ್ಲಿ ಎಸ್.ಎಂ.ಖಾನ್, ಅನ್ಶುಲ್ ಸಿನ್ಹಾ ಮತ್ತು ಎಸ್.ನಗ್ನಾಥನ್ ಅವರಿದ್ದು, ಈಗಾಗಲೇ ಮೂರು ಸದಸ್ಯರ ತಂಡ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ಶಿಕ್ಷಣಕ್ಕೆ ಭೇಟಿ ನೀಡಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಧಿಕಾರಿಯೊಬ್ಬರು, ವಿವಾದವನ್ನು ಕೊನೆಗೊಳಿಸಲು ತಯಾರಿದೆ. ಈ ಕುರಿತಂತೆ ಬಹಿರಂಗ ಚರ್ಚೆ ನಡೆಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.