ಗೋವಾ ಪ್ರವೇಶಿಸದಂತೆ ಬಾಂಬೆ ಹೈಕೋರ್ಟ್ ನ ಗೋವಾ ಪೀಠ ನೀಡಿದ್ದ ಆದೇಶವನ್ನು ರದ್ದು ಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಮುತಾಲಿಕ್ಗೆ ತೀವ್ರ ಹಿನ್ನಡೆಯಾಗಿದೆ. ಅಷ್ಟೇ ಅಲ್ಲ, ಮುಖ್ಯ ನ್ಯಾ. ಎಚ್.ಎಲ್ .ದತ್ತು ಮತ್ತು ನ್ಯಾ.ಅಮಿತಾವಾ ರಾಯ್ ನೇತೃತ್ವದ ಪೀಠ, ಶಾಂತಿ ಕಾಪಾಡುವ ದೃಷ್ಟಿಯಿಂದ ಗೋವಾ ನ್ಯಾಯಪೀಠ ಈ ಆದೇಶ ನೀಡಿದೆ ಎಂದು ಹೇಳಿದೆ. ಈ ಮೂಲಕ ಬಾಂಬೆ ಹೈಕೋರ್ಟ್ನ ಆದೇಶ ರದ್ದು ಮಾಡಬೇಕೆಂಬ ಪ್ರಮೋದ್ ಮುತಾಲಿಕ್ ಮನವಿಯನ್ನು ತಿರಸ್ಕರಿಸಿದೆ.