ಮುತಾಲಿಕ್‍ಗೆ ಸುಪ್ರೀಂ ಚಾಟಿ

ಗೋವಾ ಜನರು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ನೀವೇನು ಮಾಡುತ್ತಿರಿ? ಸುಮ್ಮನೆ ನೈತಿಕ ಪೊಲೀಸ್‍ಗಿರಿ ಮಾಡುತ್ತೀರಿ...
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್
Updated on
ನವದೆಹಲಿ: 'ಗೋವಾ ಜನರು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ನೀವೇನು ಮಾಡುತ್ತಿರಿ? ಸುಮ್ಮನೆ ನೈತಿಕ ಪೊಲೀಸ್‍ಗಿರಿ ಮಾಡುತ್ತೀರಿ. 
ಪಬ್‍ಗಳಿಗೆ ನುಗ್ಗಿ ನೀವು (ಶ್ರೀರಾಮ ಸೇನೆ ಕಾರ್ಯ- ಕರ್ತರು) ಯುವಕ-ಯುವತಿಯರನ್ನು ಥಳಿಸುತ್ತೀರಿ. ಸದ್ಯಕ್ಕೆ ನಿಮ್ಮ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ. ಆರು ತಿಂಗಳ ನಂತರ ಬನ್ನಿ ಪರಿಶೀಲಿಸೋಣ''. ಇದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಪರಿ.
ಗೋವಾ ಪ್ರವೇಶಿಸದಂತೆ ಬಾಂಬೆ ಹೈಕೋರ್ಟ್ ನ ಗೋವಾ ಪೀಠ ನೀಡಿದ್ದ ಆದೇಶವನ್ನು ರದ್ದು ಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಮುತಾಲಿಕ್‍ಗೆ ತೀವ್ರ ಹಿನ್ನಡೆಯಾಗಿದೆ. ಅಷ್ಟೇ ಅಲ್ಲ, ಮುಖ್ಯ ನ್ಯಾ. ಎಚ್.ಎಲ್ .ದತ್ತು ಮತ್ತು ನ್ಯಾ.ಅಮಿತಾವಾ ರಾಯ್ ನೇತೃತ್ವದ ಪೀಠ, ಶಾಂತಿ ಕಾಪಾಡುವ ದೃಷ್ಟಿಯಿಂದ ಗೋವಾ ನ್ಯಾಯಪೀಠ ಈ ಆದೇಶ ನೀಡಿದೆ ಎಂದು ಹೇಳಿದೆ. ಈ ಮೂಲಕ ಬಾಂಬೆ ಹೈಕೋರ್ಟ್‍ನ ಆದೇಶ ರದ್ದು ಮಾಡಬೇಕೆಂಬ ಪ್ರಮೋದ್ ಮುತಾಲಿಕ್ ಮನವಿಯನ್ನು ತಿರಸ್ಕರಿಸಿದೆ. 
ಹಿನ್ನೆಲೆ ಏನು?: ಉತ್ತರ ಮತ್ತು ದಕ್ಷಿಣ ಗೋವಾ ಜಿಲ್ಲಾಡಳಿತ ಕಳೆದ ವರ್ಷದ ಆ.19ರಂದು ಶ್ರೀರಾಮ ಸೇನೆ ಕಾರ್ಯಕರ್ತರು 2 ತಿಂಗಳು ಪ್ರಮೋದ್ ಮುತಾಲಿಕ್ ಮತ್ತು ಅವರ ಸಂಘಟನೆಯಾಗಿರುವ ಶ್ರೀರಾಮ ಸೇನೆ ಸದಸ್ಯರು ಗೋವಾ ಪ್ರವೇಶಿಸದಂತೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com