ಭೂಗತ ಪಾತಕಿ ದಾವೂದ್ ಗಿಂತಲೂ ಅಜಂ ಖಾನ್ ಭಾರೀ ಡೇಂಜರ್: ಶಿವಸೇನೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂಗಿಂತಲೂ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಭಾರೀ ಅಪಾಯಕಾರಿ ವ್ಯಕ್ತಿಯೆಂದು ಶಿವಸೇನೆ ಮಂಗಳವಾರ ಹೇಳಿದೆ...
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ (ಸಂಗ್ರಹ ಚಿತ್ರ)
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ (ಸಂಗ್ರಹ ಚಿತ್ರ)

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗಿಂತಲೂ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಭಾರೀ ಅಪಾಯಕಾರಿ ವ್ಯಕ್ತಿಯೆಂದು ಶಿವಸೇನೆ ಮಂಗಳವಾರ ಹೇಳಿದೆ.

ಈ ಕುರಿತಂತೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದುಕೊಂಡಿರುವ ಶಿವಸೇನೆಯು, ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗಿಂತಲೂ ಉತ್ತರ ಪ್ರದೇಶದ ಸಚಿವ ಅಜಂ ಖಾನ್ ಭಾರೀ ಅಪಾಯಕಾರಿ ವ್ಯಕ್ತಿಯೆಂದು ಹೇಳಿಕೊಂಡಿದೆ. ಅಲ್ಲದೆ,  ದಾದ್ರಿ ಪ್ರಕರಣ ಸಂಬಂಧ ನ್ಯಾಯಕ್ಕಾಗಿ ವಿಶ್ವಸಂಸ್ಥೆಗೆ ಅಜಂಖಾನ್ ಪತ್ರ ಬರೆದಿರುವುದನ್ನು ಶಿವಸೇನೆ ಕಟುವಾಗಿ ಟೀಕಿಸಿದೆ.

ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಲಾಗುತ್ತಿದ್ದು, ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ. ಆರ್ಎಸ್ಎಸ್ ಸಂಘಟನೆ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದೆ ಎಂದು ಅಜಂ ಖಾನ್ ಅವರು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು.

ಇದಲ್ಲದೇ, ಮೂರು ದಿನಗಳ ಹಿಂದಷ್ಟೇ ಬಾಬ್ರಿ ಮಸೀದಿ ಧ್ವಂಸ'ದ 23ನೇ ವರ್ಷಾಚರಣೆ ಅಂಗವಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅಜಂ ಖಾನ್ ಅವರು, ಶಿವಸೇನೆ ತಾಜ್ ಮಹಲನ್ನು ಕೆಡವಿ ನೆಲ ಸಮ ಮಾಡಿ ಶಿವನ ದೇಗುಲ ಕಟ್ಟಲು ಮುಂದಾದರೆ ಅದಕ್ಕೆ ನಾವು ನೆರವು ನೀಡುತ್ತೇವೆಂದು ವ್ಯಂಗ್ಯವಾಡಿದ್ದರು.

ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಶಿವಸೇನೆ ಇದೀಗ ಅಜಂಖಾನ್ ವಿರುದ್ಧ ಕಿಡಿಕಾರಿದ್ದು, ದಾವೂದ್ ಗಿಂತಲೂ ಅಜಂಖಾನ್ ಅಪಾಯಕಾರಿ ವ್ಯಕ್ತಿಯೆಂದು ತನ್ನ ಮುಖವಾಣಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com