ಮುಂಬೈ: ಕಲಾವಿದೆ ಹೇಮಾ ಉಪಾಧ್ಯಾಯ, ಆಕೆಯ ವಕೀಲ ಹರೀಶ್ ಭಂಭಾನಿ ಜೋಡಿಕೊಲೆ ಪ್ರಕರಣದ ಅಪರಾಧಿ ಪತ್ತೆಯಾಗಿಯೇ ಬಿಟ್ಟ ಅನಿಸುತ್ತಿದ್ದಂತೆಯೇ ಮತ್ತಷ್ಟು ಕಗ್ಗಂಟಾಗಿದೆ.
ಈಗಾಗಲೇ ಟ್ರಕ್ ಡ್ರೈವರ್, ಇಬ್ಬರು ವೇರ್ ಹೌಸ್ ನೌಕರರು, ಸಾಧು ರಾಜ್ಭರ್ ಈ ನಾಲ್ವರನ್ನು ಬಂಧಿಸಿದ್ದರೂ ಇನ್ನೂ ಮೂವರನ್ನು ಶಂಕಿತರೆಂದು ಗುರುತಿಸಲಾಗಿದೆ. ಕಲಾಕೃತಿಗಳ ರು.5ಲಕ್ಷ ವಿಷಯ ದಲ್ಲಿ ಹೇಮಾ ಮತ್ತು ಗೋದಾಮು ಮಾಲೀಕ ವಿದ್ಯಾಧರ್ ರಾಜ್ಭಾರ್ ನಡುವೆ ಜಗಳವಾದದ್ದು, ಕೊಲೆಯಾಗುವ ದಿನ ಸಂಜೆ 6.30ಗೆ ಗೋಟು ಹೇಮಾಗೆ ಮಾಡಿದ್ದೇ ಕೊನೆಯ ಫೋನ್ ಕರೆ ಆಗಿರುವುದು ಅನುಮಾನಕ್ಕೆ ಪುಷ್ಟಿ ನೀಡಿದೆ. ಗೋಟು ಎಲ್ಲಿದ್ದಾನೆಂದು ಇನ್ನೂ ಪತ್ತೆಯಾಗಿಲ್ಲ.
Advertisement