ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪೀಠ, ಐವರ ಪಟ್ಟಿ ಕೊಡಿ, ಮುಂದೇನು ಮಾಡಬೇಕು ಹಾಗೂ ತನ್ನ ಆದೇಶವನ್ನು ಹೇಗೆ ಜಾರಿಗೆ ತರಬೇಕೆಂಬುದು ನಮಗೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿತ್ತು. 2 ದಿನಗಳ ಹಿಂದೆ ಲೋಕಾಯುಕ್ತ ನೇಮಕ ಕುರಿತ ತನ್ನ ಆದೇಶ ಪಾಲಿಸದ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದ ಸುಪ್ರೀಂ, ನೇಮಕಾಧಿಕಾರ ಹೊಂದಿರುವವರು ತಮ್ಮದೇ ಆದ ಹಿತಾಸಕ್ತಿ ಹೊಂದಿರುವಂತಿದೆ ಎಂದು ನೇರವಾಗಿ ಪ್ರಹಾರ ನಡೆಸಿತು.