ಅಡ್ವಾಣಿ ಹವಾಲಾ ಕೇಸು ಗೆದ್ದಿದ್ದು ನನ್ನಿಂದಲೇ: ಜೇಠ್ಮಲಾನಿ

ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಹವಾಲಾ ಕೇಸು ಗೆಲ್ಲಲು ನಾನೇ ಕಾರಣ ಎಂದು ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಹೇಳಿದ್ದಾರೆ. ಅದೇ ವೇಳೆ ದೆಹಲಿ...
ರಾಮ್ ಜೇಠ್ಮಲಾನಿ
ರಾಮ್ ಜೇಠ್ಮಲಾನಿ
ನವದೆಹಲಿ:  ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಹವಾಲಾ ಕೇಸು ಗೆಲ್ಲಲು ನಾನೇ ಕಾರಣ ಎಂದು ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಹೇಳಿದ್ದಾರೆ. ಅದೇ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಅರುಣ್ ಜೇಟ್ಲಿ ವಿರುದ್ಧ ನಾನೇ ವಾದಿಸಲಿದ್ದೇನೆ ಎಂದು ಜೇಠ್ಮಲಾನಿ ನುಡಿದಿದ್ದಾರೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅರುಣ್ ಜೇಟ್ಲಿಗೆ ಪ್ರಧಾನಿ ನರೇಂದ್ರ ಮೋದಿ ಬೆಂಬಲ ಸೂಚಿಸಿದ್ದರು. ಎಲ್‌ಕೆ ಅಡ್ವಾಣಿ ಹವಾಲಾ ಕೇಸು ಗೆದ್ದ ರೀತಿಯೇ ಈ ಬಾರಿ ಅರುಣ್ ಜೇಟ್ಲಿಯೂ ಭ್ರಷ್ಟಾಚಾರ ಆರೋಪಗಳಿಂದ ಮುಕ್ತರಾಗಿ ಬರುತ್ತಾರೆ ಎಂದು ಮೋದಿ ಸಂಸದೀಯ ಸಭೆಯಲ್ಲಿ ಹೇಳಿದ್ದರು.
ಮೋದಿಯವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜೇಠ್ಮಲಾನಿ, ಅಡ್ವಾಣಿಯವರ ಪರ ವಾದಿಸಿದ್ದು ನಾನು. ಆದರೆ ಈ ಬಾರಿ ಜೇಟ್ಲಿ ವಿರುದ್ದ ನಾನು ವಾದಿಸುತ್ತೇನೆ. ನನಗೆ ಜೇಟ್ಲಿ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಈ ಕೇಸಿನಿಂದ ದೂರವಿರಬೇಕು ಎಂದು ಬಿಜೆಪಿಯಿಂದ ಒತ್ತಡವಿದೆಯೇ? ಎಂದು ಪತ್ರಕರ್ತರು ಕೇಳಿದಾಗ, ಬಿಜೆಪಿ ಹೇಳಿದಂತೆ ಕೇಳಲು ನಾನ್ಯಾರು? ಎಂದು ಉತ್ತರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com