ಬರಗಾಲವಿದ್ದರೂ ರು. 7 ಕೋಟಿ ಖರ್ಚು ಮಾಡಿ ತೆಲಂಗಾಣ ಸಿಎಂನಿಂದ ಯಾಗ

ತೆಲಂಗಾಣದಲ್ಲಿ ಕೃಷಿ ನಾಶ ಸಂಭವಿಸಿ ಜನರು ಹಸಿವಿನಿಂದ ಕಂಗೆಟ್ಟಿದ್ದರೂ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ರು. 7 ಕೋಟಿ ...
ಚಂದ್ರಶೇಖರ್ ರಾವ್
ಚಂದ್ರಶೇಖರ್ ರಾವ್
Updated on
ಹೈದ್ರಾಬಾದ್: ತೆಲಂಗಾಣದಲ್ಲಿ ಕೃಷಿ ನಾಶ ಸಂಭವಿಸಿ ಜನರು ಹಸಿವಿನಿಂದ ಕಂಗೆಟ್ಟಿದ್ದರೂ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ರು. 7 ಕೋಟಿ ವ್ಯಯಿಸಿ ಯಾಗ ಮಾಡುತ್ತಿದ್ದಾರೆ.
ಮೇಡಕ್ ಜಿಲ್ಲೆಯ ಎರವೆಳ್ಳಿಯಲ್ಲಿರುವ ಮುಖ್ಯಮಂತ್ರಿಯವರ ಫಾರ್ಮ್‌ಹೌಸ್ ನಲ್ಲಿ ಈ ಯಾಗ ನಡೆಯುತ್ತಿದೆ. ಈ ಯಾಗಕ್ಕೆ ರು. 7 ಕೋಟಿಯನ್ನು ವ್ಯಯಿಸುತ್ತಿದ್ದು, ಇದು ಸರ್ಕಾರದ ದುಡ್ಡಲ್ಲ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಈ ಯಾಗದಲ್ಲಿ  1500 ಪೂಜಾರಿಗಳು ಭಾಗವಹಿಸುತ್ತಿದ್ದು, ರಾಷ್ಟ್ರಪತಿ  ಪ್ರಣಬ್ ಮುಖರ್ಜಿ ಕೂಡಾ ಯಾಗದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟು 50,00 ಮಂದಿ ಈ ಯಾಗದಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಲ್ಲೆಡೆ ಟೀಕೆ: ರಾಜ್ಯದಲಿ  ಕೃಷಿ ನಾಶ ಸಂಭವಿಸಿ ಕಂಗೆಟ್ಟಿರುವಾಗ ಮುಖ್ಯಮಂತ್ರಿಯವರು ಯಾಗ ನಡೆಸುವುದನ್ನು ಕೃಷಿಕರು ಟೀಕಿಸಿದ್ದಾರೆ.
ಈ ಹಿಂದೆ ಚಂದ್ರಶೇಖರ ರಾವ್ ರು. 5 ಕೋಟಿ ಬಸ್ ಖರೀದಿಸಿದ್ದು ವಿವಾದವಾಗಿತ್ತು. ಬೆಡ್ ರೂಂ, ರೆಸ್ಟ್ ರೂಂ, ಮೀಟಿಂಗ್ ಹಾಲ್, ಇಂಟರ್‌ನೆಟ್ ಸೌಲಭ್ಯ ಮೊದಲಾದ ಸೌಕರ್ಯವಿರುವ ಬುಲೆಟ್ ಪ್ರೂಫ್ ಬಸ್ ನ್ನು ಸರ್ಕಾರ ಮುಖ್ಯಮಂತ್ರಿಯವರಿಗಾಗಿ ಖರೀದಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com