ನವದೆಹಲಿ: ಟಾಟಾ ರಿಯಾಲಿಟಿ ಮತ್ತು ಯುನಿಟೆಕ್ ನಡುವಿನ 2ಜಿ ಸ್ಪೆಕ್ಟ್ರಂಗೆ ಸಂಬಂಧಿಸಿ ನಡೆದಿರುವ ಭೂ ಖರೀದಿ ಒಪ್ಪಂದ ಕುರಿತು ಮರು ತನಿಖೆ ಕೈಗೊಂಡಿದ್ದ ಸಿಬಿಐ ಇದೀಗ ಯಾವುದೇ ಪುರಾವೆ ಸಿಗದ ಕಾರಣ ಪ್ರಕರಣವನ್ನು ಕೈ ಬಿಡಲು ಚಿಂತನೆ ನಡೆಸಿದೆ.
ಭೂ ಖರೀದಿಯಿಂದ ಬಂದ ವ್ಯವಹೈರದ 1700 ಕೋಟಿಯನ್ನು 2ಜಿ ತರಂಗಾಂತರ ಕೊಳ್ಳಲು ಬಳಸಲಾಗಿತ್ತು ಎಂಬ ಆರೋಪ ಟಾಟಾ ರಿಯಾಲಿಟಿ ಮತ್ತು ಯುನಿಟೆಕ್ ಮೇಲೆತ್ತು. ಈ ಹಿಂದಿನ ನಿರ್ದೇಶಕ ರಂಜಿತ್ ಸಿನ್ಹಾ ಅವರು ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು.
ಆದರೆ, ಅವರ ಅಧಿಕಾರಾವಧಿ ಮುಗಿದ ನಂತರ ಪ್ರಕರಣದ ತನಿಕೆ ಅರ್ಧದಲ್ಲೇ ನಿಂತಿತ್ತು. ಒಪ್ಪಂದದದಲ್ಲಿ ಹಗರಣ ನಡೆದಿದೆ ಎನ್ನುವುದಕ್ಕೆ ಸೂಕ್ತ ಪುರಾವೆ ಸಿಗದ ಕಾರಣ ಪ್ರಕರಣ ಕೈಬಿಡಲು ಸಿಬಿಐ ಯೋಚಿಸುತ್ತಿದೆ.
Advertisement