ಕನ್ನಡ ಖ್ಯಾತ ಕಾದಂಬರಿಗಾರ ಭೈರಪ್ಪ ಅವರಿಗೆ ಪದ್ಮ ಪ್ರಶಸ್ತಿ?

ಕನ್ನಡದ ಖ್ಯಾತ ಲೇಖಕ, ಪ್ರತಿಷ್ಠಿತ ಸರಸ್ವತಿ...
ಎಸ್.ಎಸ್  ಭೈರಪ್ಪ
ಎಸ್.ಎಸ್ ಭೈರಪ್ಪ

ನವದೆಹಲಿ: ಕನ್ನಡದ ಖ್ಯಾತ ಲೇಖಕ, ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಸ್. ಭೈರಪ್ಪ ಅವರ ಹೆಸರನ್ನು ಪದ್ಮವಿಭೂಷಣ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಸದ್ಯದಲ್ಲೇ ಪದ್ಮಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಭೈರಪ್ಪ ಅವರ ಹೆಸರನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಇವರ ಜತೆಗೆ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಅವರ ಹೆಸರೂ ಪದ್ಮ ಪ್ರಶಸ್ತಿಗೆ ಶಿಫಾರಸುಗೊಂಡ ಪಟ್ಟಿಯಲ್ಲಿದೆ ಎನ್ನಲಾಗಿದೆ. ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಹಾಗೂ ಪದ್ಮಪ್ರಶಸ್ತಿಗಳನ್ನು ಜ. 26 ರಂದು ಪ್ರದಾನ ಮಾಡಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com