ನವದೆಹಲಿ: ದುಷ್ಕರ್ಮಿಗಳ ಗುಂಪೊಂದು ದೆಹಲಿಯ ಚರ್ಚ್ ಮೇಲೆ ದಾಳಿ ನಡೆಸಿ, ಕಟ್ಟಡ ಹಾಗೂ ಚರ್ಚ್ನ್ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಬೆಳಗಿನ ಸುಮಾರು 4 ಗಂಟೆಯ ವೇಳೆಗೆ ಸ್ಕೂಟರ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಚರ್ಚ್ ಕಟ್ಟಗಳಿಗೆ ಹಾನಿ ಮಾಡಿದ್ದರಲ್ಲದೆ, ಚರ್ಚ್ನೊಳಗಿದ್ದ ಮೇರಿ ಮಾತೆಯ ಪುತ್ಥಳಿಯನ್ನು ನೆಲಕ್ಕೆ ಕೆಡವಿ ಹಾನಿಗೊಳಿಸಿ ದಷ್ಕೃತ್ಯವೆಸಗಿದ್ದಾರೆ.
ದೆಹಲಿಯ ವಿಕಾಸಪುರಿಯ ಅವರ್ ಲೇಡಿ ಆಫ್ ಗ್ರೇಸಸ್ ಚರ್ಚ್ ಮೇಲೆ ದಾಳಿ ನಡೆದಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.
ಚರ್ಚ್ ಮೇಲೆ ನಡೆದಿರುವ ದಾಳಿಯ ದೃಶ್ಯಾವಳಿಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಕ್ಯಾಮೆರ ಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಸಿಟಿವಿ ದೃಶ್ಯಗಳಲ್ಲಿ ದಾಳಿಕೋರರ ಸುಳಿವು ಸಿಕ್ಕಿದ್ದು, ಅವರನ್ನು ಅತಿ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದರು.
ಇತ್ತೀಚೆಗಷ್ಟೇ ದೆಹಲಿಯ ಎರಡು ಚರ್ಚ್ಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಚರ್ಚ್ಗಳ ಮೇಲೆ ಪದೆ ಪದೆ ದಾಳಿ ನಡೆಯುತ್ತಿರುವುದು, ಕ್ರೈಸ್ತರಲ್ಲಿ ಆತಂಕಮೂಡಿಸಿದೆ.
Advertisement