ಅರುಣಾಚಲ ಪ್ರದೇಶ ಭಾರತಕ್ಕೆ ಸೇರಿದ್ದು: ಜಪಾನ್ ವಿರುದ್ಧ ಚೀನಾ ಕೆಂಡಾಮಂಡಲ

ಅರುಣಾಚಲ ಪ್ರದೇಶವು ಭಾರತದ ಭಾಗ ಎಂದು ಹೇಳಿದ್ದರಿಂದ ಚೀನಾ ಜಪಾನ್ ವಿರುದ್ಧ ಕೆಂಡಾಮಂಡಲ...
ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶ
Updated on

ನವದೆಹಲಿ: ಅರುಣಾಚಲ ಪ್ರದೇಶವು ಭಾರತದ ಭಾಗ ಎಂದು ಹೇಳಿದ್ದರಿಂದ ಚೀನಾ ಜಪಾನ್ ವಿರುದ್ಧ ಕೆಂಡಾಮಂಡಲವಾಗಿದೆ.

ಕಳೆದ ವಾರ ಭಾರತಕ್ಕೆ ಆಗಮಿಸಿದ್ದ ಜಪಾನ್ ವಿದೇಶಾಂಗ ಸಚಿವ ಫುಮಿಯೋ ಕಿಷಿದಿ ಅವರು ಇಂಡೋ-ಚೀನಾ ಗಡಿರಾಜ್ಯ ಅರುಣಾಚಲ ಪ್ರದೇಶ ಭಾರತದ ಭಾಗವಾಗಿದೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಇದೀಗ ಜಪಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಗಡಿ ರಾಜ್ಯ ಅರುಣಾಚಲ ಪ್ರದೇಶ ತನಗೇ ಸೇರಬೇಕು ಎಂದು ಮೊಂಡುವಾದ ಮಾಡುತ್ತಿರುವ ಚೀನಾ ಈ ಬಗ್ಗೆ ರಾಜತಾಂತ್ರಿಕ ಪ್ರತಿಭಟನೆಗೆ ಮುಂದಾಗಿದೆ. ಈಗಾಗಲೇ ಜಪಾನ್ ರಾಯಭಾರ ಕಚೇರಿಗೆ ತನ್ನ ಪ್ರತಿಭಟನಾ ಪತ್ರವನ್ನು ರವಾನಿಸಿರುವ ಚೀನಾ ಜಪಾನ್ ವಿದೇಶಾಂಗ ಸಚಿವರ ಸ್ಪಷ್ಟನೆ ಕೇಳಿದೆ. 'ಜಪಾನ್ ಸಚಿವರ ಹೇಳಿಕೆ ಗಂಭೀರವಾಗಿದ್ದು, ಅವರು ಯಾವ ಅರ್ಥದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಜಪಾನ್ ಹೇಳಿಕೆಯನ್ನು ನಾವು ವಿರೋಧಿಸುತ್ತೇವೆ' ಎಂದು ಬೀಜಿಂಗ್ ತನ್ನ ಪ್ರತಿಭಟನಾ ಪತ್ರದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com