'ಕಾಮನ್ ಮ್ಯಾನ್‌'ಗೆ ಅಂತಿಮ ವಿದಾಯ

ಸೋಮವಾರ ನಿಧನರಾದ ಖ್ಯಾತ ವ್ಯಂಗ್ಯಚಿತ್ರಕಾರ ಆರ್‌ಕೆ ಲಕ್ಷ್ಮಣ್ ಅವರ ಅಂತಿಮ ವಿಧಿವಿಧಾನ ಪುಣೆಯಲ್ಲಿ ನೆರವೇರಿತು.
ವೈಕುಂಠ ವಿದ್ಯುತ್ ಚಿತಾಗಾರದಲ್ಲಿ ಆರ್‌ಕೆ ಲಕ್ಷ್ಮಣ್ ಅಂತ್ಯಸಂಸ್ಕಾರ (ಸಂಗ್ರಹ ಚಿತ್ರ)
ವೈಕುಂಠ ವಿದ್ಯುತ್ ಚಿತಾಗಾರದಲ್ಲಿ ಆರ್‌ಕೆ ಲಕ್ಷ್ಮಣ್ ಅಂತ್ಯಸಂಸ್ಕಾರ (ಸಂಗ್ರಹ ಚಿತ್ರ)
Updated on

ಪುಣೆ: ಸೋಮವಾರ ನಿಧನರಾದ ಖ್ಯಾತ ವ್ಯಂಗ್ಯಚಿತ್ರಕಾರ ಆರ್‌ಕೆ ಲಕ್ಷ್ಮಣ್ ಅವರ ಅಂತಿಮ ವಿಧಿವಿಧಾನ ಪುಣೆಯಲ್ಲಿ ನೆರವೇರಿತು.

ಪುಣೆಯ ವೈಕುಂಠ ವಿದ್ಯುತ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಆರ್‌ಕೆ ಲಕ್ಷ್ಮಣ್ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಈ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಅವರ ಸಂಪುಟದ ಕೆಲ ಸಚಿವರು, ಶಿವಸೇನೆ ಮುಖಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತ್ ಮುಖ್ಯಸ್ಥ ರಾಜ್‌ಠಾಕ್ರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಆರ್‌ಕೆ ಲಕ್ಷ್ಮಣ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೈಸೂರು ಮೂಲದವರಾದ ಖ್ಯಾತ ವ್ಯಂಗ್ಯಚಿತ್ರಕಾರ ಆರ್‌ಕೆ ಲಕ್ಷ್ಮಣ್ ಅವರು ಕಳೆದ ಕೆಲ ವರ್ಷಗಳಿಂದ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಆರ್‌ಕೆ ಲಕ್ಷ್ಮಣ ಅವರ ನಿಧನಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ದೇಶದ ವಿವಿಧ ಗಣ್ಯರು ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com