ರಾಳೇಗಣ ಸಿದ್ದಿ: ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿಲ್ಲ. ಹಾಗಾಗಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧವೂ ಶೀಘ್ರದಲ್ಲೇ ಹೊಸ ಆಂದೋಲನ ಆರಂಭಿಸುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಘೋಷಿಸಿದ್ದಾರೆ.
ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳಾಯಿತು. ಆದರೆ, ಈ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಆದ್ಯತೆನೀಡುತ್ತಿಲ್ಲ. ಲೋಕಪಾಲ ಕಾನೂನು
ವಿಚಾರದಲ್ಲೂ ಯಾವುದೇ ಪ್ರಗತಿಯಾಗಿಲ್ಲ.ಹೀಗಾಗಿ ನಾವು ಸದ್ಯದಲ್ಲೇ ಮತ್ತೊಂದುಚಳವಳಿಯನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದು 77 ವರ್ಷದ ಗಾಂಧಿವಾದಿ ಹೇಳಿದ್ದಾರೆ.
Advertisement